Hijab controvercy : ಫೆಬ್ರವರಿ 19 ರ ವರೆಗೂ ಶಾಲಾ ಕಾಲೇಜುಗಳಿಗೆ ರಜೆ
ಹಿಜಬ್ – ಕೇಸರಿ ಶಾಲು ವಿವಾದ ಹಿನ್ನೆಲೆ
ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಮುಂದುವರಿಸಿದ ಸರ್ಕಾರ
ಹೈಕೋರ್ಟ್ ನಲ್ಲಿರುವ ಪ್ರಕರಣ – ಸೋಮವಾಕ್ಕೆ ಮುಂದೂಡಿಕೆಯಾಗಿದ್ದ ವಿಚಾರಣೆ
ವಿದ್ಯಾರ್ಥಿಗಳು ಧಾರ್ಮಿಕ ವಸ್ತ್ರ ಧರಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ
ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲು ಸಂಘರ್ಷ ಭುಗಿಲೆದ್ದಿದ್ದು , ರಾಜಕೀಯ ತಿರುವುಗಳನ್ನ ಪಡೆದುಕೊಂಡ ನಂತರ , ಹೈಕೋರ್ಟ್ ಅಂಗಳ ತಲುಪಿದ್ದ ಕೇಸ್ ವಿಚಾರಣೆ ಬಳಿಕ ವಿಸ್ತೃತ ಪೀಠಕ್ಕೆ ವರ್ಗಾವಣೆ ಆಯಿತು… ನಂತರದಲ್ಲಿ ಈ ಸಂಬಂಧ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠವು ಸೋಮವಾರಕ್ಕೆ ವಿಚಾರಣೆ ಮುಂದೂಡುವ ಜೊತೆಗೆ ಮಧ್ಯಂತರ ತೀರ್ಪಿನಲ್ಲಿ ಯಾವ ವಿದ್ಯಾರ್ಥಿಗಳು ಸಹ ಧಾರ್ಮಿಕ ಗುರುತುಗಳನ್ನ ಧರಿಸದಂತೆ ಆದೇಶ ಹೊರಡಿಸಿತು..
ಮತ್ತೊಂದೆಡೆ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ಘೋಷಿಸಿದ್ದ ರಜಾ ಅವಧಿಯನ್ನ ಮುನ್ನೆಚ್ಚರಿಕಾ ಕ್ರಮದೊಂದಿಗೆ ವಿಸ್ತರಣೆ ಮಾಡಿದೆ.. ಹೌದು ಫೆಬ್ರವರಿ 19 ರವರೆಗೂ ಸರ್ಕಾರ ಶಾಲಾ ಕಾಲೇಜುಗಳ ರಜೆ ಘೋಷಣೆ ಮಾಡಿದೆ… ಹೈ ಕೋರ್ಟ್ ಮಧ್ಯಂತರ ತೀರ್ಪಿನ ನಂತರವೂ ಶಾಲಾ ಕಾಲೇಜುಗಳ ಬಳಿ ಸಂಘರ್ಷ ಮುಂದುವರೆಯಬಹುದೆಂಬ ಮುನ್ನೆಚ್ಚರಿಕೆಯೊಂದಿಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ..









