ADVERTISEMENT
Wednesday, May 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗಂಗಾವತಿ ನಗರಸಭೆ `ಕೈ’ ಸದಸ್ಯನ ಕಿಡ್ನಾಪ್ ಸಿಸಿಟಿವಿಯಲ್ಲಿ ಸೆರೆ..!

Kariyappa N by Kariyappa N
October 31, 2020
in Newsbeat, Politics, Samagra karnataka, ರಾಜ್ಯ
cmc kidnap
Share on FacebookShare on TwitterShare on WhatsappShare on Telegram

ಕೊಪ್ಪಳ: ಸಿನಿಮೀಯ ರೀತಿಯಲ್ಲಿ ಜಿಲ್ಲೆಯ ಗಂಗಾವತಿ ನಗರಸಭೆ ಸದಸ್ಯನ ಕಿಡ್ನಾಪ್ ಮಾಡಿರುವ ಘಟನೆ ನಡೆದಿದ್ದು, ಕಿಡ್ನಾಪ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನವೆಂಬರ್2ಕ್ಕೆ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಗಂಗಾವತಿ ನಗರಸಭೆ ಅಧ್ಯಕ್ಷ ಪಟ್ಟವನ್ನು ಹಿಡಿಯಲು ಬಿಜೆಪಿಯಿಂದ ಕಿಡ್ನಾಪ್ ತಂತ್ರಕ್ಕೆ ಮೊರೆ ಹೋಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ ಹಿರೇಮಠ ಅವರನ್ನು ಕಿಡ್ನಾಪ್ ಮಾಡಲಾಗಿದೆ.

kidnap
ನಗರಸಭೆ ಬಿಜೆಪಿ ಸದಸ್ಯರಾದ ಅಜಯ್ ಬಿಚ್ಚಾಲಿ, ನವೀನ್ ಪಾಟೀಲ್, ಪರಶುರಾಮ ಮಡ್ಟೆರ್, ಮಾಜಿ ಸದಸ್ಯ ರಾಚಪ್ಪ ಸಿದ್ದಾಪುರ ಹಾಗೂ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಸೇರಿದಂತೆ ಸಹಚರರಾದ ರವಿ ಲಿಂಗರಾಜ ಕ್ಯಾಂಪ್, ಡಬರಿ ಶರಣ, ಒಟ್ಟು 08 ಜನರಿಂದ ಕಾಂಗ್ರೆಸ್ ಸದಸ್ಯನ ಕಿಡ್ನಾಪ್ ಮಾಡಲಾಗಿದೆ. ಗಂಗಾವತಿ ಪಟ್ಟಣದ ನಕ್ಷತ್ರ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಕುಳಿತಿದ್ದ ಮನೋಹರಸ್ವಾಮಿಯನ್ನು ಎಳೆದುಕೊಂಡು ಬಿಜೆಪಿ ಸದಸ್ಯರು ಎಳೆದುಕೊಂಡು ಹೋಗಿದ್ದರು. ಕತ್ತು ಹಿಡಿದು ಎಳೆದುಕೊಂಡು ಹೊಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಿಡ್ನಾಪ್ ಮಾಡಿದ ಎಂಟು ಜನರ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

May 19, 2026
ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

May 19, 2026

ಕಿಡ್ನಾಪರ್ ಅರೆಸ್ಟ್, ಘಟನೆ ಹಿನ್ನೆಲೆ ಏನು..!
35 ಸದಸ್ಯಬಲ ಹೊಂದಿರುವ ಗಂಗಾವತಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನ.2ರಂದು ನಡೆಯಲಿದೆ. ಗಂಗಾವತಿ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಭಾರಿ ಕಸರತ್ತು ನಡೆಸಿವೆ. ಹೀಗಾಗಿ ಈ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಮನೋಹರ ಸ್ವಾಮಿ ಅವರನ್ನು ಮಧ್ಯರಾತ್ರಿ ಮಬ್ಬು ಬರಿಸುವ ಔಷಧಿಯನ್ನು ಸ್ಪ್ರೇ ಮಾಡಿ ಕಿಡ್ನಾಪ್ ಮಾಡಿ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಅಪಹರಣಕಾರರು ಗಂಗಾವತಿಯಿಂದ ಅಪಹರಿಸಿ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳಕ್ಕೆ ಕರೆದುಕೊಂಡು ಬಂದಿದ್ದರು.
ಈ ವೇಳೆ ಕಿಡ್ನಾಪರ್‍ಗಳಿಂದ ತಪ್ಪಿಸಿಕೊಂಡು ಕಾರಿನಿಂದ ಇಳಿದ ಮನೋಹರಸ್ವಾಮಿ, ಹಳಿಯಾಳದ ಶಿವಾಜಿ ಸರ್ಕಲ್‍ಗೆ ಓಡಿ ಬಂದಿದ್ದಾರೆ. ಕಿಡ್ನಾಪ್ ಮಾಡಿದ್ದ ಬಿಜೆಪಿ ಸದಸ್ಯರು ಹಾಗೂ ರೌಡಿಶೀಟರ್ ಮನೋಹರ ಸ್ವಾಮಿಯನ್ನು ಹಿಡಿಯಲು ಬೆನ್ನಟ್ಟಿದ್ದಾರೆ. ಈ ವೇಳೆ ಮನೋಹರ ಸ್ವಾಮಿ ರಕ್ಷಣೆಗಾಗಿ ಕಿರುಚಾಡಿದ್ದರಿಂದ ಅಲ್ಲೇ ಇದ್ದ ಹಳಿಯಾಳ ಪೊಲೀಸರು ಮಹೋಹರ ಸ್ವಾಮಿ ಅವರನ್ನು ರಕ್ಷಿಸಿ ಮೂವರನ್ನು ಬಂಧಿಸಿದ್ದಾರೆ. ನಂತರ ಕಿಡ್ನಾಪ್ ಆಗಿದ್ದ ಮನೋಹರ ಸ್ವಾಮಿ ಅವರನ್ನು ಗಂಗಾವತಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ರಾಕೇಶ ನಾಯಕ, ಶರಣಪ್ಪ ಅಕ್ಕಿರೊಟ್ಟಿ, ಬಸವರಾಜ್ ಎಂಬುವರನ್ನು ಬಂಧಿಸಲಾಗಿದೆ. ಚಾಲಕ ರೌಡಿಶೀಟರ್ ರವಿ ಪರಾರಿಯಾಗಿದ್ದಾನೆ. ಕಾರನ್ನು ಜಪ್ತಿ ಮಾಡಿದ ಪೊಲೀಸರು ತನಿಖೆ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BJPCongressgangavatimember kidnapnagarasbhepresident electionthree arrest
ShareTweetSendShare
Join us on:

