ಪಾಕಿಸ್ತಾನದ ಪರ ಘೋಷಣೆ ಕೂಗಿ ಸದ್ಯ ಪೊಲೀಸರ ವಶದಲ್ಲಿರುವ ಅಮೂಲ್ಯ ಲಿಯೋನ್ ವಿರುದ್ಧ ಕೋಲಾರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಕಿಡಿಕಾರಿದ್ದಾರೆ. ಭಾರತದಲ್ಲಿದ್ದುಕೊಂಡು ಪಾಕಿಸ್ಥಾನ ಪರ ಘೋಷಣೆ ಕೂಗಿದ್ದು ಅಕ್ಷ್ಯಮ್ಯ ಅಪರಾಧ. ಈ ರೀತಿಯ ಘೋಷಣೆ ಕೂಗಿದ್ದರ ಹಿಂದೆ ಪಾಕಿಸ್ತಾನದ ಕೈವಾಡ ಇರಬಹುದು. ಹಣ ಆಸೆಗೆ ಈ ಯುವತಿ ಹೀಗೆ ಮಾಡಿದ್ದಾಳೆ ಅನಿಸುತ್ತಿದೆ ಎಂದು ಆರೋಪಿಸಿದರು. ಅಮೂಲ್ಯ ಲಿಯೋನ್ ಳ ತಂದೆಯೇ ಮಗಳಿಗೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ. ಇಂತಹ ದೇಶದ್ರೋಹ ಘೋಷಣೆ ಕೂಗುವವರನ್ನು ಗಡಿಪಾರು ಮಾಡಿದಾಗ ಮಾತ್ರ ಬುದ್ಧಿ ಬರುತ್ತದೆ ಎಂದರು. ವಿರೋಧ ಪಕ್ಷಗಳು ಪ್ರಧಾನಿ ಮೋಧಿಯನ್ನು ವಿರೋಧಿಸುವ ನಿಟ್ಟಿನಲ್ಲಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ದೇಶದ್ರೋಹದ ಕಾನೂನಿನಲ್ಲಿ ತಿದ್ದುಪಡಿ ತಂದು ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹವರಿಗೆ ಬುದ್ಧಿ ಬರುತ್ತದೆ ಎಂದರು.
ಡಿಕೆಶಿ ಸಿಎಂ ಆಗೋದು 35 ವರ್ಷಗಳ ಹಿಂದೆಯೇ ಫಿಕ್ಸ್ ಆಗಿತ್ತು -ರಾಮ ಅಯೋಧ್ಯೆ ಗೆದ್ದಂತೆ ಡಿಕೆಶಿ ಕರ್ನಾಟಕ ಗೆದ್ದಿದ್ದಾರೆ:ಡಿಕೆ ಶಿವಕುಮಾರ್ 5 ವರ್ಷ ಪೂರ್ಣ ಅವಧಿಗೆ ಸಿಎಂ- ರಾಜಗುರು ದ್ವಾರಕನಾಥ್ ಗುರೂಜಿಯಿಂದ ಸ್ಫೋಟಕ ಭವಿಷ್ಯ
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಅವರ ಆಪ್ತ ಸಲಹೆಗಾರರೂ ಆಗಿರುವ ರಾಜಗುರು ದ್ವಾರಕನಾಥ್ ಗುರೂಜಿ...








