ಬೆಳಗಾವಿ: ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆ, ನೀರಾವರಿ ನಿಗಮ ಪ್ರವಾಹದ ಮುನ್ಸೂಚನೆ ನಿಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹಿಡಕಲ ಜಲಾಶಯಕ್ಕೆ ಶೇ 80% ರಷ್ಟು ಒಳ ಹರಿವು ಹೆಚ್ಚಳವಾಗಿದ್ದು, ಒಳ ಹರಿವು ಹೆಚ್ಚಳದಿಂದ ಕ್ರಸ್ಟ್ ಗೇಟ್ ಮೂಲಕ ನೀರು ಹರಿ ಬಿಡುವಂತೆ ಸೂಚನೆ ನೀಡಲಾಗಿದೆ. ಇನ್ನೂ ನೆರೆ ಭೀತಿ ಇರುವ ಹಿನ್ನೆಲೆ ಹಿರಣ್ಯಕೇಶಿ ನದಿ ದಂಡದಲ್ಲಿ ಇರುವ ಗ್ರಾಮಸ್ಥರು ಜಾನುವಾರ ಸಮೇತ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನೀರಾವರಿ ನಿಗಮ ಸೂಚಿಸಿದೆ. ಇಂಗಳಗಿ, ಲೇಬರ್ ಕ್ಯಾಂಪ್ ಶಿಂದೀಹಟ್ಟಿ, ನಿರ್ವಾನಟ್ಟಿ, ನದಿಗುಡಿಕೇತರ, ಘೋಡಗೇರಿ, ಶಿವಾಪೂರ, ಸುಲ್ತಾನಪೂರ, ನೋಗಿನಹಾಳ, ಅವರಗೋಳ, ಸೇರಿದಂತೆ ಕೋಟಬಾಗಿ, ಗುಡಸ, ಜಂಗಟಿಹಾಳ, ಶಿರಡಾಣ, ನಂದಗಾವ , ಮುತ್ತ್ನಾಳ, ಖಾನಾಪೂರ ಹಾಗೂ ಸಾವಳಗಿ , ಧುಪದಾಳ ಗ್ರಾಮಗಳು ಅಪಾಯದ ಅಂಚಿನಲ್ಲಿದ್ದು, ಈ ಗ್ರಾಮಗಳಲ್ಲಿನ ಜನರಿಗೆ ಸೂಚನೆ ಪ್ರಕಟಿಸಲಾಗಿದೆ.
ಸ್ಯಾಂಡಲ್ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಮಾಲೀಕರಾದ ಬಾದ್ಷಾ ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಾಹನ ಪ್ರೇಮ ಇಡೀ ದೇಶಕ್ಕೇ ಗೊತ್ತು. ಅವರ ಬಳಿ ಇರುವ ಐಷಾರಾಮಿ ಕಾರುಗಳ ಸಾಲಿಗೆ ಈಗ ವಿಮಾನದಂತಹ...








