James | ಬಂದೇ ಬಿಡ್ತು ಜೇಮ್ಸ್ ಟೀಸರ್.. ಹೇಗಿದೆ ಗೊತ್ತಾ..?
ನೂರು ಜನ ಗನ್ ಹಿಡ್ಕೊಂಡಿರೋ ವೇಸ್ಟ್ ಬಾಡಿಗಳಿಗಿಂತ,.. ಒಬ್ಬ ಗನ್ ಥರ ಇರೋ ವ್ಯಕ್ತಿನ ಹುಡ್ಕೊಡಿ ಎದೆ ಕೊಟ್ ಕಾಪಾಡೋಕು ಗೊತ್ತಿರ್ಬೇಕು, ಎದುರಾಳಿ ಎದೆಗೆ ಬುಲೆಟ್ ನುಗ್ಸೋದು ಗೊತ್ತಿರ್ಬೇಕು… ಗಟ್ಸ್ ಅವ್ನ ಟ್ರೇಡ್ ಮಾರ್ಕ್.. ನನಗೆ ಮೊದ್ಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿ ಅಭ್ಯಾಸ…
ಎಸ್.. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗಳನ್ನ ತಣಿಸುತ್ತಾ, ರಾಜ್ ಕುಟುಂಬದ ಕುಡಿ.. ಕರುನಾಡ ಕಣ್ಮನಿ.. ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಅಭಿನಯದ ಜೇಮ್ಸ್ ಸಿನಿಮಾದ ಟೀಸರ್ ಬಂದೇ ಬಿಡ್ತು..
ಪಿಆರ್ ಕೆ ಆಡಿಯೋ ಚಾನೆಲ್ ನಲ್ಲಿ ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಿನಿಮಾದ ಟೀಸರ್ ಹೇಗಿದೆ ಅನ್ನೋದಕ್ಕಿಂತ ಹೆಚ್ಚಾಗಿ ಟೀಸರ್ ಅಪ್ಪುಮಯವಾಗಿದೆ. He comes ಪವರ್.. ಪವರ್.. ಅಂತಾ ಬರೋ BGM. ಗನ್.. ಘಟ್ಸ್.. ಪೈಟ್ಸ್.. ಪವರ್..!! ಪವರ್ ಸ್ಟಾರ್ ಟೀಸರ್ ನ ಹೈಲೆಟ್ಸ್..!!
ಟೀಸರ್ನಲ್ಲಿ We request santosh sir to take charge… ಅನ್ನುವಾಗ ಅಪ್ಪು ಮೆಟ್ಟಿನಿಂದ ಇಳಿಯೋ ಸೀನ್. ಇದಾದ ಬಳಿಕ ಜೆ ವಿಂಗ್ಸ್ ಅನ್ನೋ ಸೆಕ್ಯೂಟಿರ್ ಏಜೆನ್ಸಿ ಇದೆ ಸರ್ ಅಲ್ಲೊಬ್ಬ ಪವರ್ ಫುಲ್ ಪರ್ಸನ್ ಇದ್ದಾನೆ ಅನ್ನೋ ಡೈಲಾಗ್ ಶುರುವಾದಗ ಅಪ್ಪು ಬುಲೆಟ್ ನಲ್ಲಿ ಬರ್ತಾರೆ ಗನ್ ಹಿಡೀತಾರೆ.
ಹೆಚ್ಚಿನ ಮಾಹಿತಿ : James | ಬಂದೇ ಬಿಡ್ತು ಜೇಮ್ಸ್ ಟೀಸರ್.. ಹೇಗಿದೆ ಗೊತ್ತಾ..?
ಸೂಪರ್ ಸ್ಟಾರ್ ಗೆ ನೆಲ್ಸನ್ ಆಕ್ಷನ್ ಕಟ್ – ರಜನಿ ಮಾಸ್ ಲುಕ್ ಗೆ ಫ್ಯಾನ್ಸ್ ಫಿಧಾ….
ರಜನಿಕಾಂತ್ ಮುಂದಿನ ಚಿತ್ರ ಯಾರು ನಿರ್ದೇಶಿಸುತ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದೆ… ಸೂಪರ್ ಸ್ಟಾರ್ ರಜಿನಿಕಾಂತ್ ಗೆ ಆಕ್ಷನ್ ಕಟ್ ಹೇಳುವ ಅವಕಾಶವನ್ನ ನೆಲ್ಸನ್ ದಿಲೀಪ್ ಕುಮಾರ್ ಗಿಟ್ಟಿಸಿಕೊಂಡಿದ್ದಾರೆ.. ಸೂಪರ್ ಸ್ಟಾರ್ ನಿರ್ದೇಶನ ಮಾಡಬೇಕು ಎನ್ನುವುದು ಹಲವು ನಿರ್ದೇಶಕರ ಕನಸು.. ಅದರಲ್ಲೂ ಯುವ ನಿರ್ದೇಶಕರಿಗೆ ಅದು ಫ್ಯಾನ್ ಬಾಯ್ ಮೂಮೆಂಟ್. ಇಂಥಹ ಅಧ್ಬುತ ಅವಕಾಶ ವಿಜಯ್ ಮುಂಬರುವ ಚಿತ್ರ ಬೀಸ್ಟ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಗೆ ಸಿಕ್ಕಿದೆ.
ದಕ್ಚಿಣ ಭಾರತದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ತಮ್ಮ 169 ಚಿತ್ರವನ್ನ ನಿರ್ದೇಶಿಸಲು ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಗೆ ಅವಕಾಶ ನೀಡಿದ್ದಾರೆ. ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಸನ್ ಪಿಚ್ಚರ್ಸ್ ಚಿತ್ರದ ಚಿಕ್ಕ ವೀಡಿಯೋ ತುಣುಕು ಹಂಚಿಕೊಂಡಿದೆ…
ಹೆಚ್ಚಿನ ಮಾಹಿತಿ : ಸೂಪರ್ ಸ್ಟಾರ್ ಗೆ ನೆಲ್ಸನ್ ಆಕ್ಷನ್ ಕಟ್ – ರಜನಿ ಮಾಸ್ ಲುಕ್ ಗೆ ಫ್ಯಾನ್ಸ್ ಫಿಧಾ….
ಪ್ರಿನ್ಸ್ ವರ್ಸಸ್ ದಳಪತಿ.. ಟ್ವಿಟ್ಟರ್ ಫ್ಯಾನ್ಸ್ ವಾರ್
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ ಅಭಿಮಾನಿಗಳ ನಡುವೆ ಟ್ವಿಟರ್ ವಾರ್ ಶುರುವಾಗಿದೆ. ಈ ಸ್ಟಾರ್ ಹೀರೋಗಳಿಗೆ ದಕ್ಷಿಣದಲ್ಲಿ ಒಳ್ಳೆಯ ಕ್ರೇಜ್ ಇದೆ.
ತೆಲುಗಿನ ಜೊತೆಗೆ ತಮಿಳಿನಲ್ಲೂ ಮಹೇಶ್ ಗೆ ಒಳ್ಳೆಯ ಫಾಲೋಯಿಂಗ್ ಇದೆ. ಅವರ ಹಲವು ಚಿತ್ರಗಳು ತಮಿಳಿಗೆ ಡಬ್ ಆಗಿವೆ. ವಿಜಯ್ ಅವರು ಮಹೇಶ್ ಅಭಿನಯದ ಹಲವಾರು ಚಿತ್ರಗಳನ್ನು ತಮಿಳಿನಲ್ಲಿ ರೀಮೇಕ್ ಮಾಡಿ ಹಿಟ್ ಸಾಧಿಸಿದ್ದಾರೆ.
ಈ ಇಬ್ಬರು ನಾಯಕರ ನಡುವೆ ಉತ್ತಮ ಆತ್ಮೀಯತೆ ಇದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಮಹೇಶ್, ವಿಜಯ್ ಒಳ್ಳೆಯ ಸ್ನೇಹಿತರು. ಆದರೆ ಈ ಇಬ್ಬರು ನಾಯಕರ ಅಭಿಮಾನಿಗಳ ನಡುವೆ ಹೊಂದಾಣಿಕೆಯೇ ಇಲ್ಲದಂತಾಗಿದೆ.
ಹೌದು..! ಈ ಇಬ್ಬರು ಹೀರೋಗಳ ಅಭಿಮಾನಿಗಳ ಮಧ್ಯೆ ಟ್ವಿಟ್ಟರ್ ನಲ್ಲಿ ವಾರ್ ಶುರುವಾಗಿದೆ. ವಾಸ್ತವವಾಗಿ, ಈ ರೀತಿಯ ಅಭಿಮಾನಿಗಳ ಯುದ್ಧ ಹೊಸದೇನಲ್ಲ.
