ಡಿಜೆ ಹಳ್ಳಿ ಪ್ರಕರಣದ ಆರೋಪಿಯಾಗಿರುವ ಕಾರ್ಪರೇಟರ್ ಪತಿ ಖಲೀಂಪಾಷ ಮೋಬೈಲ್ ನಿಂದ ಪ್ರಕರಣ ಬಗ್ಗೆ ಸ್ಪೋಟಕ ಮಾಹಿತಿ ಬಯಲಾಗಿದೆ. ಈ ಪ್ರಕರಣ ಆಕಸ್ಮಿಕವಲ್ಲ ಪೂರ್ವ ನಿಯೋಜಿತ ಎನ್ನುವುದಕ್ಕೆ ಮೊಬೈಲ್ ನಲ್ಲಿ ಸಾಕ್ಷಿ ಪತ್ತೆಯಾಗಿದೆ. ಖಲೀಂಪಾಷ ಆ. 11 ರಂದು ಅಂದ್ರೆ ಗಲಭೆ ನಡೆದ ದಿನ ಮಧ್ಯಾಹ್ನದಿಂದ ಯಾರು ಯಾರು ಎಲ್ಲೆಲ್ಲಿ ಟೀಂ ಜೊತೆ ಇರಬೇಕು ಅನ್ನೋ ಮೇಸೆಜ್ ಕಳಿಸಿದ್ದ ವಿಚಾರ ಬಯಲಾಗಿದೆ.
ಡಿ.ಜೆ ಹಳ್ಳಿ ಪೊಲೀಸ್ ಠಾಣೆ ಟೀಂ 1 , ಟೀಂ- 2 ಅಖಂಡ ಶ್ರೀನಿವಾಸ್ ಮನೆ ಬಳಿ.ಟೀಂ-3 ಅಟ್ಯಾಕ್ ಹೀಗೆ ಜನಗಳನ್ನು ಸೇರಿಸೋಕೆ ವ್ಯವಸ್ಥಿತ ಸಂಚು ರೂಪಿಸಿರುವ ಖಲೀಂಪಾಷನ ಕೃತ್ಯ ಜಗತ್ ಜಾಹೀರಾಗಿದೆ. ಇನ್ನೂ ವಿಚಾರಣೆಯಲ್ಲಿ ಸತ್ಯ ಬಾಯಿ ಬಿಡದ ಹಿನ್ನಲೆ ಖಲೀಂಪಾಷನನ್ನು ಮತ್ತೆ ಸಿಸಿಬಿ ಕಸ್ಟಡಿಗೆ ಪಡೆಯಲು ಪೊಲೀಸರು ತಯಾರಿ ನಡೆಸಿದ್ದಾರೆ.
ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟದಿಂದಾಗಿ ರಾಜೀನಾಮೆ ನೀಡಿದ ನಾಗೇಂದ್ರ, ಇದು ದಲಿತ ಸಮುದಾಯಕ್ಕೆ ಸಂದ ಜಯ: ಪ್ರತಿಪಕ್ಷ ನಾಯಕ ಆರ್.ಅಶೋಕ
ಇದು ಕೇವಲ ಬಿಜೆಪಿಗೆ ಸಿಕ್ಕಿರುವ ಜಯವಲ್ಲ, ಇದು ಇಡೀ ದಲಿತ ಸಮುದಾಯಕ್ಕೆ ಸಂದಿರುವ ಜಯ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ...








