ಡಿಜೆ ಹಳ್ಳಿ ಪ್ರಕರಣದ ಆರೋಪಿಯಾಗಿರುವ ಕಾರ್ಪರೇಟರ್ ಪತಿ ಖಲೀಂಪಾಷ ಮೋಬೈಲ್ ನಿಂದ ಪ್ರಕರಣ ಬಗ್ಗೆ ಸ್ಪೋಟಕ ಮಾಹಿತಿ ಬಯಲಾಗಿದೆ. ಈ ಪ್ರಕರಣ ಆಕಸ್ಮಿಕವಲ್ಲ ಪೂರ್ವ ನಿಯೋಜಿತ ಎನ್ನುವುದಕ್ಕೆ ಮೊಬೈಲ್ ನಲ್ಲಿ ಸಾಕ್ಷಿ ಪತ್ತೆಯಾಗಿದೆ. ಖಲೀಂಪಾಷ ಆ. 11 ರಂದು ಅಂದ್ರೆ ಗಲಭೆ ನಡೆದ ದಿನ ಮಧ್ಯಾಹ್ನದಿಂದ ಯಾರು ಯಾರು ಎಲ್ಲೆಲ್ಲಿ ಟೀಂ ಜೊತೆ ಇರಬೇಕು ಅನ್ನೋ ಮೇಸೆಜ್ ಕಳಿಸಿದ್ದ ವಿಚಾರ ಬಯಲಾಗಿದೆ.
ಡಿ.ಜೆ ಹಳ್ಳಿ ಪೊಲೀಸ್ ಠಾಣೆ ಟೀಂ 1 , ಟೀಂ- 2 ಅಖಂಡ ಶ್ರೀನಿವಾಸ್ ಮನೆ ಬಳಿ.ಟೀಂ-3 ಅಟ್ಯಾಕ್ ಹೀಗೆ ಜನಗಳನ್ನು ಸೇರಿಸೋಕೆ ವ್ಯವಸ್ಥಿತ ಸಂಚು ರೂಪಿಸಿರುವ ಖಲೀಂಪಾಷನ ಕೃತ್ಯ ಜಗತ್ ಜಾಹೀರಾಗಿದೆ. ಇನ್ನೂ ವಿಚಾರಣೆಯಲ್ಲಿ ಸತ್ಯ ಬಾಯಿ ಬಿಡದ ಹಿನ್ನಲೆ ಖಲೀಂಪಾಷನನ್ನು ಮತ್ತೆ ಸಿಸಿಬಿ ಕಸ್ಟಡಿಗೆ ಪಡೆಯಲು ಪೊಲೀಸರು ತಯಾರಿ ನಡೆಸಿದ್ದಾರೆ.
ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ
ಬೆಂಗಳೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಅತ್ಯಂತ ಸಂತಸದ ಸುದ್ದಿಯೊಂದು ಸಿಗುವ ಲಕ್ಷಣಗಳು ದಟ್ಟವಾಗಿವೆ. ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಕೇಂದ್ರ ಸರ್ಕಾರದ ಮಾದರಿಯಲ್ಲಿ...








