ADVERTISEMENT
Tuesday, June 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್ ಯಾತ್ರೆ; ಅರಿಜೋನಾ ಪ್ರವಾಸ ಸ್ಮರಣೀಯವಾಗಬೇಕಿದ್ದರೇ ಹುಲ್ಲೆ ಕಣಿವೆ, ಕೊಲರಾಡೋ ನದಿಯ ಕುದುರೆ ಲಾಳದ ತಿರುವು, ಪಾವೆಲ್ ಸರೋವರ ನೋಡಲೇಬೇಕು:

Shwetha by Shwetha
November 2, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv yatrika episode 6
Share on FacebookShare on TwitterShare on WhatsappShare on Telegram

ಅಮೇರಿಕನ್ ಯಾತ್ರೆ; ಅರಿಜೋನಾ ಪ್ರವಾಸ ಸ್ಮರಣೀಯವಾಗಬೇಕಿದ್ದರೇ ಹುಲ್ಲೆ ಕಣಿವೆ, ಕೊಲರಾಡೋ ನದಿಯ ಕುದುರೆ ಲಾಳದ ತಿರುವು, ಪಾವೆಲ್ ಸರೋವರ ನೋಡಲೇಬೇಕು: Saakshatv yatrika episode 6

ನಮ್ಮ ಕುಟುಂಬ ಮತ್ತು ಸಹೋದ್ಯೋಗಿ ಗೆಳೆಯನ ಕುಟುಂಬ ಮೂರು ರಾಜ್ಯಗಳ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ನಾವು ಪ್ಯಾಕೇಜ್ ಟ್ರಿಪ್ಪಿನ ಮೊರೆ ಹೋಗಬೇಕಾಗಿತ್ತು. ವೇಗಸ್ಸನ್ನು ನಾವೇ ನೋಡಿ ಉಳಿದ 3 ದಿನಗಳಿಗೆ ಪ್ಯಾಕೇಜನ್ನ ಕಾಯ್ದಿರಿಸಿದ್ದೆವು. ನಾನು ಸ್ಥಳಗಳ ಹುಡುಕ್ತಾ ಇರಬೇಕಾದರೆ ನಮ್ಮವರದ್ದು ಒಂದೇ ಬೇಡಿಕೆ. ಯಾವ ಜಾಗಕ್ಕೆ ಹೋಗದಿದ್ದರೂ ಪರವಾಗಿಲ್ಲ ಹುಲ್ಲೆ (ಆ್ಯಂಟಲೋಪ್) ಕಣಿವೆಗೆ ಹೋಗಬೇಕೆಂದು. Saakshatv yatrika episode 6

Related posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

June 30, 2026
ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

June 30, 2026

Saakshatv yatrika episode 6

ಅದಕ್ಕೆ ಆ ಸ್ಥಳ, ನಮ್ಮ ರಜೆ ಮತ್ತು ನಮ್ಮ ಹಣ ಎಲ್ಲಕ್ಕೂ ಹೊಂದಬಲ್ಲ ಪ್ಯಾಕೇಜಿನಲ್ಲಿ ನಾವು ‘ಗ್ರಾಂಡ್ ಕೆನ್ಯಾನ್’ ಮತ್ತು ‘ಹೋವರ್ ಆಣೆಕಟ್ಟ’ನ್ನು ತ್ಯಾಗ ಮಾಡಬೇಕಿತ್ತು. ಆದರೂ ಆಮೇಲೆ ಮೇಲಿನಿಂದಲೇ ಅವುಗಳೆರಡರ ದರ್ಶನವಾದುದರಿಂದ ನನಗೆ ಅಷ್ಟೇನು ಕೊರಗು ಉಳಿಯಲಿಲ್ಲ.

ಅರಿಝೋನಾದಲ್ಲಿ ನಾವು ಮುಖ್ಯವಾಗಿ ಭೇಟಿ ಕೊಟ್ಟಿದ್ದು ಮೂರು ಜಾಗಗಳಿಗೆ. ಒಂದು ಹುಲ್ಲೆ ಕಣಿವೆ, ಕೊಲರಾಡೋ ನದಿಯ ಕುದುರೆ ಲಾಳದ ತಿರುವು ಮತ್ತು ಪಾವೆಲ್ ಸರೋವರದ ದೋಣಿವಿಹಾರ. ಈ ಮೂರೂ ಸ್ಥಳಗಳು ಕೂಡಾ ಅದ್ಭುತವಾದ ಮತ್ತು ನೋಡಲೇಬೇಕಾದ ಜಾಗಗಳು.

ಇಲ್ಲಿ ಒಂದು ವಿಚಿತ್ರ ಹೇಳ್ತಿನಿ ಕೇಳಿ. ಬೆಳಗ್ಗೆ ನಾವು ಹೋರಟಿದ್ದು ಯೂಟಾ ರಾಜ್ಯದಿಂದ. ಅಲ್ಲಿಂದ ನೊವಾಹೋ ಸ್ವಾಯತ್ತ ಪ್ರದೇಶವಿರುವ ಹುಲ್ಲೆ ಕಣಿವೆ ಮತ್ತು ನೊವಾಹೋ ಸ್ವಾಯತ್ತ ಪ್ರದೇಶದ ಒಳಗಿರುವ ಸಾಮಾನ್ಯ ಆರಿಝೋನಾದ ನಗರ ಪೇಜ್. ಇಲ್ಲಿ ಇವು ಮೂರರ ಸಮಯ ವಲಯ ಒಂದೇ ಆದರೂ ಯೂಟಾ ಮತ್ತು ನವಾಹೋ ಪ್ರದೇಶ ಹಗಲ ಬೆಳಕಿನ ಉಳಿಕೆ ಪದ್ಧತಿ ಅನುಸರಿಸುತ್ತಾರೆ. ಆದ್ದರಿಂದ ಉಳಿದ ಅರಿಝೋನಾಕ್ಕೂ ಮತ್ತು ಮೇಲೆಹೇಳಿದ ಭಾಗಗಳಿಗೂ ಬೇಸಿಗೆಯಲ್ಲಿ ಅಂದರೆ ಬೆಳಿಕಿನುಳಿಕೆ ಸಮಯದಲ್ಲಿ ಒಂದು ಗಂಟೆ ವ್ಯತ್ಯಾಸ ಬರತ್ತೆ. ಇದೇ ಕಾರಣಕ್ಕೆ ಒಂದು ದಿನದಲ್ಲಿ ಕನಿಷ್ಟ 5-6 ಬಾರಿ ನಮ್ಮ ಗಡಿಯಾರದ (ಅಂದರೆ ಮೊಬೈಲ ಗಡಿಯಾರದ) ಸಮಯದ ಬದಲಾವಣೆಯಾಗಿತ್ತು. ಮತ್ತೆ ವಿಷಯಾಂತರ ಮಾಡಿದೆ, ಇರಲಿ. ನಾವು ನೋಡಿದ ಸ್ಥಳಗಳ ಬಗ್ಗೆ ಹೇಳಿ‌ ಮುಗಿಸ್ತೀನಿ.

ಹುಲ್ಲೆ ಕಣಿವೆ :-
ಈ ಜಾಗ ಅಮೆರಿಕನ್‌ ಸ್ಥಳೀಯ ನಿವಾಸಿಗಳ ಸ್ವಾಯತ್ತ ಪ್ರದೇಶ ನೊವಾಹೋ ನೇಶನ್ ಜಾಗದಲ್ಲಿರುವುದರಿಂದ ಅವರ ಪೂರ್ವಾನುಮತಿ ಕಡ್ಡಾಯ. ನಾನು ಮೊದಲ ಬಾರಿಗೆ ನೇಟಿವ್ ಅಮೆರಿಕನ್ನರ ನೋಡಿದ್ದು ಇಲ್ಲೇ. ಆದರೆ ಅವರ ಬಗ್ಗೆ ಜಾಸ್ತಿ ತಿಳಿಯಬೇಕೆನ್ನುವ ನನ್ನ ಕುತೂಹಲಕ್ಕೆ ಅವಕಾಶ ಸಿಗಲಿಲ್ಲ.

