ನಟಿ , ಸಂಸದೆ ನುಸ್ರತ್ ಗರ್ಭಿಣಿ – ಮಗುವಿನ ತಂದೆ ನಾನಾಲ್ಲ ಎಂದ ಪತಿ – ಬೀದಿಗೆ ಬಂದ ಮದುವೆ ರಂಪಾಟ…!
ಕೊಲ್ಕತ್ತಾ : ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ಮದುವೆ ರಂಪಾಟ ಇದೀಗ ಬೀದಿಗೆ ಬಂದಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ನಿಖಿಲ್ ಜೈನ್ ಎಂಬುವರ ಜೊತೆ ಟರ್ಕಿಯಲ್ಲಿ ಮದುವೆಯಾಗಿದ್ದ ನಟಿ ಕಮ್ ಸಂಸದೆ ನುಸ್ರುತ್ ಈಗ ಪತಿಯಿಂದ ದೂರ ಆಗಿದ್ದಾರೆ.
ಅಲ್ಲದೇ ಆ ಮದುವೆ ಮದುವೆಯೇ ಅಲ್ಲ ಎಂದಿದ್ದಾರೆ.. ಹೌದು ಆ ಮದುವೆ ಕಾನೂನುಬದ್ಧವಲ್ಲ ಎಂದಿರುವ ನುಸ್ರುತ್, ನಿಖಿಲ್ ವಿರುದ್ಧ ಸಾಲು-ಸಾಲು ಆರೋಪಗಳನ್ನು ಮಾಡಿದ್ದಾರೆ. ಪ್ರತಿಯಾಗಿ ನಿಖಿಲ್ ಕೂಡ ನುಸ್ರುತ್ ವಿರುದ್ಧ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ನುಸ್ರುತ್ ಮದುವೆಯ ಫೋಟೋಗಳನ್ನು ಸಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ. ಮದುವೆ ಫೋಟೋ ಮಾತ್ರವಲ್ಲದೇ ಪತಿ ನಿಖಿಲ್ ಜೊತೆಗಿದ್ದ ಪ್ರತಿಯೊಂದು ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಿಂದ ತೆಗೆದುಹಾಕಿದ್ದಾರೆ.
ಬೆಂಗಾಲಿ ಸಿನಿಮಾಗಳ ನಟಿ ನುಸ್ರತ್ ಜಹಾನ್ ಹಾಗೂ ಉದ್ಯಮಿ ನಿಖಿಲ್ ಜೈನ್ 2019 ರಲ್ಲಿ ಟರ್ಕಿ ದೇಶದಲ್ಲಿ ವಿವಾಹವಾಗಿದ್ದರು. ಆದರೆ ಅದನ್ನು ಭಾರತದಲ್ಲಿ ನೊಂದಾವಣೆ ಮಾಡಿಸಿರಲಿಲ್ಲ. ಆದರೆ ಇಬ್ಬರೂ ಕೆಲ ವರ್ಷ ಒಟ್ಟಿಗೆ ಇದ್ದರು. ಆದರೆ ಕೆಲವು ತಿಂಗಳಿನಿಂದ ಇಬ್ಬರೂ ಬೇರೆಯಾಗಿದ್ದು, ಇದೀಗ ಪರಸ್ಪರ ಾರೋಪ ಪ್ರತ್ಯಾರೋಪಗಳನ್ನ ಮಾಡುತ್ತಿದ್ದಾರೆ.
ಅಲ್ಲದೇ ನುಸ್ರತ್ 6 ತಿಂಗಳ ಗರ್ಭಿಣಿ ಎಂಬ ಸುದ್ದಿಹರಿದಾಡುತ್ತಿದೆ. ಅದರೆ ನಿಖಿಲ್ ಜೈನ್ ಆ ಮಗು ನನ್ನದಲ್ಲ ಎಂದಿದ್ದಾರೆ ಎನ್ನಲಾಗಿದೆ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ಶಿಪ್ ಅಷ್ಟೇ ಎಂದಿದ್ದಾರೆ.
ಆದರೆ ಕೆಲ ಮಾಹಿತಿಗಳ ಪ್ರಕಾರ ನುಸ್ರತ್ ಅವರು 6 ತಿಂಗಳ ಗರ್ಭಿಣಿ ಎಂದು ಸುದ್ದಿ ಹರಿದಾಡುತ್ತಿದೆ ಆದರೆ ಇದನ್ನು ಅಧಿಕೃತವಾಗಿ ನುಸ್ರತ್ ಅವರು ಹೇಳಿಕೊಂಡಿಲ್ಲ. ಆದರೆ ನಿಖಿಲ್ ಮಾತ್ರ ಆ ಮಗು ನನ್ನದಲ್ಲ. ನಾವು 6 ತಿಂಗಳಿಂದ ಜೊತೆಯಾಗಿ ಸಂಸಾರ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ನುಸ್ರತ್ ಅವರ ಕುಟುಂಬ ಕಲಹಕ್ಕೆ ಬಿಜೆಪಿ ನಾಯಕ, ಬೆಂಗಾಲಿ ನಟ ಯಶ್ ದಾಸ್ ಗುಪ್ತ ಕಾರಣ ಎಂಬ ವದಂತಿಗಳು ಕೂಡ ಕೇಳಿಬರುತ್ತಿದೆ. ಯಶ್ ದಾಸ್ಗುಪ್ತ ಮತ್ತು ನುಸ್ರತ್ ಬೆಂಗಾಲಿಯ ‘ಒನ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಆ ಬಳಿಕ ಇವರಿಬ್ಬರ ನಡುವೆ ಹೆಚ್ಚಿನ ಸ್ನೇಹ ಬೆಳೆದಿತ್ತು. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಜೊತೆಯಾಗಿರುವ ಹಲವು ಫೋಟೋಗಳು ಹರಿದಾಡುತ್ತಿದೆ. ಹೀಗಾಗಿ ಇವರ ದಾಂಪತ್ಯದಲ್ಲಿ ಬಿರುಕು ಮೂಡಲು ಇದೇ ಕಾರಣ ಎನ್ನಲಾಗ್ತಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.