ಮೈಸೂರು: ಕೊರೊನಾ ನಡುವೆಯೂ ನಡೆಯುತ್ತಿರುವ ಸರಳ ಮೈಸೂರು ದಸರಾಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು.
ಅಭಿಮನ್ಯು ಹೆಗಲಮೇಲೆ ಚಿನ್ನದ ಅಂಬಾರಿಯಲ್ಲಿ ಆಸೀನಳಾದ ನಾಡದೇವತೆ ಚಾಮುಂಡೇಶ್ವರಿಗೆ ಸಿಎಂ ಯಡಿಯೂರಪ್ಪ ಶುಭ ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ರಾಜವಂಶಸ್ಥ ಯಧುವೀರ್, ಮೇಯರ್ ತಸ್ಮಿಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಕೂಡ ನಾದೇವಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ವೇಳೆ ನಾಡಗೀತೆ ಮೊಳಗಿಸಲಾಯಿತು. ಜತೆಗೆ ಫಿರಂಗಿಗಳ ಮೂಲಕ ಏಳು ಸುತ್ತು ಸಿಡಿಮದ್ದುಗಳನ್ನು ಸಿಡಿಸಲಾಯಿತು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಭುವನೇಶ್ವರಿ ದೇವಾಲಯ ಮಾರ್ಗವಾಗಿ ಆರಂಭವಾದ ಜಂಬೂಸವಾರಿ ಮೆರವಣಿಗೆ ಜಯರಾಮ ದ್ವಾರದ ಕಡೆಗೆ ಸಾಗಿತು. ನಂತರ ಎಡಕ್ಕೆ ತಿರುಗಿ ಪಾರ್ಕ ಮೂಲಕ ಕೇವಲ 40 ನಿಮಿಷಗಳಲ್ಲಿ ಜಂಬೂಸವಾರಿ ಅಂತ್ಯಗೊಂಡಿತು(2020 mysore Dasara ended simply).
ಅರಮನೆ ಆವರಣದಲ್ಲಿ ಕೇವಲ 400 ಮೀಟರ್ ಸಾಗುವ ಮೂಲಕ 2020ರ ಕೊರೊನಾ ದಸರಾ ಎಂಬ ಹಣೆಪಟ್ಟಿಯೊಂದಿಗೆ ಮೈಸೂರು ದಸರಾ ಸಂಭ್ರಮಕ್ಕೆ ತೆರೆಬಿದ್ದಿದೆ.
ಇತಿಹಾಸದ ಪುಟ ಸೇರಿದ 2020ರ ಸರಳ ದಸರಾ..!
ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ 2020ರ ಮೈಸೂರು ದಸರಾದ ಜಂಬೂಸವಾರಿ ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಯಿತು.

ಇದು 410ನೇ ವರ್ಷದ ದಸರಾ ಮಹೋತ್ಸವ. ವಿಜಯನಗರ ಅರಸರ ಕಾಲದಿಂದಲೂ ದಸರಾ ಆಚರಣೆಯನ್ನು ಮೈಸೂರು ರಾಜವಂಶಸ್ಥರು ನಡೆಸಿಕೊಂಡು ಬಂದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ದಸರಾ ಮಹೋತ್ಸವವನ್ನು ರಾಜವಂಶಸ್ಥರ ಬದಲು ರಾಜ್ಯ ಸರ್ಕಾರವೇ ನಡೆಸಿಕೊಂಡು ಬರುತ್ತಿದೆ. ಬರಗಾಲ, ರಾಜವಂಶಸ್ಥರ ಮರಣ, ರಾಜಕುಮಾರ್ ಅಪಹರಣ ಸೇರಿದಂತೆ 14 ಬಾರಿ ಮಾತ್ರ ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಜಂಬೂ ಸವಾರಿ ವೀಕ್ಷಣೆಗೆ 25 ಸಾವಿರಕ್ಕೆ ಬದಲು ಕೇವಲ 300 ಜನ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