ಅನೇಕ ಸ್ಟಾರ್ ಹೀರೋಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಟ್ವೀಟ್ ವಾರ್ ನಡೆಸುತ್ತಲೇ ಇರುತ್ತಾರೆ. ಈಗ ಮಹೇಶ್ ಮತ್ತು ವಿಜಯ್ ಅಭಿಮಾನಿಗಳ ಸರದಿ ಬಂದಿದೆಯಷ್ಟೆ.
ಇನ್ನು ಈ ವಾರ್ ಶುರುವಾಗಿದ್ದು ಯಾಕೆ ಅಂದ್ರೆ, ಮಹೇಶ್ ಬಾಬು ಅಭಿನಯದ ‘ಸರ್ಕಾರ್ ವಾರಿ ಪಾಟ’ ಚಿತ್ರದ ಮೊದಲ ಸಿಂಗಲ್ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ.
ಅದೇ ದಿನ ವಿಜಯ್ ಅಭಿನಯದ ಬೀಸ್ಟ್ ಸಿಂಗಲ್ ಕೂಡ ಬಿಡುಗಡೆಯಾಗಲಿದೆ. ತಮ್ಮ ಹೀರೋಗಳ ಹಾಡುಗಳನ್ನು ಖುಷಿಯಿಂದ ಎಂಜಾಯ್ ಮಾಡಲು ರೆಡಿಯಾಗಿರುವ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಒಬ್ಬರನ್ನೊಬ್ಬರು ಟೀಕಿಸಿಕೊಳ್ಳುತ್ತಿದ್ದಾರೆ.
ಯೂಟ್ಯೂಬ್ನಲ್ಲಿ ‘ಬೀಸ್ಟ್’ ಟ್ರ್ಯಾಕ್ ಲೈಕ್ಸ್ ಹೆಚ್ಚಿಸಲು ವಿಜಯ್ ಅಭಿಮಾನಿಗಳು ಬಾಟ್ಸ್ ಗಳನ್ನು ಬಳಸುತ್ತಾರೆಂದು ಮಹೇಶ್ ಅಭಿಮಾನಿಗಳು ಆರೋಪಿಸಿದ್ದು ಇಲ್ಲಿಂದ ಜಗಳ ಶುರುವಾಗಿದೆ.
ಹೆಚ್ಚಿನ ಮಾಹಿತಿ : Mahesh Babu-Vijay | ಪ್ರಿನ್ಸ್ ವರ್ಸಸ್ ದಳಪತಿ.. ಟ್ವಿಟ್ಟರ್ ನಲ್ಲಿ ಫ್ಯಾನ್ಸ್ ವಾರ್
ಮತ್ತೆ ಮುನ್ನಲೆಗೆ ಬಂದ ಟಾಲಿವುಡ್ ಡ್ರಗ್ಸ್ ಕೇಸ್
ಟಾಲಿವುಡ್ ಡ್ರಗ್ಸ್ ಕೇಸ್ ಮತ್ತೆ ಮುನ್ನಲೆಗೆ ಬಂದಿದೆ. ಡ್ರಗ್ಸ್ ಕೇಸ್ ವಿವರಗಳನ್ನು ನೀಡುವಂತೆ ಇಡಿ, ಎಕ್ಸೈಸ್ ಇಲಾಖೆಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಿನಿತಾರೆಯೆರನ್ನ ವಿಚಾರಣೆ ನಡೆಸಿರುವ ಇಡಿ, ಬ್ಯಾಂಕ್ ಲೇವಾದೇವಿಗಳನ್ನು ಪರಿಶೀಲನೆ ನಡೆದಿದೆ.
ಆದ್ರೆ ಇತ್ತೀಚೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಇಡಿಗೆ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು.
ಇದರ ಅನ್ವಯ ಮತ್ತೊಮ್ಮೆ ಎಕ್ಸೈಸ್ ಇಲಾಖೆಗೆ ಇಡಿ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಟಾಲಿವುಡ್ ಸ್ಟಾರ್ ಗಳು ಇಡಿ ವಿಚಾರಣೆ ಎದುರಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
“ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರತಂಡದಿಂದ ವಿಭಿನ್ನ ಪ್ರಚಾರ
ಚಿತ್ರ ನಿರ್ಮಾಣ ಮಾಡುವುದು ಎಷ್ಟು ಕಷ್ಟವೊ, ಅದಕ್ಕಿಂತಲೂ ಕಷ್ಟ ಚಿತ್ರವನ್ನು ಪ್ರೇಕ್ಷಕರಿಗೆ ತಲುಪುವಂತೆ ಮಾಡುವುದು. ಬಿ.ಜಿ. ಮಂಜುನಾಥ್ ಅವರು ನಿರ್ಮಿಸಿರುವ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ.
ವಿನಾಯಕ ಕೋಡ್ಸರ ನಿರ್ದೇಶಿಸಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ದಿಗಂತ್, ಐಂದ್ರಿತ ರೆ, ರಜನಿ ರಾಘವನ್ ಇದ್ದಾರೆ. ರವೀಂದ್ರ ಜೋಶಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಬಿಡುಗಡೆಗೂ ಪೂರ್ವದಲ್ಲಿ ಚಿತ್ರತಂಡ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದೆ.
ಹೆಚ್ಚಿನ ಮಾಹಿತಿ : Sandalwood | “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರತಂಡದಿಂದ ವಿಭಿನ್ನ ಪ್ರಚಾರ
Rana | ರಾಣ ಸಿನಿಮಾದ ಸಾಂಗ್ಸ್ ರಿಲೀಸ್
ಕೆ.ಮಂಜು ಅರ್ಪಿಸುವ, ಗುಜ್ಜಾಲ್ ಟಾಕೀಸ್ ಲಾಂಛನದಲ್ಲಿ ಪುರುಷೋತ್ತಮ ಗುಜ್ಜಾಲ್ ನಿರ್ಮಿಸುತ್ತಿರುವ, ನಂದ ಕಿಶೋರ್ ನಿರ್ದೇಶನದಲ್ಲಿ ಶ್ರೇಯಸ್ಸ್ ಕೆ ಮಂಜು ನಾಯಕನಾಗಿ ನಟಿಸುತ್ತಿರುವ “ರಾಣ” ಚಿತ್ರದ ಹಾಡೊಂದನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿದ್ದಾರೆ.
ಶಿವು ಭೇರ್ಗಿ ಬರೆದಿರುವ “ಮಳ್ಳಿ ಮಳ್ಳಿ” ಎಂಬ ಹಾಡಿಗೆ ನಾಯಕ ಶ್ರೇಯಸ್ಸ್ ಹಾಗೂ ಸಂಯುಕ್ತ ಹೆಗಡೆ ಹೆಜ್ಜೆ ಹಾಕಿದ್ದಾರೆ. ಇಮ್ರಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಶಿವು ಅದ್ಭುತವಾದ ಸೆಟ್ ಹಾಕಿದ್ದಾರೆ.
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಕೆ.ಮಂಜು ಅವರು ಮಗನ ಮೇಲಿಟ್ಟರುವ ಪ್ರೀತಿ. ಈ ಹಾಡನ್ನು ನೋಡಿದರೆ ಶ್ರೇಯಸ್ಸ್ ಪಟ್ಟಿರುವ ಶ್ರಮ ತಿಳಿಯುತ್ತದೆ. ಸಂಯಕ್ತ ಅವರ ನಟನೆಯೂ ಚೆನ್ನಾಗಿದೆ. ಸಿನಿಮಾ ಕೂಡ ಚೆನ್ನಾಗಿ ಬಂದಿರುತ್ತದೆ ಎಂಬ ಭರವಸೆಯಿದೆ.
ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸಿದ ದುನಿಯಾ ವಿಜಯ್, ಕೆ.ಮಂಜು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಹೆಚ್ಚಿನ ಮಾಹಿತಿ : Rana | ರಾಣ ಸಿನಿಮಾದ ಸಾಂಗ್ಸ್ ರಿಲೀಸ್
Kannada films : ಇಂದು ಕನ್ನಡದಲ್ಲಿ ಒಟ್ಟು 6 ಸಿನಿಮಾಗಳು ರಿಲೀಸ್…!!
ಲವ್ ಮಾಕ್ಟೆಲ್ 2 , ಒಪ್ಪಂದ , ಫ್ಲೋರ್ ವಾಲ್ಸ್, ಇದೇ ಅಂತರಂಗ ಶುದ್ಧಿ, ರೌಡಿ ಬೇಬಿ , ಪ್ರೀತಿಗಿಬ್ಬರು ..
ಹೆಚ್ಚಿನ ಮಾಹಿತಿ : Kannada films : ಇಂದು ಕನ್ನಡದಲ್ಲಿ ಒಟ್ಟು 6 ಸಿನಿಮಾಗಳು ರಿಲೀಸ್…!!