Related Posts

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

by Shwetha
May 19, 2026
0

ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಪೋಷಕರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಇತ್ತೀಚಿನ ತೈಲ ಬೆಲೆ ಏರಿಕೆಯು ನೇರವಾಗಿ ಶಾಲಾ ಮಕ್ಕಳ ಸಾರಿಗೆಯ ಮೇಲೆ...

ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

by Shwetha
May 19, 2026
0

ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಆತಂಕಕಾರಿ ಹೇಳಿಕೆ ನೀಡಿ ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಾರೆ. ಇರಾನ್ ಜೊತೆಗಿನ ಅಣು ಒಪ್ಪಂದದ ಸಾಧ್ಯತೆಗಳು ಹಾಗೂ ಹೊಸ ಸಂಘರ್ಷದ ಭೀತಿಯ...

ವಿಸ್ಕಿ ರಮ್ ಬಿಯರ್ ಪ್ರಿಯರಿಗೆ ಬಂಪರ್ ಆಫರ್ ರಾಜ್ಯ ಸರ್ಕಾರದಿಂದ ಮದ್ಯದ ದರದಲ್ಲಿ ಭಾರಿ ಇಳಿಕೆ ಹೊಸ MRP ಲಿಸ್ಟ್ ಇಲ್ಲಿದೆ

ವಿಸ್ಕಿ ರಮ್ ಬಿಯರ್ ಪ್ರಿಯರಿಗೆ ಬಂಪರ್ ಆಫರ್ ರಾಜ್ಯ ಸರ್ಕಾರದಿಂದ ಮದ್ಯದ ದರದಲ್ಲಿ ಭಾರಿ ಇಳಿಕೆ ಹೊಸ MRP ಲಿಸ್ಟ್ ಇಲ್ಲಿದೆ

by Shwetha
May 19, 2026
0

ಬೆಂಗಳೂರು ಕರ್ನಾಟಕದ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರವು ಒಂದು ದೊಡ್ಡ ಸಿಹಿಸುದ್ದಿ ನೀಡಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026 27 ರ ರಾಜ್ಯ ಬಜೆಟ್...

ಕೇರಳ: 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ UDF ಸಂಪುಟ ಪ್ರಮಾಣ ವಚನ

ಕೇರಳ: 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ UDF ಸಂಪುಟ ಪ್ರಮಾಣ ವಚನ

by Shwetha
May 19, 2026
0

ವಿ.ಡಿ. ಸತೀಶನ್ ಅವರು ಕೇರಳದ ನೂತನ ಮುಖ್ಯಮಂತ್ರಿಯಾಗಿ ಭರ್ಜರಿ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಕೇರಳದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ವಿಶೇಷವೆಂದರೆ, ಕಳೆದ...

ಮುಷ್ಕರಕ್ಕೆ ಸಜ್ಜಾದ ನೌಕರರಿಗೆ ಬಿಗ್ ಶಾಕ್: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತಂದ ಕೆಎಸ್ಆರ್ಟಿಸಿ

ಮುಷ್ಕರಕ್ಕೆ ಸಜ್ಜಾದ ನೌಕರರಿಗೆ ಬಿಗ್ ಶಾಕ್: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತಂದ ಕೆಎಸ್ಆರ್ಟಿಸಿ

by Shwetha
May 19, 2026
0

ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯಲ್ಲಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿರುವ ನೌಕರರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram