ವ್ಯಕ್ತಿಯೊಬ್ಬರು ತಮಗೆ ತಿಳಿಯದಂತೆ 12 ಲ7 ರೂ. ಮೌಲ್ಯದ ಚಿನ್ನಾಭರಣವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಗೊತ್ತಾಗದೆ ಇವರು ಎಸೆದ ಹಿನ್ನೆಲೆಯಲ್ಲಿ ಕಸದಲ್ಲಿ ಚಿನ್ನಾಭರಣಗಳು ಬಿದ್ದಿದ್ದವು. ಕೊನೆಗೆ ಇಡೀ ದಿನ ಹುಡುಕಿದಾಗ ಅವು ಸಿಕ್ಕಿವೆ.
ಪ್ರಮೋದ್ ಕುಮಾರ್ ಎಂಬುವವರೇ ಆಕಸ್ಮಿಕವಾಗಿ ತ್ಯಾಜ್ಯದಲ್ಲಿ ಚಿನ್ನಾಭರಣ ಎಸೆದಿದ್ದಾರೆ. ಕುಟುಂಬ ಸಮೇತ ಭೋಪಾಲ್ಗೆ ತೆರಳಲು ನಗರದಿಂದ ಹೊರಟಿದ್ದ ಪ್ರಮೋದ್ ಕಳ್ಳತನ ತಡೆಯಲು ಚಿನ್ನಾಭರಣ ಪೆಟ್ಟಿಗೆಯನ್ನು ಡಸ್ಟ್ಬಿನ್ನಲ್ಲಿ ಬಚ್ಚಿಟ್ಟಿದ್ದಾರೆ. ಬೆಲೆಬಾಳುವ ವಸ್ತುಗಳನ್ನು ಸ್ಥಳೀಯ ಪೌರಕಾರ್ಮಿಕರ ಕಸ ಸಂಗ್ರಹಣೆ ವಾಹನ ಅಚಾತುರ್ಯದಿಂದ ಅದನ್ನು ತೆಗೆದುಕೊಂಡು ಹೋಗಿದೆ. ಕೂಡಲೇ ಪ್ರಮೋದ್ ಕುಮಾರ್ ತ್ಯಾಜ್ಯ ನಿರ್ವಹಣಾ ಸಂಸ್ಥೆ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಕೂಡಲೇ ಹುಡುಕಾಟ ನಡೆಸಿದಾಗ ಚಿನ್ನಾಭರಣ ಪತ್ತೆಯಾಗಿವೆ.