ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಸಂಜಯ್‌ ಗುಬ್ಬಿ ಪುಸ್ತಕ ʻಶಾಲೆಗೆ ಬಂದ ಚಿರತೆ ಮತ್ತು ಇತರ ಕತೆಗಳು’ ನೆನಪಿಸಿದ ಬಾಲ್ಯದಲ್ಲಿ ಕಾಡಿದ ಕಾಡು:

Namratha Rao by Namratha Rao
December 27, 2021
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಸಾಹಿತ್ಯ ಸರ್ಕಲ್:

ಸಂಜಯ್‌ ಗುಬ್ಬಿ ಪುಸ್ತಕ ʻಶಾಲೆಗೆ ಬಂದ ಚಿರತೆ ಮತ್ತು ಇತರ ಕತೆಗಳು’ ನೆನಪಿಸಿದ ಬಾಲ್ಯದಲ್ಲಿ ಕಾಡಿದ ಕಾಡು:

ಕೃಪೆ – ಹಿಂದವಿ ಸ್ವರಾಜ್

ದಟ್ಟ ಕಾಡಿನ ನಡುವೆ ಇರುವ ಪುಟ್ಟ ಊರಿನಿಂದ ಬಂದ ನನಗೆ ಕಾಡೇ ಮರೆತು ಹೋಗುವಷ್ಟು ವರ್ಷಗಳಾದವು. ಇದೊಂದು ಪುಸ್ತಕ ಮತ್ತೆ ಬಾಲ್ಯಕ್ಕೆ ನನ್ನನ್ನು ಕರೆದುಕೊಂಡು ಹೋಯಿತು. ಆದರೆ ಬಾಲ್ಯಕಾಲದಲ್ಲಿ ನಮ್ಮೂರಿನ ಅನುಭವದಲ್ಲಿ ಕಾಡುಪ್ರಾಣಿಗಳೆಂದರೆ ಮನುಷ್ಯರು ಬೇಟೆಯಾಡಲು ಇರುವ ಸರಕುಗಳು ಎಂಬುದಷ್ಟೇ ನಮ್ಮ ಅರಿವಾಗಿತ್ತು. ಅದರಾಚೆಗೆ ಆ ಪ್ರಾಣಿಗಳಲ್ಲಿರುವ ಸೂಕ್ಷ್ಮ ಮನಸ್ಸು, ಅವುಗಳ ಆವಾಸಸ್ಥಾನದ ಮಿತಿಗಳು, ಬವಣೆಗಳು, ಅವುಗಳ ಬದುಕಿನ ಚಹರೆಗಳು, ಎಲ್ಲವನ್ನೂ ಸಂಜಯ್ ಗುಬ್ಬಿಯವರು ಕಥೆಗಳ ಮೂಲಕ ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಮಾನವನ ಕಿರುಹಸ್ತಕ್ಷೇಪ ಅವುಗಳ ಜೀವನವನ್ನೇ ಅಲ್ಲಾಡಿಸಿಬಿಡುವ ದುರಂತವನ್ನು ಸಾಕ್ಷಿಸಮೇತವಾಗಿ ವಿವರಿಸುತ್ತಾ ಹೋಗುತ್ತಾರೆ.

marjala manthana saakshatv

ನಡುರಾತ್ರಿಯಲಿ ನಮಗೆ ಕೆಲವೊಮ್ಮೆ ಭೂಮಿ ಕಂಪಿಸುವಂತೆ ಕೂಗುವ ದನಿಯೊಂದು ಕೇಳುತ್ತಿತ್ತು. ಭಯದಿಂದ ಎಚ್ಚರಗೊಂಡಾಗ ಅಪ್ಪ ಅದು ಹೆಬ್ಬುಲಿಯ ಕೂಗೆಂದೂ, ಅದು ನೆಲಕ್ಕೆ ಬಾಯಿಕೊಟ್ಟು ಕೂಗುವುದರಿಂದ ನೆಲ ಕಂಪಿಸುತ್ತದೆಯೆಂದೂ ಕತೆ ಹೇಳುತ್ತಿದ್ದರು. ಬಾಗಿಲೇ ಇಲ್ಲದ ನಮ್ಮ ಮನೆಯೊಳಗೆ ಬಂದರೆ, ಎಂದರೆ ಹುಲಿಗಿರ್ತಿಗೆ ಬಾಳೆಕೊನೆ ಪೂಜೆ ಕೊಟ್ಟಿದ್ದರಿಂದ ಅದು ಬರಲಾಗದು ಎಂದು ಧೈರ್ಯ ತುಂಬುತ್ತಿದ್ದರು. ಮನೆಯ ಹಟ್ಟಿಯಿಂದ ಕರುಗಳನ್ನು ಕದ್ದೊಯ್ದ ಹುಲಿಗಳ ಸಾಲು, ಸಾಲು ಕಥೆಗಳು ನಮ್ಮೂರಿನಲ್ಲಿದ್ದವು. ಮರದ ಮೇಲೆ ಅಟ್ಟೆ ಕಟ್ಟಿ ಅಥವಾ ಬಂದೂಕನ್ನು ಉಳ್ಳದಲ್ಲಿ ಕಟ್ಟಿ ಹುಲಿಹೊಡೆಯುವ ಕ್ರಮವಿತ್ತು. ಕೊನೆಕೊನೆಗೆ ಅವೆಲ್ಲವೂ ಅಪಾಯವೆನಿಸಿ ವಿಷವಿಟ್ಟು ಸಾಯಿಸುತ್ತಿದ್ದರು.

ಪಟ್ಟೆ ಹುಲಿಯೊಂದನ್ನು ಬಂದೂಕಿನಿಂದ ಸಾಯಿಸಿ ಎರಡೆರಡು ದಿನ ಮನೆಯೆದುರು ನಿಲ್ಲಿಸಿಟ್ಟ ನಮ್ಮೂರ ಶೂರರು ನೆನಪಾದರು. ನೂರಾರು ಸಲ ಅದರೆದುರು ನಿಂತರೂ ಅದು ಪಾಪವೆಂಬ ಕನಿಕರ ಬಾಲ್ಯದಲ್ಲಿ ಬಂದಿರಲೇ ಇಲ್ಲ. ನನ್ನ ಪ್ರೀತಿಯ ಹಂಡಕರುವನ್ನು ಹೊತ್ತೊಯ್ದ ಹುಲಿಗೆ ಹಾಗೇ ಆಗಬೇಕು ಅನಿಸಿಬಿಟ್ಟಿತ್ತು. ಆದರೆ ಇಲ್ಲಿ ಲೇಖಕರು ಇಬ್ಬನಿಯ ಹುಲಿ ಎದುರು ಬಂದ ಕಥೆಯನ್ನು ಹೇಳುವಾಗ ಯಾಕೋ ಕಾಟಿಯೊಂದು ಆ ಹುಲಿಗೆ ಸಿಗಬೇಕಿತ್ತು ಅನಿಸಿತಲ್ಲದೇ ಬಾಲ್ಯದಲ್ಲಿ ಕಂಡ ಹುಲಿಯ ಸಾವು ಎಂಥ ಅನ್ಯಾಯವೆನಿಸಿ ಕಣ್ಣಂಚು ಒದ್ದೆಯಾಯಿತು. ನಿಜಕ್ಕೂ ಹುಲಿ ಅದೆಷ್ಡು ಮುದ್ದಾದ ಪ್ರಾಣಿ!

ತಾನು ದಾರಿಗಡ್ಡ ನಿಂತು ಮರಿಯನ್ನು ರಸ್ತೆ ದಾಟಿಸುವ ಆನೆ, ಮೂರು ಮರಿಗಳನ್ನು ಪ್ರಯಾಸದಿಂದ ಬೆಳೆಸುವ ಚಿರತೆ, ಬಾಳೆಮಂಡಿಯೊಳಗೆ ನುಗ್ಗಿ ಸೆರೆವಾಸದ ಶಿಕ್ಷೆ ಪಡೆಯುವ ಚಿರತೆ, ಬೆಂಕಿ, ಪಿಂಕಿ. ಅವುಗಳ ಸಾವು, ಕಾರ್ಯ, ಕಾರಣ, ಹೂರಣ, ಹೀಗೆ ಅವುಗಳ ಲೋಕದಲ್ಲೂ ಬರೆದು ಮುಗಿಸಲಾಗದಷ್ಟು ಕಥೆಗಳಿವೆ. ಚಿರತೆ ಶಾಲೆಗೆ ಬರುವುದು ಅಕ್ಷರ ಕಲಿಯಲೇನೂ ಅಲ್ಲ! ಆದರೆ ನಮ್ಮನ್ನು ಶಿಕ್ಷಿತರಾಗಿಸಲಿಕ್ಕಂತೂ ಹೌದು.

ವೀಕ್ಷಕ ಕ್ಯಾಮರಾಗಳ ಮೇಲೆ ವಿವಿಧ ಪ್ರಾಣಿಗಳು ಮಾಡುವ ಪ್ರಯೋಗಗಳು, ಪ್ರಹಾರಗಳ ಕಥೆಯಂತೂ ಬಿದ್ದೂ, ಬಿದ್ದು ನಗುವಷ್ಟು ಚೇತೋಹಾರಿಯಾಗಿವೆ. ಲದ್ದಿ ತಿಂದು ಬದುಕುವ ಪ್ರಾಣಿಗಳೂ ಇವೆ! ನಮ್ಮೂರ ಕಾಡಿನಲ್ಲಿದ್ದ ಬಸರಿಮರ ಇಷ್ಟೊಂದು ಜೋರಿದೆಯೆಂದು ಇಲ್ಲಿ ಓದಿಯೇ ಅರಿವಾದದ್ದು. ಕಾಡೆಂದರೆ ಟಿ.ವಿ.ಯಲ್ಲಿ ಬರುವ ವೈಲ್ಡ್ ಲೈಫ್ ಚಾನೆಲ್ ಮತ್ತು ಅದರಲ್ಲಿ ಸಾಹಸಿಗರು ನಡೆಸುವ ಕಸರತ್ತುಗಳು ಎಂದಷ್ಟೇ ತಿಳಿದಿರುವ ನಮ್ಮ ಮಕ್ಕಳ ಕೈಗೆ ಅವಶ್ಯವಾಗಿ ಈ ಪುಸ್ತಕವನ್ನು ಹಿಡಿಸಬೇಕಾಗಿದೆ. ನವಕರ್ನಾಟಕ ಪುಸ್ತಕ ಪ್ರಕಟಿಸಿ ಪರಿಸರ ವಿಜ್ಞಾನಕ್ಕೆ ಕಾಣಿಕೆ ನೀಡಿದೆ. 

“ಆ ಚಿರತೆ ಕಣ್ಣು ಎಷ್ಟು ಸುಂದರವಾಗಿತ್ತು ಗೊತ್ತಾ?” ಕಚ್ಚಿದ ಚಿರತೆ ಬಗ್ಗೆ ಸಂಜಯ್ ಹೇಳುತ್ತಿದ್ದರೆ ನಾನು ಅರ್ಥವಾಗದೆ ನಗುತ್ತಿದ್ದೆ. “ಕ್ರೂರ ಮೃಗಗಳು” ಅನ್ನುತ್ತೇವಲ್ಲ ನಾವು? ಇಷ್ಟು ವರ್ಷಗಳಲ್ಲಿ ಅವರು ಒಂದು ದಿನವೂ ಆ ಪದಬಳಕೆ ಮಾಡಿಲ್ಲ. ಈ ಪುಸ್ತಕದ ಕೆಲ ಅಧ್ಯಾಯಗಳನ್ನು ಓದಿದಾಗ “ಯಾಕೊಳ್ಳೆ ಕಾಡ್ ಪ್ರಾಣಿ ಆಡ್ದಂಗಾಡ್ತೀಯಾ.. ಅಂತೀವಲ್ಲಾ ನಾವು? ಪ್ರಾಣಿಗಳ ಲೋಕ ” ಯಾಕೊಳ್ಳೆ ಮನ್ಷ ಆಡ್ದಂಗಾಡ್ತೀಯಾ?” ಅಂತ ಮಾತಾಡ್ಕೋಬಹುದಾ ಅಂತ ಗುಮಾನಿ ಬಂತು. ಅವುಗಳ ಒಳಗೂ ಭಾವಲೋಕವೊಂದಿದೆ. ಮನೆ, ಸಂಸಾರ ಅಂತೆಲ್ಲ ತಾಪತ್ರಯಗಳೂ ಇವೆ. 

                           

‘ಇವತ್ತು ಐದು ಮೀಟರ್ ಅಂತರದಲ್ಲಿ ಮೂರು ಹುಲಿಗಳನ್ನು ನೋಡಿದೆ.  ಒಂದಂತೂ ಪುಟ್ಟಮರಿ. ಎಂತಹ ಸುಂದರಲೋಕ ಇದು!’ ಅನ್ನುತ್ತಾರವರು. ನಾನು ಬೆಚ್ಚುತ್ತೇನೆ. ಜೀವ ಬಾಯಿಗೆ ಬಂದಿರೋದು ನಂಗಾಗಿದ್ದರೆ..  ‘ನೀವ್ ಸ್ವಲ್ಪ ಸರಿ ಇಲ್ಲ ಸಂಜಯ್’ ಅನ್ನುತ್ತೇನೆ. ಅವರು ಎಂದಿನ ಸಂಯಮದ ದನಿಯಲ್ಲಿ ‘ಹೌದು’ ಅನ್ನುತ್ತಾರೆ. ಸುಮಾರು ಒಂದೂವರೆ ದಶಕಗಳಿಂದ ನೋಡುತ್ತಿದ್ದೇನೆ. ಈ ಪಾರ್ಟಿ ಬದಲಾಗಿಲ್ಲ. ಆಗೋದೂ ಇಲ್ಲ. ಪಕ್ಕಾ.  ಅವರನ್ನು ಸುಮ್ಮನೇ ಛೇಡಿಸಿದರೂ‌ ನಂತರ ಯೋಚಿಸುತ್ತೇನೆ. ನಿಜಕ್ಕೂ ಯಾರು ಸರಿ‌ ಇಲ್ಲ? ವನ್ಯಜೀವಿಗಳನ್ನು ಅನ್ಯಜೀವಿಗಳು ಅಂತ ದೂರೀಕರಿಸುವ ನಾವೋ ಸಹಜೀವಿಗಳು ಅಂತ ಒಪ್ಪಿಕೊಳ್ಳುವ ಅವರೋ? ಈ ಪುಸ್ತಕ ಓದಿದರೆ ನಮಗೂ ಅವುಗಳ ಲೋಕ ಎಷ್ಟು ಸುಂದರ ಅನಿಸುತ್ತದೆ. 

ಶಾಲೆಯಲ್ಲಿ ಚಿರತೆ ಕಚ್ಚಿದ ನಂತರ ಸಾಕಷ್ಟು ದೈಹಿಕ ತೊಂದರೆ ಅನುಭವಿಸುತ್ತಿದ್ದರೂ ಅವರು ಅದರ ಬಗ್ಗೆ ಒಂದು ದಿನವೂ ದೂರಿದ್ದು, ಬೇಸರಿಸಿಕೊಂಡದ್ದು ನೋಡಿಲ್ಲ ನಾನು. ದೈಹಿಕ ಇತಿಮಿತಿಗಳ‌ ನಡುವೆಯೂ ಪ್ರಾಣಿಗಳಿಗಾಗಿ ಶಕ್ತಿಮೀರಿ ಕೆಲಸ ಮಾಡುತ್ತಾರೆ. ಗ್ರೀನ್ ಆಸ್ಕರ್ ಎಂದೇ ಹೇಳುವ ವೈಟ್ಲೀ ಪ್ರಶಸ್ತಿ ಪಡೆದ ಸಂಜಯ್, ಬಿಡುವಿಲ್ಲದ ಕಾಡಿನ ಕೆಲಸಗಳ ನಡುವೆಯೂ ವನ್ಯಜೀವಿಗಳ ವಿಷಯವನ್ನು ಕನ್ನಡದಲ್ಲಿ ಬರೆಯಬೇಕು ಅಂತ ಬೆಳಗಿನ ಜಾವ ಎದ್ದು ಬರೆಯುತ್ತಾರೆ. ‘ಶಾಲೆಗೆ ಬಂದ ಚಿರತೆ ಮತ್ತು ಇತರ ಕತೆಗಳು’ ಪುಸ್ತಕ ನವಕರ್ನಾಟಕದ ಆನ್ಲೈನ್ ನಲ್ಲೂ ಲಭ್ಯ. ನಿಮ್ಮ ಮಕ್ಕಳಿಗೆ ಅರಣ್ಯ, ಪರಿಸರ ಮತ್ತು ವನ್ಯಜೀವಿಗಳ ಮಹತ್ವ ತಿಳಿಸಿಲು ಈ ಪುಸ್ತಕ ಕೊಂಡು ಓದಲು ಕೊಡಿ. 

-ಸುಧಾ ಆಡುಕಳ, ಹವ್ಯಾಸಿ ಬರಹಗಾರ್ತಿ 

ಮತ್ತು 

Related posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

March 4, 2026
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026

ಕುಸುಮಬಾಲೆ ಆಯರಳ್ಳಿ, ಅಂಕಣಕಾರ್ತಿ   

Tags: #saakshatvcheethachild howwd memoriesForestmarjala manthana
ShareTweetSendShare
Join us on:

Related Posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

by admin
March 4, 2026
0

ಜಾಮ್‌ನಗರ - ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು...

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram