ಸಿದ್ದು ಸವದಿ ಅಭಸ್ಯವರ್ತನೆ : ಇದೇನಾ ಬಿಜೆಪಿ ಸಂಸ್ಕøತಿ ಎಂದ ಹುಲಿಯಾ
ಬೆಂಗಳೂರು : ಮಹಾಲಿಂಗಪುರ ಪುರಸಭೆ ಚುನಾವಣೆ ಸಂದರ್ಭ ಮಹಿಳಾ ಪುರಸಭಾ ಸದಸ್ಯೆಯನ್ನು ಎಳೆದಾಡಿದ ಶಾಸಕ ಸಿದ್ದು ಸವದಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಇದೇನಾ ಬಿಜೆಪಿಯವರ ಸಂಸ್ಕøತಿ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನೀವೆಲ್ಲರೂ ವಿಡಿಯೋ ಕ್ಲಿಪ್ಪಿಂಗ್ಸ್ ನೋಡಿದ್ದೀರಿ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಿದ್ದಾರೆ.
ಹೆದರಿಸಿ ಬೆದರಿಸಿ ಮತ ಹಾಕಿಸಿಕೊಳ್ಳುತ್ತಾರೆ. ನಾವು ಸುಸಂಸ್ಕೃತರು ಎಂದು ಬಿಜೆಪಿಯವರು ಹೇಳುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಮಾಡುವುದು ಅಪರಾಧ.
ಒಬ್ಬ ಶಾಸಕನಾಗಿ ಸಿದ್ದು ಸವದಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ್ದು ಸರಿಯೇ? ಇದೇನಾ ಬಿಜೆಪಿಯವರ ಸಂಸ್ಕøತಿ ಎಂದು ಪ್ರಶ್ನಿಸಿದರು.
ಒಳ ರಾಜಕಾರಣ ಮಾಡಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ : ಕಟೀಲ್
ಜೊತೆಗೆ ನಾನು ಸಿದ್ದು ಸವದಿ ವರ್ತನೆಯನ್ನು ತೀರ್ವವಾಗಿ ಖಂಡಿಸುತ್ತೇನೆ. ನಮ್ಮ ಪಕ್ಷ ಇದರ ವಿರುದ್ಧ ಉಗ್ರ ಹೋರಾಟ ಮಾಡಲಿದೆ ಎಂದು ತಿಳಿಸಿದರು.
ಇದೇ ವೇಳೆ ಸಂಪತ್ ರಾಜ್ ನಾಪತ್ತೆ ಬಗ್ಗೆ ಮಾತನಾಡಿ, ಸಂಪತ್ ರಾಜ್ ಬಚ್ಚಿಟ್ಟುಕೊಂಡಿದ್ದಾರೆ ಎನ್ನುತ್ತಾರೆ.
ಪೊಲೀಸರು ಸರ್ಕಾರ ಇರುವುದು ಯಾಕೆ? ಪೊಲೀಸರು ಎಲ್ಲಿದ್ದಾರೆ? ಯಾವುದೋ ನೆಪ ಹೇಳಿ ತಪ್ಪಿಸಿಕೊಳ್ಳುವುದಲ್ಲ, ಎಲ್ಲಿದ್ದಾರೆ ಅಂತ ಕಂಡುಹಿಡಿಯಬೇಕು.
ಅವರನ್ನು ಪ್ರತಿಪಕ್ಷ ನಾಯಕರು ಪತ್ತೆ ಹಚ್ಚಲು ಆಗುತ್ತಾ? ಕಾಂಗ್ರೆಸ್ ನವರು ಪತ್ತೆ ಮಾಡಬೇಕಾ? ಪೊಲೀಸರು ಅವರನ್ನು ಪತ್ತೆ ಹಚ್ಚಲಿ, ಅವರಿಂದ ಮಾಡಲು ಆಗೋದಿಲ್ವಾ ಎಂದು ಖಾರವಾಗಿ ಪ್ರಶ್ನೆಗಳ ಸುರಿಮಳೆಗೈದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel