ADVERTISEMENT
Wednesday, June 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

admin by admin
June 17, 2026
in Newsbeat, Sports, ಕ್ರೀಡೆ
Iran's 33-year-old goalkeeper Alireza Beirand

Iran's 33-year-old goalkeeper Alireza Beirand

Share on FacebookShare on TwitterShare on WhatsappShare on Telegram

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ ಫುಟ್‍ಬಾಲ್ ಆಟದ ಮೇಲೆ ಎಲ್ಲಿಲ್ಲದ ಪ್ರೀತಿ. ಕುರಿ ಮೇಯಿಸುತ್ತಾ, ಸ್ಥಳೀಯ ಹುಡುಗರ ಜೊತೆ ಕಲ್ಲನ್ನು ದೂರ ಎಸೆಯುವ ದಾಲ್ ಪರಾನ್ ಎಂಬ ಆಟವನ್ನು ಆಡುತ್ತಿದ್ದ. ಇದು ಅಲ್ಲಿನ ಜನರ ಗಾಮೀಣ ಕ್ರೀಡೆ ಕೂಡ ಆಗಿತ್ತು. ಆದ್ರೆ ಈ ಹುಡುಗ ತಾನೊಬ್ಬ ಫುಟ್‍ಬಾಲ್ ಆಟಗಾರನಾಗಬೇಕು ಎಂದು ಕನಸು ಕಾಣುತ್ತಿದ್ದ.

Related posts

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

June 17, 2026
66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

June 17, 2026

ಆದ್ರೆ ಮಗನ ಫುಟ್‍ಬಾಲ್ ಪ್ರೀತಿಗೆ ಅಪ್ಪ ವಿರೋಧ ವ್ಯಕ್ತಪಡಿಸಿದ್ದ.ಫುಟ್‍ಬಾಲ್‍ನಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದು ತಂದೆಯ ವಾದವಾಗಿತ್ತು. ಇದ್ರಿಂದ ಮನಿಸಿಕೊಂಡು ಮನೆ ಬಿಟ್ಟು ಓಡಿ ಹೋಗಿದ್ದ. ಸಂಬಂಧಿಕರಿಂದ ಸಾಲ ಮಾಡಿಕೊಂಡು ಹೋಗಿದ್ದ ಹುಡುಗ ಹೋಗಿ ತಲುಪಿದ್ದು ಗೊತ್ತು ಗುರಿ ಇಲ್ಲದ ಊರನ್ನು. ಕೈಯಲ್ಲಿದ್ದ ಕಾಸು ಎಲ್ಲಾ ಖರ್ಚಾಗಿ ಹೋಗಿತ್ತು. ಊಟ, ತಿಂಡಿಗೂ ದುಡ್ಡಿಲ್ಲ. ಅಂದ ಮೇಲೆ ರೂಂ ಎಲ್ಲಿ ಸಿಗುತ್ತೆ. ಬೀದಿ ಬೀದಿಗಳಲ್ಲಿ ಸುತ್ತಾಡಿ ಕೊನೆಗೆ ಒಂದು ಫುಟ್‍ಬಾಲ್ ಕ್ಲಬ್‍ನ ಗೇಟ್ ಮುಂದೆ ರಾತ್ರಿ ಕಳೆದಿದ್ದ. ಸುಸ್ತಾಗಿ ಮಲಗಿದ್ದವನಿಗೆ ಬೆಳಗ್ಗೆ ಆಗಿದ್ದೇ ಗೊತ್ತಾಗಲಿಲ್ಲ.

ಕಣ್ಣು ಬಿಟ್ಟು ನೋಡಿದಾಗ ಅವನಿಗೆ ಅಚ್ಚರಿ. ಮಲಗಿದ್ದ ಜಾಗದಲ್ಲಿ ನಾಣ್ಯಗಳು ಬಿದ್ದಿದ್ದವು. ಜನ ಈ ಹುಡುಗನನ್ನು ಭಿಕ್ಷುಕ ಅಂತ ಅಂದುಕೊಂಡಿದ್ದರು. ಅವನ ಪರಿಸ್ಥಿತಿಯನ್ನು ನೋಡಿ ಭಿಕ್ಷೆ ಹಾಕಿದ್ದರು. ಆದ್ರೂ ಆ ಹುಡುಗ ತಲೆಕೆಡಿಸಿಕೊಳ್ಳಲಿಲ್ಲ. ಬಿದ್ದಿರುವ ನಾಣ್ಯಗಳನ್ನು ಸೇರಿಸಿಕೊಂಡು ಹೊಟ್ಟೆ ತುಂಬಾ ತಿಂಡಿ ಮಾಡಿದ್ದ.

ಅದೇನೋ ಗೊತ್ತಿಲ್ಲ. ಫುಟ್‍ಬಾಲ್ ಮೇಲಿನ ಆದಮ್ಯ ಪ್ರೀತಿ ಆತನನ್ನು ಸೆಳೆಯುತ್ತಿತು. ಅದಕ್ಕಾಗಿ ಏನು ಮಾಡಲು ಬೇಕಿದ್ರೂ ರೆಡಿಯಾಗಿದ್ದ ಆ ಭಾಲಕ. ಫುಟ್‍ಬಾಲ್ ಕ್ಲಬ್‍ನಲ್ಲಿ ಹುಡುಗರು ಆಡುತ್ತಿರುವುದನ್ನು ಆಸಕ್ತಿಯಿಂದಲೇ ನೋಡುತ್ತಿದ್ದ. ಆದ್ರೆ ಆ ಹುಡುಗರ ಜೊತೆ ಆಟವಾಡಲು ಅಂಜಿಕೆ. ಆದ್ರೂ ಅವರ ಸ್ನೇಹ ಸಂಪಾದಿಸಿಕೊಂಡು ಫುಟ್‍ಬಾಲ್ ಆಡುವುದನ್ನು ಕಲಿತ. ಆದ್ರೆ ದುಡ್ಡು ಇಲ್ಲದೆ ಹೊಟ್ಟೆ ತುಂಬಿಸಲು ಪರದಾಟ ನಡೆಸಿದ್ದ. ಅದಕ್ಕಾಗಿ ಬೀದಿ ರಸ್ತೆಗಳನ್ನು ಗುಡಿಸುತ್ತಿದ್ದ. ಕಾರು ವಾಶ್ ಮಾಡುತ್ತಿದ್ದ. ಬಟ್ಟೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದ. ಹೀಗೆ ಕೂಲಿ ಕೆಲಸ ಮಾಡ್ಕೊಂಡು ಮುಂದೆ ಕ್ಲಬ್ ಮಟ್ಟದ ಫುಟ್‍ಬಾಲ್ ಆಟಗಾರನಾದ. ಆ ನಂತರ ಹಿಂತಿರುಗಿ ನೋಡಲೇ ಇಲ್ಲ.

21 ವರ್ಷಗಳ ನಂತರ ಅಂದ್ರೆ ಇದೀಗ ಅವತ್ತಿನ 12 ವರ್ಷದ ಕುರಿಗಾಯಿ ಬಾಲಕನಿಗೆ ಈಗ 33ರ ಹರೆಯ. ಆರುವರೆ ಅಡಿ ಎತ್ತರದ ಅಜಾನುಬಾಹು. ಈ ಯುವಕನನ್ನು ಇಂದು ಆ ದೇಶವೇ ಹೆಮ್ಮೆಯಿಂದ ಆರಾಧಿಸುತ್ತಿದೆ. ಅವನ ಫುಟ್‍ಬಾಲ್ ಆಟದ ವೈಖರಿಯನ್ನು ಮೆಚ್ಚಿ ಕೊಂಡಾಡುತ್ತಿದೆ. ದೇಶದ ಕ್ರೀಡಾಪಟುಗಳಿಗೆ ಆತನೇ ಸ್ಪೂರ್ತಿಯ ಚಿಲುಮೆ. ಆತನ ಬದುಕಿನ ಚಿತ್ರಣ ಎಲ್ಲರಿಗೂ ಮಾದರಿಯಾಗುವಂತಹುದ್ದು. ಕುರಿ ಮೇಯಿಸುವುದು ಕುಟುಂಬದ ಕಾಯಕವಾದ್ರೂ ಫುಟ್‍ಬಾಲ್ ಸೆಳೆತ ಆತನ ಬದುಕಿನ ಚಿತ್ರಣವನ್ನೇ ಬದಲಾಯಿಸಿತ್ತು. ಅಪ್ಪನ ವಿರೋಧ ಲೆಕ್ಕಿಸದೇ ಇಂದು ತಾನು ಅಂದುಕೊಂಡಿರುವುದನ್ನು ಸಾಧಿಸಿದ್ದಾನೆ.

