ಮೈಸೂರು : ಬೇಲಿನೆ ಎದ್ದು ಹೊಲ ಮೇಯ್ದಂತೆ ಎಂಬ ಮಾತು ಇಲ್ಲೊಬ್ಬ ಪೊಲೀಸ್ ಗೆ ಹೇಳಿ ಮಾಡಿಸಿದಂತಿದೆ. ಕಳ್ಳರನ್ನು ಸೆರೆ ಇಡಿಯಬೇಕಾದ ಪೊಲೀಸೆ ಕಳ್ಳನಾಗಿರುವ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ. ಟಿ.ನರಸೀಪುರ ಪೊಲೀಸ್ ಠಾಣೆಯ ರೈಟರ್ ಕೃಷ್ಣೇಗೌಡ ಠಾಣೆಯ ದಾಸ್ತಾನು ಕೊಠಡಿಯಲ್ಲಿದ್ದ 50 ಬುಲೆಟ್ಗಳನ್ನು ಕಳ್ಳತನ ಮಾಡಿದ್ದಾನೆ. ಅಲ್ಲದೆ ಈ ಅಸಾಮಿ ಕದ್ದ ಬುಲೆಟ್ ಗಳನ್ನ ನಂಜನಗೂಡು ಕಪಿಲಾ ನದಿಯಲ್ಲಿ ಎಸೆದಿದ್ದಾನೆ. ಬುಲೆಟ್ ನಾಪತ್ತೆ ಆಗುವ ವಿಚಾರದಲ್ಲಿ ಮೊದಲಿಂದಲೂ ಕೃಷ್ಟೇಗೌಡನ ಮೇಲೆ ಶಂಕೆಯಿತ್ತು. ಹಾಗಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ್ಮಹತ್ಯೆ ನಾಟಕವಾಡಿದ ಖದೀಮಾ. ಡಿವೈಎಸ್ಪಿ ಪ್ರಭಾಕರ ರಾವ್ ಸಿಂಧೆ ರವರಿಗೆ ಚೆಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದನು.ಕೊನೆಗೆ ತೀವ್ರ ವಿಚಾರಣೆ ವೇಳೆ ಸತ್ಯ ಬಾಯಿ ಬಿಟ್ಟಿದ್ದಾನೆ. ಅಡಿಷನಲ್ ಎಸ್ಪಿ ಸ್ನೇಹಾ ನೇತೃತ್ವದಲ್ಲಿ ಬುಲೆಟ್ ಗಳ ಶೋಧನಾ ಕಾರ್ಯ ನಡೆದಿದೆ. 20 ಬುಲೆಟ್ ಗಳು ಕಪಿಲಾ ಸೇತುವೆ ಬಳಿ ಪತ್ತೆಯಾಗಿವೆ. ಉಳಿದ ಬುಲೆಟ್ ಗಳ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಹಳೆ ರೈಟರ್ ಹಾಗೂ ಹೊಸ ರೈಟರ್ ನಡುವಿನ ವೈಮನಸ್ಸು ಬುಲೆಟ್ ನಾಪತ್ತೆಗೆ ಕಾರಣವಾಗಗಿರುವ ಶಂಕೆಯಿದೆ. ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರನ್ನ ಅಮಾನತು ಮಾಡಲಾಗಿದೆ ಎಂದು ಅಧಿಕಾರಗಳು ತಿಳಿಸಿದ್ದಾರೆ.
2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ
ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗ ಹೊಸ ಸಂಕಲ್ಪ ಮಾಡಿದೆ. 2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣ ನಶೆ ಮುಕ್ತ ರಾಜ್ಯವನ್ನಾಗಿ ಮಾಡುವ ದೃಢ...








