ಬೆಳಗಾವಿ: ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆ, ನೀರಾವರಿ ನಿಗಮ ಪ್ರವಾಹದ ಮುನ್ಸೂಚನೆ ನಿಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಿಡಕಲ ಜಲಾಶಯಕ್ಕೆ ಶೇ 80% ರಷ್ಟು ಒಳ ಹರಿವು ಹೆಚ್ಚಳವಾಗಿದ್ದು, ಒಳ ಹರಿವು ಹೆಚ್ಚಳದಿಂದ ಕ್ರಸ್ಟ್ ಗೇಟ್ ಮೂಲಕ ನೀರು ಹರಿ ಬಿಡುವಂತೆ ಸೂಚನೆ ನೀಡಲಾಗಿದೆ. ಇನ್ನೂ ನೆರೆ ಭೀತಿ ಇರುವ ಹಿನ್ನೆಲೆ ಹಿರಣ್ಯಕೇಶಿ ನದಿ ದಂಡದಲ್ಲಿ ಇರುವ ಗ್ರಾಮಸ್ಥರು ಜಾನುವಾರ ಸಮೇತ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನೀರಾವರಿ ನಿಗಮ ಸೂಚಿಸಿದೆ. ಇಂಗಳಗಿ, ಲೇಬರ್ ಕ್ಯಾಂಪ್ ಶಿಂದೀಹಟ್ಟಿ, ನಿರ್ವಾನಟ್ಟಿ, ನದಿಗುಡಿಕೇತರ, ಘೋಡಗೇರಿ, ಶಿವಾಪೂರ, ಸುಲ್ತಾನಪೂರ, ನೋಗಿನಹಾಳ, ಅವರಗೋಳ, ಸೇರಿದಂತೆ ಕೋಟಬಾಗಿ, ಗುಡಸ, ಜಂಗಟಿಹಾಳ, ಶಿರಡಾಣ, ನಂದಗಾವ , ಮುತ್ತ್ನಾಳ, ಖಾನಾಪೂರ ಹಾಗೂ ಸಾವಳಗಿ , ಧುಪದಾಳ ಗ್ರಾಮಗಳು ಅಪಾಯದ ಅಂಚಿನಲ್ಲಿದ್ದು, ಈ ಗ್ರಾಮಗಳಲ್ಲಿನ ಜನರಿಗೆ ಸೂಚನೆ ಪ್ರಕಟಿಸಲಾಗಿದೆ.
ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ
ಜಾಮ್ನಗರ - ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು...








