Mayank Agarwal : ಕ್ಯಾಪ್ಟನ್ಸಿ ಒತ್ತಡದಲ್ಲಿ ಮಯಾಂಕ್ ಮಾಯ..
ಇಂಡಿಯನ್ ಪ್ರಿಮಿಯರ್ ಲೀಗ್ 2022 ಸೀಸನ್ ನಲ್ಲಿ ಟೀ ಇಂಡಿಯಾದ ಕೆಲವು ಆಟಗಾರರು ಪೂರ್ವ ವೈಭವ ಪಡೆದುಕೊಂಡಿದ್ದಾರೆ. ಇನ್ನೂ ಕೆಲವರು ಕೆಟ್ಟ ಅನುಭವವನ್ನು ಪಡೆದುಕೊಂಡಿದ್ದಾರೆ.
ಯಜುವೇಂದ್ರ ಚಹಾಲ್, ಕುಲ್ ದೀಪ್ ಯಾದವ್, ಹಾರ್ದಿಕ್ ಪಾಂಡ್ಯ ನಂತಹ ಕ್ರಿಕೆಟ್ ಆಟಗಾರರು ಫಾರ್ಮ್ ಗೆ ಮರಳಿದ್ದಾರೆ.
ಆದ್ರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಯಾಂಕ್ ಅಗರ್ ವಾಲ್ ನಂತಹ ಆಟಗಾರರು ಘೋರ ವೈಫಲ್ಯ ಅನುಭವಿಸಿದ್ದಾರೆ.
ಬ್ಯಾಟಿಂಗ್ ಸ್ಟಾರ್ಸ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಿಗಿಂತ ಮಯಾಂಕ್ ಅಗರ್ ವಾಲ್ ಹೆಚ್ಚು ಪರದಾಡಿದರು.
ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ಪಾಳಯ ಸೇರಿದ ಬಳಿಕ ಮಯಾಂಕ್ ಪಂಜಾಬ್ ಕಿಂಗ್ಸ್ನ ಪೂರ್ಣ ಸಮಯದ ನಾಯಕರಾಗಿ ಆಯ್ಕೆಯಾದರು.
ಕ್ಯಾಪ್ಟನ್ಸಿ ಸಿಕ್ಕ ಬಳಿಕ ಮಯಾಂಕ್ ಕಂಪ್ಲೀಟ್ ಆಗಿ ಬ್ಯಾಟಿಂಗ್ ಮರೆತರು. ಈ ಸೀಸನ್ ನಲ್ಲಿ 13 ಪಂದ್ಯಗಳನ್ನಾಡಿರುವ ಮಯಾಂಕ್ ಒಂದು ಅರ್ಧಶತಕದೊಂದಿಗೆ ಕೇವಲ 196 ರನ್ ಗಳಿಸಿದ್ದರು.
ಇದೇ ಮಯಾಂಕ್ ಕಳೆದ ಐಪಿಎಲ್ ಸೀಸನ್ ನಲ್ಲಿ 12 ಪಂದ್ಯಗಳಲ್ಲಿ 441 ರನ್ ಸಿಡಿಸಿದ್ದರು. ಇನ್ನು ನಾಯಕನಾಗಿ ತಂಡವನ್ನು ಓಕೆ ಎಂಬಂತೆ ಮುನ್ನಡೆಸಿದರು.
ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಮಯಾಂಕ್ ಅಗರ್ವಾಲ್ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಮಯಾಂಕ್ ಅಗರ್ ವಾಲ್ ಗೆ ಏನಾಯ್ತು.? ಆತನನ್ನು ನೋಡಿದ ಕೂಡಲೇ ನನಗೆ ಬಂದ ಪ್ರಶ್ನೆ ಇದು. ಆತ ನಿಜವಾಗಿ ಒಳ್ಳೆ ಸ್ಟ್ರೈಕಿಂಗ್ ಪ್ಲೇಯರ್. ಆದರೆ, ಐಪಿಎಲ್ನಲ್ಲಿ ನಾಯಕತ್ವ ಅವರನ್ನ ಇಕ್ಕಟ್ಟಿಗೆ ಸಿಲುಕಿಸಿದೆ.
ನಾಯಕತ್ವದ ಹೊರೆ ಅವರಲ್ಲಿದ್ದ ಉತ್ತಮ ಬ್ಯಾಟರನ್ನು ಸಾಯಿಸಿದೆ. ಈ ಋತುವಿನಲ್ಲಿ ಪಂಜಾಬ್ ನಾಯಕರಾಗಿದ್ದ ಮಯಾಂಕ್, ಟೂರ್ನಿಯ ನಡುವೆ ಆರಂಭಿಕನ ಸ್ಥಾನಬಿಟ್ಟುಕೊಟ್ಟು ಮಿಡಲ್ ಆರ್ಡರ್ ನಲ್ಲಿ ಬ್ಯಾಟ್ ಬೀಸಿದ್ರು.
ಆದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ನಾಯಕತ್ವ ಅವರನ್ನ ಮಿಂಚಿದ ಭಾರವಾದ್ದರಿಂದ ಮಯಾಂಕ್ ಮುಖದಲ್ಲಿ ಅಸಹನೆ ಎದ್ದು ಕಾಣುತ್ತಿತ್ತು.
ಆತನನ್ನು ನಾಯಕನಾಗಿ ಅಲ್ಲದೇ ಕೇವಲ ಓರ್ವ ಬ್ಯಾಟರ್ ಆಗಿ ಆಡಿಸಿದ್ದರೇ ರಿಸಲ್ಟ್ ಬೇರೆಯದ್ದೇ ರೀತಿಯಲ್ಲಿರುತ್ತಿತ್ತು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಇದೇ ವೇಳೆ ಆರ್ಸಿಬಿ ಬೌಲರ್ ವನಿಂದು ಹಸರಂಗ ಅವರನ್ನು ಹೊಗಳಿದ ಭಜ್ಜಿ ”ಹಸರಂಗ ಒಂದು ಹಂತದಲ್ಲಿ ಆರ್ಸಿಬಿಗೆ ಮ್ಯಾಚ್ ವಿನ್ನರ್ ಆಗಿದ್ದಾರೆ.
ವಾಸ್ತವವಾಗಿ ಆತ ಅಚ್ಚರಿಯ ಬೌಲರ್. ಆತನ ಯಶಸ್ಸಿನ ಹಿಂದೆ ಸಾಕಷ್ಟು ಪರಿಶ್ರಮ ಇದೆ ಎಂಬೋದು ಎದ್ದು ಕಾಣುತ್ತಿತ್ತು. ನಾನು ಅವರ ಬೌಲಿಂಗ್ ಅನ್ನು ನಿಜವಾಗಿಯೂ ಎಂಜಾಯ್ ಮಾಡಿದ್ದೇನೆ ಎಂದು ಭಜ್ಜಿ ತಿಳಿಸಿದ್ದಾರೆ.








