ಮಾಧ್ಯಮ ಕ್ಷೇತ್ರದಿಂದ ತಮ್ಮ ವೃತ್ತಿ ಜೀವನ ಆರಂಭಿಸಿ ಇದೀಗ ದೇಶದ 7 ರಾಜ್ಯಗಳಲ್ಲಿ ಉದ್ಯಮ ಆರಂಭಿಸಿರುವ ಸಾಹಸಿಗ ಪಿ. ಆನಂದಕುಮಾರ್.
ದೂರದೃಷ್ಟಿಯ ಯೋಚನೆ, ಯೋಜನೆಯನ್ನು ಮುಂದಿಟ್ಟುಕೊಂಡು ಶುರು ಮಾಡಿರುವ ಉದ್ಯಮವನ್ನು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಬ್ಯಾಂಕಿಂಗ್ ಸೇವೆಯ ಜೊತೆಗೆ ಟಿವಿ ಉದ್ಯಮ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ತಮ್ಮ ಅನುಭವವನ್ನು ಧಾರೆ ಎರೆದು ಪ್ರೋ ವಿನ್ ಮ್ಯಾನೇಜ್?ಮೆಂಟ್ ಸರ್ವೀಸಸ್ ಸಂಸ್ಥೆಯನ್ನು ಕಟ್ಟಿ ಹೆಮ್ಮರವಾಗಿ ಬೆಳೆಸುತ್ತಿದ್ದಾರೆ.
cm cup badminton 2026- Pro win panthers team
ಮೂಲತಃ ಬೆಂಗಳೂರಿನವರೇ ಆದ ಪಿ. ಅನಂದಕುಮಾರ್, ಆರಂಭದಲ್ಲಿ ಮೂನ್ ಟಿವಿಯ ಹಿರಿಯ ವರದಿಗಾರರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಕಾಲೇಜು ಜೀವನದಿಂದಲೇ ಸ್ವಂತ ಉದ್ಯಮ ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅದರ ಫಲವಾಗಿಯೇ ತಮ್ಮೆಲ್ಲ ಅನುಭವವನ್ನು ಧಾರೆ ಎರೆದು ಪ್ರೋ ವಿನ್ ಮ್ಯಾನೇಜ್ಮೆಂಟ್ ಸರ್ವೀಸಸ್ ಸಂಸ್ಥೆಯನ್ನು ಕಟ್ಟಿದರು. ಪಿ. ಆನಂದ್ ಅವರ ಪರಿಶ್ರಮ, ಪ್ರಾಮಾಣಿಕತೆಯಿಂದಲೇ ಪ್ರೋ ವಿನ್ ಮ್ಯಾನೇಜ್ಮೆಂಟ್ ಸರ್ವೀಸಸ್ ಸಂಸ್ಥೆಯನ್ನು ದೇಶದ ಪ್ರಮುಖ ಬ್ಯಾಂಕಿಂಗ್ ಸರ್ವೀಸ್ ಸಂಸ್ಥೆಯನ್ನಾಗಿ ರೂಪಿಸಿದ್ದಾರೆ.
ಪಿ. ಆನಂದಕುಮಾರ್ ನೇತೃತ್ವದ ಪ್ರೋ ವಿನ್ ಮ್ಯಾನೇಜ್ಮೆಂಟ್ ಸರ್ವೀಸಸ್ ಸದ್ಯ ದೇಶದ 7 ರಾಜ್ಯಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದೆ. 140 ಉದ್ಯೋಗಿಗಳು, 64 ಎಕ್ಸಿಕ್ಯುಟಿವ್, 50 ಟೆಲಿಕಾಲರ್ ಮತ್ತು ಲೀಡರ್ಶಿಪ್ ತಂಡದ ಜತೆಗೆ ಅನುಭವಿ ಫಿಲ್ಡ್ ಎಕ್ಸಿಕ್ಯುಟಿವ್ಗಳನ್ನು ಪೆÇ್ರೀ ವಿನ್ ಮ್ಯಾನೇಜ್ಮೆಂಟ್ ಸರ್ವೀಸಸ್ ಹೊಂದಿದೆ. ಈ ಅನುಭವಿಗಳ ತಂಡ ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ವಿಜಯಪುರ, ಬೆಳಗಾವಿ, ಕೇರಳದ ಕೊಚ್ಚಿನ್, ಪಲಕ್ಕಾಡ್, ಪಾಂಡಿಚೆರಿ, ಚೆನ್ನೈ, ಕೋವಲ್, ಸೇಲಂ, ಧರ್ಮಾಪುರ, ಪಾಂಡಿಚೆರಿ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ನೆಲ್ಲೂರು, ವೈಜಾಕ್, ಮಹಾರಾಷ್ಟ್ರ, ಮುಂಬೈ ಮತ್ತು ಒಡಿಸ್ಸಾದ ರಾಜ್ಯಗಳ ಪ್ರಮುಖ ನಗರಗಳಲ್ಲಿ ತಮ್ಮ ಸೇವೆಯನ್ನು ನೀಡುತ್ತಿದೆ. ಒಟ್ಟಾರೆ 50 ಜಿಲ್ಲೆಗಳಲ್ಲಿ 12 ಕಚೇರಿಗಳನ್ನು ಹೊಂದಿದೆ.
ಬ್ಯಾಂಕಿಂಗ್ ಸೇವೆಗೆ ಬರುವಂತಹ ಗ್ರಾಹಕರ ವೆರಿಫಿಕೇಷನ್, ಸಾಲ ವಸೂಲಾತಿ ಸೇರಿದಂತೆ ಮತ್ತಿತರ ಸೇವೆಗಳನ್ನು ಪೆÇ್ರೀ ವಿನ್ ಮ್ಯಾನೇಜ್ಮೆಂಟ್ ಸರ್ವೀಸಸ್ ನೀಡುತ್ತಿದೆ. ಪ್ರಮುಖವಾಗಿ ಎಚ್ಡಿಎಫ್ಸಿ, ಸ್ಟಾರ್ ಕಾರ್ಡ್ ಸೇರಿದಂತೆ ಮತ್ತಿತರ ಬ್ಯಾಂಕ್ಗಳಿಗೆ ತನ್ನ ಸೇವೆಯನ್ನು ನೀಡಲಾಗುತ್ತಿದೆ. ಬ್ಯಾಂಕಿಂಗ್ ಸೇವೆಯ ಜತೆಗೆ ಟಿವಿ ಉದ್ಯಮದಲ್ಲೂ ತಮ್ಮ ಛಾಪನ್ನು ಪಿ. ಆನಂದಕುಮಾರ್ ಮೂಡಿಸಿದ್ದಾರೆ. ಧಾರವಾಹಿ ಸೇರಿದಂತೆ ಟಿವಿಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳ ನಿರ್ಮಾಣವನ್ನೂ ಪಿ. ಆನಂದ್ಕುಮಾರ್ ಮಾಡುತ್ತಿದ್ದಾರೆ. ಸ್ವಂತ ಶ್ರಮ, ಪ್ರಾಮಾಣಿಕತೆಯಿಂದ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪಿ.ಆನಂದಕುಮಾರ್ ಅವರು ಸಿಎಂ ಕಪ್ನ ಭಾಗವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಪ್ರೋ ವಿನ್ ಪ್ಯಾಂಥರ್ಸ್ ತಂಡದ ಮಾಲೀಕರಾಗಿ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ ಕೈ ಜೋಡಿಸಿದ್ದಾರೆ.
ಅವನು ಗುರಿ ಹೊಡೆಯುವ ಸ್ನೈಪರ್. ಬುಲೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಸ್ಟ್ರೈಕರ್. ನಿರಂತರವಾಗಿ ಬೌಲ್ ಮಾಡುವ ಬೌಲಿಂಗ್ ಮೆಷಿನ್. ದಣಿವರಿಯದ ಐರಾನ್ ಮ್ಯಾನ್. ವಿಕೆಟ್ ಪಡೆಯುವ ಹಂಟರ್,...
ರಾಜ್ಯದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ನಿರ್ಬಂಧ ಹೇರಿದ ಬಳಿಕ, ಇದೀಗ ರಾಜ್ಯದ...
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಿರಿಯ ಶಾಸಕರಿಗೆ ಮಂತ್ರಿಗಿರಿ ಕೈತಪ್ಪಿದ್ದರಿಂದ ರಾಜ್ಯದ ವಿವಿಧೆಡೆ...
ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಜುಲೈ 30ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)...
ಮುಂಬೈ: ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ಕನಸಿನ ಯೋಜನೆ ರಾಮಾಯಣ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದ ಸುಳಿಗೆ ಸಿಲುಕಿದೆ. ಬರೋಬ್ಬರಿ...