ಜನತೆಗೆ ನನ್ನ ಮೊದಲ ಧನ್ಯವಾದ : ಶೋಭಾ ಕರಂದ್ಲಾಜೆ Shobha Karandlaje
ಉಡುಪಿ : ಪ್ರಧಾನಿ ನರೇಂದ್ರ ಮೋದಿ ನೂತನ ಸಂಪುಟದಲ್ಲಿ ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸ್ಥಾನ ನೀಡಲಾಗಿದ್ದು, ಈ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ದೆಹಲಿಯಿಂದ ವಿಡಿಯೋ ಬಿಡುಗಡೆ ಮಾಡಿದ್ದು, ಎರಡು ಬಾರಿ ಗೆಲ್ಲಿಸಿದ ಉಡುಪಿ-ಚಿಕ್ಕಮಗಳೂರಿನ ಎಲ್ಲಾ ಜನತೆಗೆ ನನ್ನ ಮೊದಲ ಧನ್ಯವಾದ.
ನೀವು ನನ್ನನ್ನು ಎರಡು ಬಾರಿ ಗೆಲ್ಲಿಸಿದ್ದೀರಿ. ಹೀಗಾಗಿ ಪ್ರಧಾನಿ ಮೋದಿ ಅಮಿತ್ ಶಾ- ನಡ್ಡಾ ನನ್ನನ್ನು ಗುರುತಿಸಿ ಸಚಿವ ಸ್ಥಾನ ನೀಡಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ಮತದಾರ ಆಶೀರ್ವಾದದಿಂದ ಎರಡು ಬಾರಿ ಆಯ್ಕೆಯಾದೆ. ಕಾರ್ಯಕರ್ತರ ಶ್ರಮದಿಂದ ನಾನು ಗೆದ್ದಿದ್ದು, ಇದೀಗ ನಾನು ಸಚಿವೆಯಾಗಿದ್ದೇನೆ.
ಎಲ್ಲಾ ಮತದಾರರು, ಕಾರ್ಯಕರ್ತರು ಸಚಿವೆಯಾಗಿ ಆಯ್ಕೆ ಮಾಡಿದ ಎಲ್ಲಾ ನಾಯಕರಿಗೆ ಧನ್ಯವಾದ ಎಂದು ಶೋಭಾ ಕರಂದ್ಲಾಜೆ ವಿಡಿಯೋ ರಿಲೀಸ್ ಮಾಡಿದ್ದಾರೆ.