ಆಂಬ್ಯುಲೆನ್ಸ್ ಗೆ ದಾರಿ ಬಿಡಲು ಬೆಂಗಾವಲು ಪಡೆ ನಿಲ್ಲಿಸಿದ ಮೋದಿ…
ಪ್ರಧಾನಿ ನರೇಂದ್ರ ಮೋದಿ ಅವರು ತವರು ರಾಜ್ಯ ಗುಜರಾತ್ ನಲ್ಲಿ ಎರಡನೇ ದಿನದ ಪ್ರವಾಸವನ್ನ ಮುಂದುವರೆಸಿದ್ದಾರೆ. ಶುಕ್ರವಾರದ ಮೋದಿ ಅಹಮದಾಬಾದ್ ನಿಂದ ಗಾಂಧಿನಗರಕ್ಕೆ ಹೋಗುವಾಗ ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಲು ಪ್ರಧಾನಿ ಸ್ವತಃ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಲು ಆದೇಶಿಸಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಜೆಪಿ ವಕ್ತಾರ ಡಾ.ರುತ್ವಿಜ್ ಪಟೇಲ್ ಟ್ವೀಟ್ ಮಾಡಿದ್ದಾರೆ. ಮೋದಿ ಯುಗದಲ್ಲಿ ವಿಐಪಿ ಸಂಸ್ಕೃತಿಗೆ ಸ್ಥಾನವಿಲ್ಲ ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ. ಅಹಮದಾಬಾದ್ನ ದೂರದರ್ಶನ ಕೇಂದ್ರದ ಬಳಿ ಮಧ್ಯಾಹ್ನ ಸಾರ್ವಜನಿಕ ಸಭೆ ಮುಗಿಸಿ ಗಾಂಧಿನಗರದ ರಾಜಭವನಕ್ಕೆ ಮೋದಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಮೋದಿಯವರ ಗುಜರಾತ್ ಭೇಟಿಯ ಅಂಗವಾಗಿ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಶುಕ್ರವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಮೊದಲ ಹಂತವನ್ನು ಸಹ ಪ್ರಾರಂಭಿಸಲಾಯಿತು. ಸಂಜೆ ಬನಸ್ಕಾಂತ್ ಜಿಲ್ಲೆಯಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಸಿದ್ಧ ಅಂಬಾಜಿ ದೇವಸ್ಥಾನದಲ್ಲಿ ಆರತಿ ನಡೆಯಲಿದೆ.
Modi Ambulance: PM Modi Stops Convoy To Give Way To Ambulance In Gujarat