ಇದು ಭೌಗೋಳಿಕವಾಗಿ ಬಹಳ ಸೂಕ್ಷ್ಮ ಪ್ರದೇಶವಾದುದರಿಂದ ಇಲ್ಲಿ ಪ್ರವಾಸಿಗಳ ಗುಂಪು‌ಮಾಡಿ ಪ್ರತೀ ಪ್ರವಾಸಿಯೊಟ್ಟಿಗೂ ಸ್ಥಳೀಯ ಮೂಲನಿವಾಸಿಯೊಬ್ಬರು ಮಾರ್ಗದರ್ಶಕರಾಗಿ ಬರುತ್ತಾರೆ. ಇಲ್ಲಿ ಎರಡು ಜಾಗಗಳಿವೆ ಮೇಲಣ ಕಣಿವೆ ಮತ್ತು ಕೆಳಗಣ ಕಣಿವೆ. ನಾವು ಹೋಗಿದ್ದು ಕೆಳಗಣ ಕಣಿವೆಗೆ. ಮರಳು ಮಣ್ಣಿನ ಮೇಲ್ಮೈಯಲ್ಲಿ ನೀರು ಹರಿದೂ ಹರಿದೂ ಈ ಕಣಿವೆ ಉಂಟಾಗಿದೆ. ಈ ಥರಹದ್ದೊಂದು ಮಾಯಾಲೋಕವಿದೆಯೆಂಬ ಸುಳಿವನ್ನೂ ಕೂಡಾ ಕೊಡದೇ, ಭೂಮಿಯಿಂದ ಸುಮಾರು ೧೦೦-೧೨೦ ಅಡಿ ಕೆಳಗೆ ಇದೆ.

Saakshatv yatrika episode 6

ಅಕ್ಷರಶಃ ನಿಮಗೆ ಯಾವುದೋ ಅನ್ಯಗ್ರಹದಲ್ಲಿರುವ ಅನುಭವವಾಗುತ್ತದೆ. ಅದರಲ್ಲೂ ಸೂರ್ಯನ ಬೆಳಕು ಸರಿಯಾಗಿ ಬೀಳುವಂತ ಸಮಯಕ್ಕೆ ಹೋದರೆ ಅದ್ಭುತವಾದ ಅನುಭವವಾಗುತ್ತದೆ. ಕೆಳಗಿನಿಂದ ಆಗಸ ನೋಡಿದರೆ ಬೆಳಕಿನ ಪರಿಣಾಮದಿಂದ ಬಾನಿನ ಬಣ್ಣವೂ ಸ್ವಲ್ಪ ಬೇರೆಯದೇ ನೀಲಿಯಲ್ಲಿ ಕಾಣುತ್ತದೆ. ನಮಗೆಂತೂ ನಾವು ಹೋಗಿದ್ದು ಸಾರ್ಥಕವಾಯಿತು ಅಂತ ಅನ್ನಿಸಿತು.

ಆದರೆ ಈ ಆ್ಯಂಟಲೋಪ್ ಎಂಬ ಹೆಸರು ಯಾಕೆ ಬಂತೆಂಬ ಕುತೂಹಲ ಬಹಳ ಇತ್ತು. ವಿಷಯ ಕೆದಕಿದಾಗ, ಆ್ಯಂಟಲೋಪ್ ಅಥವಾ ಹುಲ್ಲೆ ಅಥವಾ ಕೃಷ್ಣಮೃಗಗಳು ಕೊರೆದು ಈ ಕಣಿವೆ ಉಂಟಾಗಿದೆ ಅಂತ ಸ್ಥಳೀಯ ನಿವಾಸಿಗಳು ನಂಬಿದ್ದರಂತೆ. ಕೃಷ್ಣಮೃಗದ ಕೊಂಬು ಸ್ಕ್ರೂನಂತೆ ಇರುವುದು ನಮಗೆಲ್ಲಾ ಹೊತ್ತಿದೆ. ಈ ಕಣಿವೆಯೂ ಒಂತರಾ ತಿರುಗಣೆ ಅಥವಾ ಸ್ಕ್ರೂನಲ್ಲಿ ಕೊರೆದಂತೆ ಇದೆ. ಅದಕ್ಕೆ ಹುಲ್ಲೆ ಕಣಿವೆ ಎಂಬ ಅನ್ವರ್ಥ ನಾಮ‌ ಸರಿಹೊಂದುತ್ತದೆ.

ಕುದುರೆ ಲಾಳದ ತಿರುವು: –
ನಾನಾಗಲೇ ಹೇಳಿದಂತೆ ಕೊಲರಾಡೋ ನದಿಯಿಂದ ಅನೇಕ ಭೌಗೋಳಿಕ ವಿಸ್ಮಯ ಸ್ಥಳಗಳು ಉಂಟಾಗಿವೆ ಅವುಗಳಲ್ಲಿ ಒಂದು ಈ ಕುದುರೆ ಲಾಳದ ತಿರುವು. ಮುನ್ನೂರು ಮೀಟರ್ ಆಳದ ಕಣಿವೆಯೊಳಗೆ ಈ ನದಿ ಕುದುರೆ ಲಾಳಾಕೃತಿಯ ತಿರುವನ್ನ ತೆಗೆದುಕೊಳ್ಳುತ್ತದೆ. ಅದನ್ನ ಮೇಲಿನಿಂದ ನೋಡುವುದು ರೋಮಾಂಚನಕಾರೀ ಅನುಭವ. ಈ ಜಾಗಕ್ಕೆ ತಪುಪಲು ಒಂದೆರಡು ಕಿಲೋಮೀಟರ್‌ಗಳಷ್ಟು ದೂರವನ್ನು ಮರುಭೂಮಿಯಲ್ಲಿ ನಡೆದು ತಲುಪಬೇಕು. ಬಿಸಿಲಿನಲ್ಲಿ ನಡೆಯುವುದು ಅದರಲ್ಲೂ ಚಿಕ್ಕ ಮಕ್ಕಳ ಹೊತ್ತುಕೊಂಡು ಸಾಗುವುದು ಅತ್ಯಂತ ಕಷ್ಟಕರವಾದರೂ ಅಲ್ಲಿಗೆ ಹೋದಾಕ್ಷಣ‌ ನಡೆದ ಆಯಾಸ ಮರೆಯಾಗುತ್ತದೆ.

Saakshatv yatrika episode 6

ಪಾವೆಲ್ ಸರೋವರ:-
ಕುದುರೆ ಲಾಳದ ತಿರುವಿನ ಕೆಲ ಮೈಲಿಗಳಷ್ಟು ಹಿಂದೆ ಕೊಲರಾಡೋ ನದಿಗೆ ಆಣೆಕಟ್ಟೊಂದನ್ನ ಕಟ್ಟಿದ್ದಾರೆ. ಅದರ ಹಿನ್ನೀರೇ ಪಾವೆಲ್ ಸರೋವರ. ಅತ್ಯಂತ ಸುಂದರವಾದ ಈ ಸರೋವರದಲ್ಲಿ ದೋಣಿಯ ಮೇಲೆ ಸಾಗುವುದು ಅತ್ಯಂತ ಉಲ್ಲಾಸಕರ ಅನುಭವ. ಸ್ವಲ್ಪ ಒಳಹೊಕ್ಕು ಹುಡುಕಿದರೆ ಅನೇಕ ವಿಸ್ಮಯಕಾರೀ ಜಾಗಗಳು ಸಿಗುತ್ತವೆ. ಎಲ್ಲಾ ಕಡೆ ಕಾಣುವುದು ಶಿಲಾರಚನೆಗಳೇ. ಹೀಗೆ ಈ ರಾಜ್ಯದಲ್ಲಿ ಭೂಗರ್ಭ ಶಾಸ್ತ್ರಜ್ಞರಿಗೆ ಮತ್ತು ಭೂಗೋಳದಲ್ಲಿ ಆಸಕ್ತಿಯುಳ್ಳವರಿಗೆ ಅಧ್ಯಯನ ಮಾಡಲು ವಿಪುಲ ಅವಕಾಶಗಳಿವೆ.