ಹೌದು, ಆತನ ಹೆಸರು ಆಲಿರೇಝಾ ಬೇರಾನ್ ವಾಂಡ್. ಇರಾನ್ ಫುಟ್‍ಬಾಲ್ ತಂಡದ ಗೋಲು ಕೀಪರ್. ಹುಟ್ಟಿದ್ದು ಸೆಪ್ಟಂಬರ್ 21. 1992ರಲ್ಲಿ. ಇರಾನ್‍ನ ಲೊರೆಸ್ಟಾನ್ ಪ್ರಾಂತ್ಯದ ಸಾರಬ್ ಇ ಯಸ್ ಎಂಬ ಸಣ್ಣ ಗ್ರಾಮದಲ್ಲಿ. ಅಷ್ಟಕ್ಕೂ ಅಂದು ಮನೆ ಬಿಟ್ಟು ಓಡಿ ಹೋಗಿದ್ದ ಆಲಿರೇಝಾ ಆಶ್ರಯ ಪಡೆದುಕೊಂಡಿದ್ದು ಟೆಹ್ರಾನ್‍ನಲ್ಲಿ. ಅಲ್ಲಿ ಸ್ಥಳೀಯ ಕ್ಲಬ್‍ಗಳ ಪರವಾಗಿ ಆಡುತ್ತಿದ್ದ ಆಲಿರೇಝ್ ಆರಂಭದಲ್ಲಿ ಸ್ಟ್ರೈಕರ್ ಆಗಿದ್ದ. ಬಳಿಕ ಗೋಲು ಕೀಪಿಂಗ್ ಮಾಡಲು ಶುರು ಮಾಡಿದ್ದ. ಇದೀಗ ಫುಟ್‍ಬಾಲ್ ಜಗತ್ತಿನ ಶ್ರೇಷ್ಠ ಗೋಲು ಕೀಪರ್‍ಗಳಲ್ಲಿ ಒಬ್ಬನಾಗಿದ್ದಾನೆ. ಅಂದು ಟೈಂಪಾಸ್‍ಗಾಗಿ ದಾಲ್ ಪರಾನ್ ಆಡುತ್ತಿದ್ದ ಅಲಿರೆಝಾ, ಇಂದು ತನ್ನ ಕೈಯಿಂದಲೇ ಚೆಂಡನ್ನು ಫುಟ್‍ಬಾಲ್ ಅಂಗಣದ ಮಧ್ಯಭಾಗದ ತನಕ ಎಸೆಯುತ್ತಾನೆ. 2016ರಲ್ಲಿ ದಕ್ಷಿಣ ಕೊರಿಯಾ ವಿರುದ್ದದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪೆನಾಲ್ಟಿ ಬಾಕ್ಸ್‍ನಿಂದ ಕೈಯಿಂದಲೇ ಚೆಂಡನ್ನು 61 ಮೀಟರ್ ದೂರ ಎಸೆದು ದಾಖಲೆ ಕೂಡ ನಿರ್ಮಿಸಿದ್ದಾನೆ. ಹೀಗೆ ಶುರುವಾದ ಆಲಿರೇಝಾ ಅವರ ಫುಟ್‍ಬಾಲ್ ಜರ್ನಿ ಇಂದು ಅಮೆರಿಕಾ, ಮೆಕ್ಸಿಕೋ, ಕೆನಡಾ ಆತಿಥ್ಯದ ಫಿಫಾ ವಿಶ್ವಕಪ್ ಟೂರ್ನಿಯ ತನಕ ಬಂದು ನಿಂತಿದೆ.

ಇರಾನ್ ತಂಡದ ವಿವಿಧ ವಯೋಮಿತಿ ಟೂರ್ನಿಗಳಲ್ಲಿ ಗಮನ ಸೆಳೆದ ಆಲಿರೇಝಾ, 19 ವಯೋಮಿತಿ ಫಿಫಾ ವಿಶ್ವಕಪ್ ಮತ್ತು 20 ವಯೋಮಿತಿಯ ಇರಾನ್ ತಂಡದಲ್ಲೂ ಸ್ಥಾನಪಡೆದುಕೊಂಡಿದ್ದ. 2014ರಲ್ಲಿ ತನ್ನ 22ರ ಹರೆಯದಲ್ಲಿಯೇ ಇರಾನ್ ರಾಷ್ಟ್ರೀಯ ತಂಡವನ್ನು ಸೇರಿಕೊಂಡ. ಅನೇಕ ಟೂರ್ನಿ ಮತ್ತು ಕ್ಲಬ್ ಲೀಗ್‍ಗಳಲ್ಲಿ ಗಮನ ಸೆಳೆದ ಆಲಿರೇಝಾ ರಷ್ಯಾ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ಕೂಡ ಸಫಲನಾಗಿದ್ದ. ಅದ್ಭುತ ಗೋಲು ಕೀಪಿಂಗ್ ಮೂಲಕ ಗಮನ ಕೂಡ ಸೆಳೆದಿದ್ದ. ಅದರಲ್ಲೂ ಕ್ರಿಸ್ಟಿಯಾನೋ ರೋನಾಲ್ಡೋ ಅವರ ಪೆನಾಲ್ಟಿ ಕಿಕ್ ಅನ್ನು ತಡೆದ ರೀತಿಗೆ ಫುಟ್‍ಬಾಲ್ ಜಗತ್ತು ಅಚ್ಚರಿಗೊಂಡಿತ್ತು. ಬಳಿಕ 2022 ಕತಾರ್ ಫಿಫಾ ವಿಶ್ವಕಪ್, ಇದೀಗ 2026ರ ಫಿಫಾ ವಿಶ್ವಕಪ್‍ನಲ್ಲೂ ಗಮನ ಸೆಳೆಯುತ್ತಿದ್ದಾನೆ.

ಒಟ್ಟಿನಲ್ಲಿ ಅಂದು ದುಡ್ಡಿಲ್ಲದೆ, ಭಿಕಾರಿಯಾಗಿ ಊಟ ತಿಂಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದ ಆಲಿರೇಝಾ ಬೇರಾನ್‍ವಾಂಡ್‍ಗೆ ಫುಟ್‍ಬಾಲ್ ಆಟ ಮಾತ್ರ ಕೈ ಬಿಡಲಿಲ್ಲ. ಹೆತ್ತವರ ಪ್ರೀತಿಯನ್ನು ಕಳೆದುಕೊಂಡ್ರೂ ಫುಟ್‍ಬಾಲ್ ಪ್ರೀತಿಯನ್ನು ಒಲಿಸಿಕೊಳ್ಳಲು ಯಶಸ್ವಿಯಾದ. ಅಂದು ಕುರಿಗಾಯಿ ಬಾಲಕ. ಇಂದು ಇರಾನ್ ಫುಟ್‍ಬಾಲ್ ತಂಡದ ಸೂಪರ್ ಸ್ಟಾರ್ ಗೋಲು ಕೀಪರ್. ಅಂದು ನಿರ್ಗತಿಕ ಅಂತ ಭಿಕ್ಷೆ ಹಾಕಿದವರು ಇಂದು ಆಲಿರೇಝಾನ  ಸಾಧನೆಗೆ ಜೈಕಾರ ಹಾಕುತ್ತಿದ್ದಾರೆ. ಅಂದು ತುತ್ತು ಅನ್ನಕ್ಕಾಗಿ ಬೀದಿ ಬದಿ ಕ್ಲೀನ್ ಮಾಡ್ಕೊಂಡು ಬದುಕು ಸಾಗಿಸುತ್ತಿದ್ದ ಆಲಿರೇಝಾ ಇಂದು ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆ. ಕೇವಲ 20 ವರ್ಷಗಳಲ್ಲಿ ಆಲಿರೇಝಾ ಬೇರಾನ್‍ವಾಂಡ್‍ಗೆ ನೇಮ್ -ಫೇಮ್ ಹೀಗೆ ಎಲ್ಲವನ್ನೂ ಫುಟ್‍ಬಾಲ್ ಕೊಟ್ಟಿದೆ. ಲೈಫ್ ಈಸ್ ಬ್ಯೂಟಿಫುಲ್ ಅಲ್ವಾ..!

ಸನತ್ ರೈ

 

Tags: #Alireza Beiranvand#Cristiano Ronaldo penalty save#Inspiring Football Story#Iran Goalkeeper#Longest football throw record#saakshatv#Shepherd to Footballer#Sports motivation story
ShareTweetSendShare
Join us on:

Related Posts

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

by Shwetha
June 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಸಿ...

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

by Shwetha
June 17, 2026
0

ರೌಡಿಪಟ್ಟಿಯಿಂದ 66 ರೌಡಿಶೀಟರ್‌ಗಳ ಹೆಸರನ್ನು ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪೊಲೀಸ್...

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

by Shwetha
June 17, 2026
0

ಚೆನ್ನೈ: ಮುಂಬರುವ ನೀಟ್ ಯುಜಿ ಮರುಪರೀಕ್ಷೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಭಾವಿ ನಾಯಕ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

RSS ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ; ಪಾರದರ್ಶಕತೆ ಕುರಿತು ಮಹತ್ವದ ಹೇಳಿಕೆ

by Shwetha
June 17, 2026
0

ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಯಾವುದೇ ಸಂಘ-ಸಂಸ್ಥೆ ದೇಶದ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಸಿದ್ದರಾಮಯ್ಯ ಶಕ್ತಿಗೆ ಹಿನ್ನಡೆ? – ಮೂಲ ವರ್ಸಸ್ ವಲಸೆ ಕಾಂಗ್ರೆಸ್ಸಿಗರ ಮುಸುಕಿನ ಗುದ್ದಾಟ: ಅಹಿಂದ ನಾಯಕರ ಅಸಮಾಧಾನದ ಹಿಂದೆ ಅಡಗಿದೆಯೇ ಗುಟ್ಟು?

by Shwetha
June 17, 2026
0

ರಾಜ್ಯ ರಾಜಕಾರಣದ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಸಿದ್ದರಾಮಯ್ಯ ಅವರ ಅಹಿಂದ ಶಕ್ತಿ ಈಗ ಒಳಗಿನಿಂದಲೇ ಕುಸಿಯತೊಡಗಿದೆಯೇ ಎಂಬ ಗಂಭೀರ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ದಶಕಗಳಿಂದ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram