ದಿನ ಭವಿಷ್ಯ: 23-03-2026
1 ಮೇಷ ರಾಶಿ
ನಿಮ್ಮ ರಾಶ್ಯಾಧಿಪತಿ ಕುಜನ ಪ್ರಭಾವದಿಂದ ಇಂದು ಕಾರ್ಯಕ್ಷೇತ್ರದಲ್ಲಿ ಅಪಾರ ಶಕ್ತಿ ಮತ್ತು ಉತ್ಸಾಹ ಕಂಡುಬರುವುದು. ಚಂದ್ರನ ಚಲನೆಯಿಂದಾಗಿ ವ್ಯಾಪಾರದಲ್ಲಿ ಹೊಸ ಒಪ್ಪಂದಗಳಿಗೆ ಅವಕಾಶ ಸಿಗಲಿದೆ. ಕಚೇರಿಯಲ್ಲಿ ನಿಮ್ಮ ನಾಯಕತ್ವದ ಗುಣಕ್ಕೆ ಪ್ರಶಂಸೆ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದ್ದು ಆರ್ಥಿಕ ಲಾಭದ ನಿರೀಕ್ಷೆ ಇದೆ. ಅತಿಯಾದ ಕೋಪವನ್ನು ನಿಯಂತ್ರಿಸುವುದು ಒಳಿತು.
2 ವೃಷಭ ರಾಶಿ
ಶುಕ್ರಾಚಾರ್ಯರ ಅನುಗ್ರಹದಿಂದ ಇಂದು ಕಲಾತ್ಮಕ ಹಾಗೂ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಸ್ವಲ್ಪ ಏರುಪೇರು ಇರಲಿದ್ದು ಐಷಾರಾಮಿ ವಸ್ತುಗಳ ಮೇಲಿನ ಖರ್ಚಿಗೆ ಕಡಿವಾಣ ಹಾಕುವುದು ಅವಶ್ಯಕ. ವೃತ್ತಿ ಜೀವನದಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆಯುತ್ತದೆ. ಬಂಧುಮಿತ್ರರ ಭೇಟಿಯಿಂದ ಮನಸ್ಸಿಗೆ ಮುದ ಸಿಗುವುದು. ವಾಹನ ಸಂಚಾರದಲ್ಲಿ ಎಚ್ಚರವಿರಲಿ.
3 ಮಿಥುನ ರಾಶಿ
ಬುಧ ಗ್ರಹದ ಅನುಕೂಲತೆಯಿಂದಾಗಿ ನಿಮ್ಮ ಬುದ್ಧಿಶಕ್ತಿ ಮತ್ತು ವಾಕ್ಚಾತುರ್ಯ ಇಂದು ನಿಮಗೆ ಜಯ ತಂದುಕೊಡಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಏಕಾಗ್ರತೆಯಿಂದ ಕೆಲಸ ಮಾಡಿದರೆ ಉತ್ತಮ ಲಾಭ ಪಡೆಯಬಹುದು. ದೂರದ ಪ್ರಯಾಣದ ಯೋಗವಿದ್ದು ಅದರಿಂದ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು. ಹಣಕಾಸು ಹೂಡಿಕೆ ಮಾಡುವ ಮುನ್ನ ಹಿರಿಯರ ಸಲಹೆ ಪಡೆಯುವುದು ಉತ್ತಮ.
4 ಕರ್ಕ ರಾಶಿ
ನಿಮ್ಮ ರಾಶ್ಯಾಧಿಪತಿಯಾದ ಚಂದ್ರನ ದಿನವಾದ್ದರಿಂದ ಇಂದು ನಿಮಗೆ ಅತ್ಯಂತ ಶುಭದಾಯಕವಾಗಿದೆ. ಮಾನಸಿಕ ನೆಮ್ಮದಿ ದೊರೆಯಲಿದ್ದು ಮನೆಗೆ ಬಂಧುಗಳ ಆಗಮನವಾಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಹಾಗೂ ಬಡ್ತಿಯ ಮುನ್ಸೂಚನೆ ಸಿಗುವುದು. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭಾಂಶ ಹೆಚ್ಚಾಗಲಿದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು.
5 ಸಿಂಹ ರಾಶಿ
ಸೂರ್ಯನ ಪ್ರಖರತೆಯಂತೆ ನಿಮ್ಮ ಕೆಲಸದಲ್ಲಿ ಇಂದು ದೃಢತೆ ಮತ್ತು ಆತ್ಮವಿಶ್ವಾಸ ಇರಲಿದೆ. ಸರ್ಕಾರಿ ಕೆಲಸಗಳಲ್ಲಿರುವವರಿಗೆ ಉತ್ತಮ ಅವಕಾಶಗಳಿವೆ ಹಾಗೂ ಬಾಕಿ ಉಳಿದಿರುವ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಸ್ಥರಿಗೆ ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆ ಇದೆ. ಅಹಂಕಾರವನ್ನು ಬದಿಗಿಟ್ಟು ಕುಟುಂಬದ ಸದಸ್ಯರೊಂದಿಗೆ ಪ್ರೀತಿಯಿಂದ ಬೆರೆಯುವುದು ಒಳಿತು.
6 ಕನ್ಯಾ ರಾಶಿ
ಗ್ರಹಗಳ ಅನುಕೂಲಕರ ಸ್ಥಾನದಿಂದಾಗಿ ನೀವು ಕೈಹಾಕಿದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಷೇರುಪೇಟೆ ಅಥವಾ ಕಮಿಷನ್ ಆಧಾರಿತ ವ್ಯವಹಾರಗಳಲ್ಲಿ ಲಾಭ ಕಾದಿದೆ. ಶತ್ರುಗಳ ಬಾಧೆ ದೂರವಾಗುವುದು ಮತ್ತು ನ್ಯಾಯಾಲಯದ ವಿಚಾರಗಳು ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ದಂಪತಿಗಳ ನಡುವೆ ಪ್ರೀತಿ ವಿಶ್ವಾಸ ಹೆಚ್ಚಲಿದೆ. ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದರಿಂದ ಆಹಾರದ ಬಗ್ಗೆ ಎಚ್ಚರವಿರಲಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
7 ತುಲಾ ರಾಶಿ
ಶನಿ ಮಹಾತ್ಮನ ದೃಷ್ಟಿಯ ಕಾರಣದಿಂದ ಕೆಲಸದಲ್ಲಿ ಸ್ವಲ್ಪ ವಿಳಂಬವಾದರೂ ಅಂತಿಮ ಜಯ ನಿಮ್ಮದೇ ಆಗಿರುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಹೊಸ ಒಪ್ಪಂದಗಳು ಲಾಭ ತಂದುಕೊಡಲಿವೆ. ಸಮಾಜದಲ್ಲಿ ನಿಮ್ಮ ಕೀರ್ತಿ ಮತ್ತು ಪ್ರತಿಷ್ಠೆ ವೃದ್ಧಿಯಾಗಲಿದೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಹರಿಸಿ ಹಾಗೂ ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ.
8 ವೃಶ್ಚಿಕ ರಾಶಿ
ಮಂಗಳನ ಪ್ರಭಾವದಿಂದ ಆಸ್ತಿ ಖರೀದಿಯ ಯೋಗ ಅಥವಾ ಮನೆ ಕಟ್ಟುವ ವಿಚಾರದಲ್ಲಿ ಪ್ರಗತಿ ಕಂಡು ಬರಲಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳಿಗೆ ಇಂದು ಮರುಜೀವ ಸಿಗಲಿದೆ. ಉದ್ಯೋಗ ಬದಲಾವಣೆ ಮಾಡಲು ಇದು ಸಕಾಲವಲ್ಲ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯ. ನಿಮ್ಮ ಏಳಿಗೆಯನ್ನು ಸಹಿಸದ ಗುಪ್ತ ಶತ್ರುಗಳ ಬಗ್ಗೆ ಜಾಗರೂಕರಾಗಿರುವುದು ಒಳ್ಳೆಯದು.
9 ಧನುಸ್ಸು ರಾಶಿ
ದೇವಗುರು ಬೃಹಸ್ಪತಿಯ ಕೃಪೆಯಿಂದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗಾವಕಾಶ ಒದಗಿ ಬರಲಿದೆ. ಬ್ಯಾಂಕಿಂಗ್ ಮತ್ತು ಆರ್ಥಿಕ ವಲಯದಲ್ಲಿರುವವರಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ತಂದೆಯವರ ಮಾರ್ಗದರ್ಶನದಿಂದ ನಿಮ್ಮ ಭವಿಷ್ಯದ ಯೋಜನೆಗಳು ಯಶಸ್ವಿಯಾಗಲಿವೆ.
10 ಮಕರ ರಾಶಿ
ನಿಮ್ಮ ರಾಶ್ಯಾಧಿಪತಿ ಶನಿಯ ಪ್ರಭಾವದಿಂದ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ದೊರೆಯುವ ದಿನವಿದು. ಆರ್ಥಿಕ ಸ್ಥಿತಿ ಸಾಧಾರಣವಾಗಿರಲಿದ್ದು ಅನಗತ್ಯ ಖರ್ಚುಗಳನ್ನು ತಡೆಯುವುದು ಅನಿವಾರ್ಯ. ರಾಜಕೀಯ ವ್ಯಕ್ತಿಗಳಿಗೆ ಜನಬೆಂಬಲ ಹೆಚ್ಚಾಗಲಿದೆ. ದೈಹಿಕ ಶ್ರಮ ಹೆಚ್ಚಾಗುವುದರಿಂದ ಆಯಾಸ ಉಂಟಾಗಬಹುದು. ಕೀಲು ನೋವಿನ ಸಮಸ್ಯೆಗಳು ಬಾಧಿಸಬಹುದು ಜಾಗೃತಿ ಇರಲಿ.
11 ಕುಂಭ ರಾಶಿ
ಗ್ರಹಗತಿಗಳ ಸಂಚಾರದಿಂದಾಗಿ ಇಂದು ನೀವು ಹೊಸ ಯೋಜನೆಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಸೂಕ್ತ ದಿನ. ಮಿತ್ರರ ಸಹಾಯದಿಂದ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗುವುದು. ತಾಂತ್ರಿಕ ವಲಯ ಮತ್ತು ಐಟಿ ಕ್ಷೇತ್ರದಲ್ಲಿರುವವರಿಗೆ ವಿದೇಶ ಪ್ರಯಾಣದ ಯೋಗವಿದೆ. ವಿವಾಹ ಆಕಾಂಕ್ಷಿಗಳಿಗೆ ಸೂಕ್ತ ಸಂಬಂಧಗಳು ಒದಗಿ ಬರಲಿವೆ. ದಾನ ಧರ್ಮಗಳನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುವುದು.
12 ಮೀನ ರಾಶಿ
ಗುರುವಿನ ಶುಭ ದೃಷ್ಟಿಯಿಂದಾಗಿ ಕೌಟುಂಬಿಕ ಜೀವನದಲ್ಲಿ ಮಧುರತೆ ಇರಲಿದೆ. ಬಹಳ ದಿನಗಳಿಂದ ಬಾಕಿ ಇದ್ದ ಸಾಲ ಮರುಪಾವತಿಯಾಗಲಿದೆ. ಕೃಷಿಕರಿಗೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಉತ್ತಮ ಲಾಭವಾಗಲಿದೆ. ದೈನಂದಿನ ಕೆಲಸಗಳಲ್ಲಿ ಶ್ರದ್ಧೆ ಇರಲಿ ಹಾಗೂ ಯೋಗ ಧ್ಯಾನದ ಮೊರೆ ಹೋಗುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗುವುದು.







