ADVERTISEMENT
Monday, June 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಾನವೀಯತೆ ಮೆರೆದ ಯುವಕ

Shwetha by Shwetha
October 30, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Aaruva deepakke bembalada belaku 1
Share on FacebookShare on TwitterShare on WhatsappShare on Telegram

ಮಾನವೀಯತೆ ಮೆರೆದ ಯುವಕ
Aaruva deepakke bembalada belaku 1

ಪ್ರೀತಿಪಾತ್ರರ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿ ನಾವೆಲ್ಲಾ ಹಿಂತಿರುಗುವಾಗ ನಡುರಾತ್ರಿಯಾಗಿತ್ತು.
ಸುತ್ತಲೂ ಕಗ್ಗತ್ತಲು. ಬೀದಿದೀಪವಷ್ಟೇ ದಾರಿಗೆ ತುಸುಬೆಳಕ ನೀಡಿತ್ತು. ರಸ್ತೆಯಲ್ಲಿ ನಮ್ಮ ವಾಹನ ಬಿಟ್ಟರೆ ಯಾರೊಬ್ಬರ ಸುಳಿವೂ ಅಲ್ಲಿರಲಿಲ್ಲ. Aaruva deepakke bembalada belaku 1

Related posts

rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

June 22, 2026
ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

June 22, 2026

Aaruva deepakke bembalada belaku 1

ಮುದ್ರಾಡಿಯ ಮದಗ ಬಳಿ ಚಲಿಸುವಾಗ ಏನೋ ಜೋರಾಗಿ ಅಗೆಯುವ ಶಬ್ದ ಕೇಳಿಸಿತು. ಮಿನುಗುಚಿಟ್ಟೆ ಯಷ್ಟೇ ಬೆಳಕು ದೂರದಲ್ಲಿಕಾಣಿಸುತಿತ್ತು. ಅಲ್ಲಿ ಮಗುವಿನ ಕೂಗು ಕೇಳಿಸಿದಾಗ ಏನೋ ಘಟನೆ ನಡೆಯುತ್ತಿದೆ. ಯಾರಾದರೂ ಮಗುವನ್ನು ಕೊಲ್ಲುತ್ತಿರುವರೋ ಅಥವಾ ಮಗುವೇ ನಿದ್ದೆ ಕಣ್ಣಲ್ಲಿ ಮನೆಯಿಂದ ಹೊರಗೆ ಬಂದು ಅಳುತ್ತಿದೆಯೋ ಒಂದೂ ಅರಿವಾಗದೇ ಸಂಶಯದ ಸುಳಿಯಲ್ಲಿ ಸಿಕ್ಕಿ ಅಣ್ಣನ ಬಳಿ ಬೈಕ್ ನಿಲ್ಲಿಸಲು ಹೇಳಿ ಧ್ವನಿ ಕೇಳಿದ ಸ್ಥಳದ ಕಡೆ ಹೆಜ್ಜೆ ಇಟ್ಟೆವು.

ಬೆಳಕ ಕಂಡ ಸ್ಥಳದತ್ತ ಹೋದಾಗ ಅಲ್ಲೊಬ್ಬ ಎತ್ತರದ ಯುವಕ ನಡುರಾತ್ರಿಯಲ್ಲಿ ಮಳೆಯಲ್ಲಿ ನೆನೆಯುತ್ತ ಉದ್ದದ ಕೋಲನ್ನು ಹಿಡಿದು ನೀರ ರಭಸಕ್ಕೆ ಕುಸಿದು ಬಿದ್ದ
ಮಣ್ಣಿನ ರಾಶಿಯನ್ನು ಸರಿಸಿ ಏನೋ ಹುಡುಕುವ ದೃಶ್ಯ ಕಂಡು ನಾವಿಬ್ಬರೂ ಬೆಚ್ಚಿಬಿದ್ದೆವು.
ದೇವರೇ ! ಇವನು ಇಲ್ಲೇನು ಮಾಡ್ತಾ ಇದ್ದಾನೆ? ನಿಧಿಯ ಆಸೆಗಾಗಿ ಗುಂಡಿ ತೋಡುವ ದೃಶ್ಯ ಸಿನಿಮಾ ದಲ್ಲಷ್ಟೇ ಕಂಡಿದ್ದು. ಅರೇ ಸಾಧ್ಯವಿಲ್ಲ. ನಿಧಿ ಹುಡುಕುವವನು ಕೋಲಲ್ಲೇಕೆ ಮಣ್ಣನ್ನು ಸರಿಸುವನು??
ಇಲ್ಲಾ.. ಇಲ್ಲಾ.. ಏನೋ ನಿಗೂಢ ಅಡಗಿದೆ ಎಂದರಿತು ತುಸು ದೂರದಲ್ಲಿ ಆ ವ್ಯಕ್ತಿಗೆ ಕಾಣದಂತೆ ಅಡಗಿ ಕೂತು ಅವನ ಕೆಲಸವನ್ನೇ ಗಮನಿಸತೊಡಗಿದೆವು.

ಅಣ್ಣ ಮೆಲುದನಿಯಲ್ಲಿ ನುಡಿದ “ಮಗು ಇಲ್ಲೆಲ್ಲೋ ಅಳುತ್ತಿದೆ ಪುಟ್ಟ.. ” ನಿಶಬ್ಧ ಜಾಗದಲ್ಲಿ ಆ ವ್ಯಕ್ತಿ ಅಗೆಯುವ ಶಬ್ದ ಬಿಟ್ಟರೆ ಕೇಳಿಸಿದ್ದು ಮಗುವಿನ ಅರಚಾಟ.
ಈ ಸವಾಲನ್ನು ಹೇಗಾದರೂ ಎದುರಿಸಿ ನೈಜ್ಯತೆ ತಿಳಿಯಬೇಕು ಎಂದು ಮೌನದಲ್ಲೇ ಅಣ್ಣನಿಗೆ ಪ್ರತಿಕ್ರಿಯಿಯಿಸಿದೆ..

ಸ್ವಲ್ಪ ಸಮಯದಲ್ಲಿಯೇ ಅಚ್ಚರಿಯೊಂದು ಕಾದಿತ್ತು.
ಹೌದು! ಆ ವ್ಯಕ್ತಿ ಮಣ್ಣನ್ನು ಸರಿಸಿ ಒಂದು ಜೀವವಿರುವ ನಾಯಿಯನ್ನು ಹೊರತೆಗೆದ ಕ್ಷಣವನ್ನು ನಾವಿಬ್ಬರೂ ಮೂಕವಿಸ್ಮಿತರಾಗಿ ನೋಡಿದೆವು.
ನಾಯಿಯನ್ನು ಆ ವ್ಯಕ್ತಿ ಕಾಪಾಡಿದರೂ ಆ ಪ್ರಾಣಿ ಮಾತ್ರ ಆ ಜಾಗವನ್ನು ಕದಲದೆ ಬೊಬ್ಬೆ ಹಾಕತೊಡಗಿತು. ಅರೇ !ಎಂತಹ ಸೋಜಿಗ.. ಅಲ್ವಾ..
ನಿಮಗೂ ಕೂತೂಹಲ ಕಾಡಿರಬಹುದು..ಮುಂದೇನಾಗಿರಬಹುದು?? ಆ ವ್ಯಕ್ತಿ ಯಾರು?? ನಾಯಿ ಯಾಕೆ ಅಲ್ಲೇ ನಿಂತು ರೋದಿಸುತ್ತಿದೆ ಎನ್ನುವ ನೂರು ಪ್ರಶ್ನೆಗಳು ನಮ್ಮನ್ನು ಕಾಡತೊಡಗಿ ಕಾದು ನಿಂತೆವು.

ಆ ಎತ್ತರದ ವ್ಯಕ್ತಿ ಜೋರಾದ ಮಳೆಯಲ್ಲಿ ಒದ್ದೆಯಾಗುತ್ತಾ ಮಣ್ಣನ್ನು ಸರಿಸುತ್ತಲೇ ಇದ್ದ.
ಇನ್ನೇನಿರಬಹುದು ಎಂದು ಆಲೋಚಿಸುವಾಗಲೇ ಒಂದೊಂದೇ ನಾಯಿ ಮರಿಗಳನ್ನು ಜೋಪಾನವಾಗಿ ಹೊರತೆಗೆಯುತ್ತಿದ್ದ ವ್ಯಕ್ತಿಯನ್ನು ಕಂಡು ನನ್ನ ಕಣ್ಣಂಚಲ್ಲಿ ಕಂಬನಿ ಹರಿಯಿತು.
4 ನಾಯಿಮರಿಗಳು ಅಳುತ್ತಲೇ ತಾಯಿಯ ಮಡಿಲು ಸೇರುತ್ತಾ ” ಕುಯಿ…. ಕುಯಿ….” ಎಂದು ಪುಟ್ಟ ಮಗುವಿನ ದನಿಯಂತೆ ಅಳುತ್ತಾ ತಾಯಿ ನಾಯಿ ಯ ಆಲಂಗಿಸಿದವು.

ಆ ವ್ಯಕ್ತಿಯ ಸಮಯಪ್ರಜ್ಞೆ ಗೆ, ಆ ಜೀವಗಳ ಮೇಲೆ ಕಾಳಜಿ ತೋರಿ ತನ್ನ ಜೀವವ ಮರೆತು ನಡುರಾತ್ರಿ ಆ ಮಳೆಯಲ್ಲಿ ನೆನೆಯುತ್ತ ಒಬ್ಬನೇ ಶ್ರಮವಹಿಸಿ ಮುಗ್ದ ಪ್ರಾಣಿಗಳ ಜೀವ ಉಳಿಸಿದ ಸೇವೆಗೆ ಹೃದಯ ತುಂಬಿ ಬಂತು.
ಕತ್ತಲೆಯಲ್ಲಿ ಅಡಗಿದ್ದ ನಾವು ಆ ವ್ಯಕ್ತಿಗೊಂದು ಸಲಾಂ ಹೇಳೋಣ ಎನಿಸಿ ಅವನ ಬಳಿ ಹೆಜ್ಜೆ ಇಟ್ಟೆವು.
ನಮ್ಮ ಟಾರ್ಚ್ ಲೈಟ್ ಕಂಡಾಗ ಆ ವ್ಯಕ್ತಿಯೇ ದೈರ್ಯದಿಂದ ನಮ್ಮತ್ತ ಬರತೊಡಗಿದ.

Aaruva deepakke bembalada belaku 1

ಹೆಜ್ಜೆಗಳು ಸಮೀಪವಾಗುತ್ತಲೇ ನಾ ಭಾವುಕಳಾಗಿ ಅಲ್ಲೇ ನಿಂತೆ.
ಕಾರಣವಿಷ್ಟೇ… ಮಾನವೀಯತೆ ತೋರಿ 5 ಜೀವಗಳ ಉಳಿಸಿದ ದೇವರು ಬೇರಾರು ಅಲ್ಲ..
ನಮ್ಮೊಡನೆ ಸದಾ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು, ನನ್ನ ಸಾಧನೆಗೆ ಹುರಿದುಂಬಿಸುವ “ಮದಗದ ಹರೀಶ್ ಶೆಟ್ಟಿ ಅಣ್ಣ. “

ಕಣ್ಣುಗಳು ಕಂಡ ದೃಶ್ಯವ ನಂಬಲಾಗದೆ ಅವರನ್ನೇ ದಿಟ್ಟಿಸಿ ನೋಡಿದವು.
ಆಹಾ ! ನಿಜಕ್ಕೂ ಅವರ ಶ್ರಮ ಮೆಚ್ಚುವಂತದ್ದು.
ಮಾತುಗಳು ನಾಲಗೆ ತನಕ ಬಂದು ಅಲ್ಲೇ ನಲಿದಾಡಿದವು.

ಅಣ್ಣ ಹರೀಶ್ ಶೆಟ್ರನ್ನು ಮಾತಾಡಿಸಿ “ಬಾರಿ ಎಡ್ಡೆ ಬೇಲೆ ಮಲ್ತರ್ ಅಣ್ಣ.. ಮಸ್ತ್ ಖುಷಿ ಆಂಡ್.. ನಮ ಬಾಲೆದ ಸ್ವರೋ ಕೇಂದ್ ಗಾಡಿ ಉಂತಾದ್ ಬತ್ತಿನಿ ” ಎಂದು ವಿನಮ್ರ ಭಾವದಿಂದ ನುಡಿದ.

ಮೆಲ್ಲಗೆ ನಕ್ಕ ಹರೀಶ್ “ಎಂಕ್ಲಾ ಬಾಲೆದ ಸ್ವರೊ ಕೇಂಡ್. ಪುಣ್ಯ.. ಆ ಜೀವೊಲೆಗ್ ದಾಲ ಆಇಜಿ ” ಎಂದು ಮುಗ್ದ ಭಾವದಿಂದ ನುಡಿದರು.
ನನ್ನನ್ನು ಅಚ್ಚರಿಯ ಲೋಕಕ್ಕೆ ಕೊಂಡೊಯ್ದ ಘಟನೆಯನ್ನು ಒಮ್ಮೆ ನೆನೆದು ಹರೀಶ್ ರವರಲ್ಲಿ ಮಾತಾಡಿಸಿ ಕೃತಜ್ಞತೆಯನ್ನು ಅರ್ಪಿಸಿದೆ.

ಬೀದಿನಾಯಿ ಮತ್ತು ಅದರ ಮರಿಗಳನ್ನು ತನ್ನ ಮನೆಯ ಸೂರಿನಲ್ಲಿ ಬೆಚ್ಚನೆಯ ಗೋಣಿ ಹಾಸಿ ಇರಿಸಿ ತಿನ್ನಲೊಂದಿಷ್ಟು ಅನ್ನವ ಉಣಬಡಿಸಿ ನಾಯಿಯ ಹಸಿವ ನೀಗಿಸಿದರು.
ನಾವಿಬ್ಬರೂ ಮನೆಯ ದಾರಿಯಲ್ಲಿ ಚಲಿಸಿದೆವು.

ಆಹಾ ! ಎಲ್ಲೋ ಅಲೆದಾಡಿ ಬದುಕ ಸವೆಸುವ ಜೀವಗಳನ್ನೇ ಇಷ್ಟೊಂದು ಕನಿಕರ ತೋರಿ ಕಷ್ಟ ಪಟ್ಟು ಕಾಪಾಡಿ ಆಶ್ರಯ ನೀಡಿದ ಹರೀಶ್ ಶೆಟ್ಟಿ ಅಣ್ಣ ಮುಂದೆ ಜನನಾಯಕನಾದರೆ ಈ ಊರಿನ ಜನರ ಕಷ್ಟಗಳಿಗೆ ಹೇಗೆಲ್ಲ ಸ್ಪಂದನೆ ನೀಡಬಹುದು.. ಅಲ್ವಾ..

ಇರಬೇಕು.. ಇರಬೇಕು.. ಇಂತಹ ಯುವಕ.. ನಾಡ ಕಟ್ಟಲು.. ಜನರ ಕಣ್ಣೀರ ಒರೆಸಲು..
ಒಬ್ಬ ತಾಯಿ 10 ಮಕ್ಕಳನ್ನು ಹಡೆದರೇನು ಭಾಗ್ಯವಯ್ಯ..
ಇಂತಹ ಒಬ್ಬ ಮಗ ಹುಟ್ಟಿದರೆ ಸಾಕು.
ಆತ ತಾಯಿಯನ್ನಷ್ಟೇ ಅಲ್ಲ..ಸಾವಿರಾರು ಜೀವಗಳನ್ನೇ ಮಗುವಿನಂತೆ ಕಾಪಾಡುವನು. ಎನ್ನುವುದು ನನ್ನ ಮನದಾಳದ ಭಾವನೆ.

ಹರೀಶ್ ಶೆಟ್ಟಿ ಮದಗ ಅಣ್ಣ ನಮ್ಮ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹಸಂಚಾಲಕರಾಗಿದ್ದೆ ನನಗೆ ನೂರು ಆನೆಯ ಬಲ.

ಶುಭವಾಗಲಿ ಅಣ್ಣ.. ನೀವು ಕಂಡ ಕನಸುಗಳು ಬಹುಬೇಗ ನೆರವೇರಲಿ..
ನಿಮ್ಮ ಮಾನವೀಯತೆ ಗೆ ಲೋಕವೇ ಶಿರಬಾಗಲಿ. ಸೇವೆ ಮಾಡುವ ಕೈಗಳಿಗೆ ಇನ್ನಷ್ಟು ಶಕ್ತಿ ಬರಲಿ.

ಚೈತ್ರ ಕಬ್ಬಿನಾಲೆ✍️✍️✍️

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹೆಬ್ರಿ ಘಟಕದ ಸಂಚಾಲಕಿ

ಸಾಕ್ಷಾ ಟಿವಿಯ ಆರುವ ದೀಪಕ್ಕೆ ಬೆಂಬಲದ ಬೆಳಕು – ಅಂಕಣಕಾರರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv

 

Tags: Aaruva deepakke bembalada belaku 1Saakshatv Aaruva deepakke bembalada belaku
ShareTweetSendShare
Join us on:

Related Posts

rahul gandhi and indiragandhi

ಲಿಟಲ್ ರಾಹುಲ್ ಗಾಂಧಿ” ಅವರ ಪ್ರೀತಿಯ ಅಜ್ಜಿ, ಪ್ರಸಿದ್ಧ ಇಂದಿರಾ ಗಾಂಧಿಯವರೊಂದಿಗಿನ ಸಂಭಾಷಣೆಯ ತುಣುಕು.

by admin
June 22, 2026
0

56 ವರ್ಷದ ರಾಹುಲ್ ಗಾಂಧಿ ಅವರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರೀತಿಯ ಅಜ್ಜಿ ನೀಡಿದ ಸ್ಫೂರ್ತಿದಾಯಕ ಕೊಡುಗೆಯನ್ನು ಗೌರವಿಸಬೇಕೆಂದು ಹಾರೈಸುತ್ತೇನೆ. ನಮ್ಮ ದಿವಂಗತ ಪ್ರಧಾನಿಯವರು...

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

ಮಲ್ಲಿಕಾರ್ಜುನ ಖರ್ಗೆ ಮೌನವೇಕೆ? ತಮಿಳುನಾಡು ದಬ್ಬಾಳಿಕೆ ಮತ್ತು ಕಾಂಗ್ರೆಸ್ ಮೌನ: ಮೇಕೆದಾಟು ಗುಟ್ಟು ರಟ್ಟು ಮಾಡಿದ ಹೆಚ್ ಡಿ ಕುಮಾರಸ್ವಾಮಿ

by Shwetha
June 22, 2026
0

ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ನ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

by Shwetha
June 22, 2026
0

ರಾಜ್ಯದ ಜನತೆಗೆ ಶೀಘ್ರದಲ್ಲೇ ಸಾರಿಗೆ ಬಸ್ ದರ ಏರಿಕೆಯ ಶಾಕ್ ತಗುಲುವ ಸಾಧ್ಯತೆ ದಟ್ಟವಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯ ಸಾರಿಗೆ ಸಂಸ್ಥೆಗಳನ್ನು ಉಳಿಸಲು ಕೆಎಸ್ಆರ್‌ಟಿಸಿ...

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

by Shwetha
June 22, 2026
0

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ....

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

ಗೆರೆ ದಾಟಿದವರ ಪತ್ತೆಗೆ ಬಿಜೆಪಿಯಿಂದ ಭಕ್ತಿ ಮಾರ್ಗ: ಅಡ್ಡ ಮತದಾನದ ಸತ್ಯ ಹೊರತೆಗೆಯಲು ಮಂಜುನಾಥಸ್ವಾಮಿಯ ಆಣೆ ಪ್ರಮಾಣದ ಮೊರೆ

by Shwetha
June 22, 2026
0

ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ವಿವಾದ ಈಗ ಕೇವಲ ರಾಜಕೀಯಕ್ಕೆ ಸೀಮಿತವಾಗದೆ ಧಾರ್ಮಿಕ ತಿರುವು ಪಡೆದುಕೊಂಡಿದೆ. ತನ್ನ ಶಾಸಕರೇ ಪಕ್ಷಕ್ಕೆ ದ್ರೋಹ ಬಗೆದಿರುವುದು ಬಿಜೆಪಿ ನಾಯಕರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram