K S Eshwarappa | ನಡ್ಡಾ ಅವರಿಗೆ ಮಾಹಿತಿ ಇದ್ದಂತೆ ಇಲ್ಲ
ಬೆಂಗಳೂರು : ತಮ್ಮ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಖಂಡನೆ ವ್ಯಕ್ತಪಡಿಸಿರುವ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಷ್ಟ್ರಧ್ವಜದ ಬಗ್ಗೆ ಭಾಗಧ್ವಜದ ಬಗ್ಗೆ ಸದನದಲ್ಲಿ ಸ್ಪಷ್ಟವಾಗಿ ಈಗಾಗಲೇ ಸಿಎಂ ಮತ್ತು ಮಾಧುಸ್ವಾಮಿ ಉತ್ತರ ಕೊಟ್ಟಿದ್ದಾರೆ.
ನಡ್ಡಾವರಿಗೆ ಅವರಿಗೆ ಕಂಪ್ಲೀಟ್ ಮಾಹಿತಿ ಇದ್ದಂತೆ ಇಲ್ಲ..ಅದರ ಬಗ್ಗೆ ಸಿಎಂ ಮಾಹಿತಿ ಕೊಡ್ತೀನಿ ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯಪಾಲರ ಬಗ್ಗೆ ಮಾತನಾಡಿದ ಈಶ್ವರಪ್ಪ, ನನಗೆ ರಾಜ್ಯಪಾಲರಿಂದ ಬುಲಾವ್ ಎಂಬಂತೆ ಮಾಧ್ಯಮಗಳಲ್ಲಿ ಬರುತ್ತಿದೆ.
ಆದರೇ ನಾನು ಬಂದಿರೋದು ಕುವೆಂಪು ವಿವಿಗೆ ಸಂಬಂಧಿಸಿದಂತೆ ಮಾತನಾಡಲು.
ಕೆಲ ದಿನಗಳ ಹಿಂದೆ ನಾನೇ ಸಮಯ ನಿಗದಿ ಮಾಡಿಸಿದ್ದೆ. ಆ ವಿಚಾರಕ್ಕೆ ಇಂದು ಭೇಟಿ ಮಾಡಲಾಗಿತ್ತು.
ನನಗೆ ರಾಜ್ಯಪಾಲರು ಬುಲಾವ್ ಕೊಟ್ಟಿಲ್ಲ. ಶಿವಮೊಗ್ಗ ಘಟನೆ ಬಗ್ಗೆ ರಾಜ್ಯಪಾಲರ ಜೊತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
K S Eshwarappa meets governor of karnataka Saaksha Tv









