ಚಾಮರಾಜನಗರ : ಬಿಆರ್ ಟಿ ಹುಲಿ ಅರಣ್ಯ ಪ್ರದೇಶದಲ್ಲಿ ಬ್ಲಾಕ್ ಪ್ಯಾಂಥರ್ ಪತ್ತೆಯಾಗಿದೆ. ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಕರಿಚಿರತೆ ಸಂಚರಿಸಿದ್ದು, ಬೈಲೂರು ಅರಣ್ಯ ವಲಯದಲ್ಲಿ ಕರಿಚಿರತೆ ನಡೆದು ಹೋಗುತ್ತಿರುವ ದೃಷ್ಯ ಹುಲಿ ಗಣತಿಗಾಗಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ ಈ ಚಿರತೆ ಮಹದೇಶ್ವರ ವನ್ಯಜೀವಿ ಧಾಮದಿಂದ ಬಂದಿದೆಯೇ ಅಥವಾ ಬೇರೆ ಇನ್ನೆಲ್ಲಾದರೂ ಕರಿಚಿರತೆ ಇರುವ ಕುರಿತು ಪರಿಶೀಲಿಸಲಾಗುತ್ತಿದೆ. ಅಂದಾಜು 4 ವರ್ಷದ ಕರಿಚಿರತೆ ಇದಾಗಿದ್ದು ಚಾಮರಾಜನಗರದಲ್ಲೂ ಕರಿಚಿರತೆ ಇರುವುದು ಇದೀಗ ಖಾತ್ರಿಯಾಗಿದೆ. ಕರಿಚಿರತೆ ಪತ್ತೆಯಾಗಿರುವ ಬಗ್ಗೆ ಬಿಆರ್ ಟಿ ಡಿಸಿಎಫ್ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದು, ಯಾವ ವ್ಯಾಪ್ತಿಯಿಂದ ಬಂದಿದೆ ಎಂಬುದರ ಬಗ್ಗೆ ಇನ್ನೂ ತನಿಖಾ ಹಂತದಲ್ಲಿದೆ.
ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!
ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದ್ದ ಮಹಾ ಘರ್ಷಣೆಯೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೆಜಿಎಫ್ 2 ಬಿಡುಗಡೆಯಾಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಯಶ್...