ಇಲ್ಲಿಗೆ ಜಗತ್ತಿನ ವಿವಿಧ ಭಾಗಗಳಿಂದ ಖಗೋಳಾಸಕ್ತರು ಬಾಹ್ಯಾಕಾಶದ ಫೋಟೋ ತೆಗಯಲು ಬರುತ್ತಾರೆ. ಇಲ್ಲಿನ ಹಿನ್ನೆಲೆ ಮತ್ತು ಬೆಳಕಿನ ಮಾಲಿನ್ಯ ಅತೀ ಕಮ್ಮಿಯಾದ ಕಾರಣ ಅದ್ಭುತವಾದ ಚಿತ್ರಗಳು ಇಲ್ಲಿ ಸಿಗುತ್ತವೆ. ಹಾಗೇ ಮೈಕ್ರೋಸಾಫ್ಟಿನ ವಾಲ್ ಪೇಪರುಗಳಲ್ಲಿ ಅರಿಝೋನಾ ಮತ್ತು ಯೂಟಾದ ಕನಿಷ್ಟ ೧೦ ಚಿತ್ರಗಳಾದರೂ ಕಾಣುತ್ತವೆ.

ಮುಂದೆ ನೀವು ಪಶ್ಚಿಮ ಕರಾವಳಿ ಕಡೆ ಹೋದರೆ ಈ ರಾಜ್ಯಕ್ಕೆ ಭೇಟಿ ಕೊಟ್ಟೇ ಕೊಡುತ್ತೀರಿ. ಸಾಧ್ಯವಾದಷ್ಟೂ ಜಾಗಗಳಿಗೆ ಭೇಟಿಕೊಡಿ. ಆದರೆ 500-600 ವರ್ಷಗಳ ಹಿಂದೆ ಪಾಶ್ಚಾತ್ಯರ ಆಗಮನಕ್ಕೆ ಮುಂಚೆ ಈ ಪ್ರದೇಶಗಳು ಹೇಗಿದ್ದಿರಬಹುದು ಅಂತ ಕಲ್ಪಿಸಿಕೊಳ್ತಾ ಸಾಗಿರಿ, ಬೇರೆಯದೇ ರೀತಿಯ ಅನುಭವ ಕೊಡುತ್ತದೆ.

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

–ಗಿರಿಧರ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ
ಸಿದ್ಧಾಪುರ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ

https://chat.whatsapp.com/HZ6kIJcdmq8GNeQb9URf9M

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv

Tags: Saakshatv yatrikaSaakshatv yatrika episode 6ಯಾತ್ರಿಕ
ShareTweetSendShare
Join us on:

Related Posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

by Shwetha
June 30, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದಾರೆ. ಈ...

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

by Shwetha
June 30, 2026
0

ನಿಮ್ಮ ಮತ ನಿಮ್ಮ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಅನಿವಾರ್ಯ. ಭಾರತೀಯ ಚುನಾವಣಾ ಆಯೋಗದ ಆದೇಶದಂತೆ ಇಂದಿನಿಂದ ರಾಜ್ಯಾದ್ಯಂತ...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮಾಸ್ ಲೀಡರ್ ಗೆ ಸ್ವಪಕ್ಷೀಯರಿಂದಲೇ ಸಂಚು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುತ್ತಿರುವುದರ ಹಿಂದಿದೆ ಭಾರಿ ಲೆಕ್ಕಾಚಾರ :ಕಿಂಗ್ ಮೇಕರ್ ಪಟ್ಟಕ್ಕಾಗಿ ನಡೆಯುತ್ತಿದೆ ಒಳಗೊಳಗೆ ರಾಜಕೀಯ ಯುದ್ಧ

by Shwetha
June 30, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅತಿ ದೊಡ್ಡ ಮಾಸ್ ಲೀಡರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಈಗ ಕಾಂಗ್ರೆಸ್ ಒಳಾಂಗಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ...

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

by Shwetha
June 30, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ...

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

by Shwetha
June 30, 2026
0

ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram