ADVERTISEMENT
Monday, June 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಜಗ್ಗೇಶ್: ಸಿನಿ ಗಣ್ಯರಿಂದ ಅಭಿನಂದನೆ

saaksha tv by saaksha tv
November 17, 2020
in Cinema, Newsbeat, ಮನರಂಜನೆ
jaggesh
Share on FacebookShare on TwitterShare on WhatsappShare on Telegram

ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ನಟ ಜಗ್ಗೇಶ್: ಸಿನಿ ಗಣ್ಯರಿಂದ ಅಭಿನಂದನೆ

ಸ್ಯಾಂಡಲ್ ವುಡ್ ನ ನವರಸನಾಯಕ ಎಂದೇ ಖ್ಯಾತಿಗಳಿಸಿರುವ ನಟ ಜಗ್ಗೇಶ್ ಕಲಾ ಸೇವೆಗೆ 40 ವರ್ಷ ತುಂಬಿದೆ. ಚಿತ್ರರಂಗದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಜಗ್ಗೇಶ್ ಇಂದು ದೊಡ್ಡ ನಟನಾಗಿ ಬೆಳೆದುನಿಂತಿದ್ದಾರೆ. ಸದ್ಯ 40ರ ಸಂಭ್ರಮದಲ್ಲಿರುವ ಜಗ್ಗೇಶ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ.

Related posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಕೆಶಿಗೆ ಪಟ್ಟ ಸಿಕ್ಕರೆ ನನಗೆ ಸಿಕ್ಕಂತೆ: ಸಚಿವ ಸ್ಥಾನದ ಆಸೆ ಇಲ್ಲ ಎಂದ ಶಾಸಕ ಗಣಿಗ ರವಿಕುಮಾರ್

June 1, 2026
ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಕೆಪಿಸಿಸಿ ಪಟ್ಟಕ್ಕೆ ಖರ್ಗೆ ಮಾಸ್ಟರ್ ಪ್ಲಾನ್: ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕುವ ಆ ನಾಯಕ ಯಾರು? ಜೂನ್ 3ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪಕ್ಕಾ!

June 1, 2026

ನಟ ಜಗ್ಗೇಶ್ 1980 ನವೆಂಬರ್ 17ರಂದು ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಈ ಪಯಣಕ್ಕೆ ಈಗ 40 ವರ್ಷದ ಸಂಭ್ರಮ. ಈ ನಾಲ್ಕು ದಶಕಗಳಲ್ಲಿ ಸಹಕಾರ ನೀಡಿದ, ಹಾರೈಸಿದವರನ್ನು, ಜೊತೆಗೆ ನಿಂತವರನ್ನು ನಟ ಜಗ್ಗೇಶ್ ನೆನಪಿಸಿಕೊಂಡು ಧನ್ಯವಾದ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ನವರಸನಾಯಕ ಜಗ್ಗೇಶ್ ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಹಾಸ್ಯದಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದ ಜಗ್ಗೇಶ್ ಅವರು ಈ ಸಂತಸವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟ್ಟರ್ ನಲ್ಲಿ ‘1980 ನವೆಂಬರ್ 17ಕ್ಕೆ ನಾ ಬಂದು ಇಂದಿಗೆ 2020 ನವೆಂಬರ್ 17ಕ್ಕೆ 40ವರ್ಷ. ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ ನಿರ್ದೇಶಕ ನಿರ್ಮಾಪಕ ಭುಜತಟ್ಟಿದ ಅಂದಿನ ನನ್ನ ಕಲಾಕುಟುಂಬ,ಮಾದ್ಯಮ ಕನ್ನಡದ ಮನಸ್ಸುಗಳು..! ಅಪಮಾನಿಸಿದ ಸ್ನೇಹಕ್ಕೆ, ಗೆಲ್ಲುವೆ ಹೋಗು ಕರಿಯ ಎಂದ ಹರಿಸಿದ ಅಮ್ಮ, ಜೊತೆ ನಿಂತ ಪರಿಮಳ, ಕೋಮಲ್ ರಾಯರ ದಯೆಗೆ ಆ ಜನ್ಮ ಋಣಿ ಹರಸಿ’ ಎಂದು ಬರೆದುಕೊಂಡಿದ್ದಾರೆ.

 jaggesh

ಅಂದ್ಹಾಗೆ ಜಗ್ಗೇಶ್ ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ತಾರಯರು ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.

ನೆನಪಿರಲಿ ಪ್ರೇಮ್
ನಟ ನೆನಪಿರಲಿ ಪ್ರೇಮ್ ಅವರು ಜಗ್ಗೇಶ್ ಅವರ ಬಗ್ಗೆ ಟ್ವೀಟ್ ಮಾಡಿದ್ದು, ‘ಕಲಾಬಂಧು, ನವರಸ ನಾಯಕ, ನಮ್ಮೆಲ್ಲರ ಪ್ರೀತಿಯ ಜಗ್ಗೇಶ್ ಅಣ್ಣ ಇಂದು ಸಿನಿರಂಗಕ್ಕೆ ಬಂದು 40 ವರ್ಷ ಪೂರ್ಣಗೊಂಡಿದ್ದು ಅವರಿಗೆ ತುಂಬು ಹೃದಯದ ಅಭಿನಂದನೆಗಳು’ ಎಂದಿದ್ದಾರೆ.

ಕಬ್ಜ ಸಿನಿಮಾದ ಮೋಷನ್ ಪೋಸ್ಟರ್ ನಲ್ಲಿ , ಉಪ್ಪಿ ರೆಟ್ರೋ ಲುಕ್ ಗೆ ಅಭಿಮಾನಿಗಳು ಫಿದಾ..!  

ರವಿಶಂಕರ್ ಗೌಡ
‘ಕಷ್ಟ ಸಹಿಸಿ, ನೋವು ಅಳಿಸಿ, ಅವಮಾನ ಅನುಭವಿಸಿ, ಹಸಿವನ್ನು ಅದುಮಿ, ಯಶಸ್ವಿಯಾಗಿ 40 ವರ್ಷದಿಂದ ನಗಿಸುವ ಕಾಯಕ ಮಾಡುತ್ತಲೇ ಅಪಾರ ಅಭಿಮಾನಿಗಳನ್ನು ಗಳಿಸುವುದು ಇಂತಹ ಶ್ರೇಷ್ಠ ನಟನಿಗೆ ಮಾತ್ರ ಸಾಧ್ಯ. ಇಂದಿಗೂ ನಮ್ಮಂತವರಿಗೆ ಸ್ಫೂರ್ತಿಯ ಸೆಲೆಯಾಗಿರುವ ನೀವು ನೂರು ವರ್ಷ ಪೂರೈಸಿ. ಅಭಿನಂದನೆಗಳು ಪ್ರೀತಿಯ ಜಗ್ಗಣ್ಣ.’ ಎಂದಿದ್ದಾರೆ ರವಿಶಂಕರ್ ಗೌಡ.

ರಘುರಾಮ್
ನಟ ಮತ್ತು ನಿರ್ದೇಶಕರಾದ ರಘುರಾಮ್ ಅವರು ಜಗ್ಗಣ್ಣನ ಬಗ್ಗೆ ಮಾತನಾಡಿ, ‘ಅವಮಾನಗಳನ್ನು ಮೆಟ್ಟಿ, ಅನುಮಾನಗಳನ್ನು ಅಟ್ಟಿ, ಸದ್ಮಾರ್ಗದ, ಸನ್ಮಾನದ ಕಡೇ ದೃಷ್ಟಿ ಇಟ್ಟ ನಮ್ಮ ಜಗಣ್ಣನ ಬಣ್ಣದ ಬದುಕಿಗೆ 40 ವರ್ಷ.ಇನ್ನಷ್ಟು ನಮ್ಮನ್ನ ನಗಿಸಿ, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ, ಸದಾಕಾಲ ಬೆಳ್ಳಿಪರದೆಯಲ್ಲಿ, ಕನ್ನಡಿಗರ ಹೃದಯದಲ್ಲಿ ವಿಜೃಂಭಿಸಿ .ಇದು ನಿಮ್ಮ ಗುರಿಗೆ ನಂಬಿಕೆಗೆ ಹಠಕ್ಕೆ, ಛಲಕ್ಕೆ, ಸಾಧನೆಗೆ 40ವರ್ಷ’ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

 jaggesh

ಪವನ್ ಒಡೆಯರ್ ಮತ್ತು ಕಾರ್ತಿಕ್ ಗೌಡ ನಿರ್ದೇಶಕ ಪವನ್ ಒಡೆಯರ್ ಸಹ ವಿಶ್ ಮಾಡಿದ್ದಾರೆ. ‘ಹೃದಯ ಪೂರ್ವಕ ಶುಭಾಶಯಗಳು ಅಣ್ಣ’ ಎಂದು ಹೇಳಿದ್ದಾರೆ. ನಿರ್ಮಾಪಕ ಕಾರ್ತಿಕ್ ಗೌಡ ಸಹ ಶುಭಾಶಯ ತಿಳಿಸಿದ್ದಾರೆ. ‘ಶುಭಾಶಯಗಳು ಅಣ್ಣ’ ಎಂದು ಟ್ವೀಟಿ ಮಾಡಿದ್ದಾರೆ.

ಮಂಡ್ಯದ ಮದ್ದೂರಿನಲ್ಲಿ ಅಂಬಿಗಾಗಿ ನಿರ್ಮಾಣವಾದ ಮಂದಿರ..!

ಸಂತೋಷ್ ಆನಂದರಾಮ್
ನಿರ್ದೇಶಕ ಸಂತೋಷ್ ಆನಂದರಾಮ್ ಸಹ ಜಗ್ಗೇಶ್ ಅವರಿಗೆ ವಿಶ್ ಮಾಡಿದ್ದಾರೆ. ‘ಭಾರತೀಯ ಚಿತ್ರ ರಂಗದಲ್ಲೇ 40 ವರ್ಷಗಳಿಂದ ತಮ್ಮ ಹಾಸ್ಯ ಹಾಗು ಅಭಿನಯದಿಂದ ಜನಮಾನಸವನ್ನು ಗೆಲ್ಲುತ್ತಿರುವ, ಪ್ರಭಾವಿಸುತ್ತಿರುವ Drama ದಿಂದ Digital ವರೆಗೂ ತಮ್ಮ ನವರಸ ಅಭಿನಯವನ್ನ ಪ್ರದರ್ಶಿಸುತ್ತಿರುವ ನಿಮಗೆ ಅನಂತ ನಮನಗಳು’ ಎಂದಿದ್ದಾರೆ.

ಇನ್ನೂ ಜಗ್ಗೇಶ್ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿ 40 ವರ್ಷಗಳು ತುಂಬಿದ ಹಿನ್ನೆಲೆ ಕಾಮನ್ ಡಿಪಿ ರಿಲೀಸ್ ಮಾಡಲಾಗಿದೆ. ಸಿಂಹಾಸನದ ಮೇಲೆ ಜಗ್ಗೇಶ್ ಕುಳಿತಿರುವ ಫೋಟೋ ಶೇರ್ ಮಾಡಲಾಗಿದ್ದು, ಸಾಮಾಜಿಕ ಜಾಲಾತಣಗಳಲ್ಲಿ ರಾರಾಜಿಸುತ್ತಿವೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: JaggeshNavarasanayakaSandalwood
ShareTweetSendShare
Join us on:

Related Posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಕೆಶಿಗೆ ಪಟ್ಟ ಸಿಕ್ಕರೆ ನನಗೆ ಸಿಕ್ಕಂತೆ: ಸಚಿವ ಸ್ಥಾನದ ಆಸೆ ಇಲ್ಲ ಎಂದ ಶಾಸಕ ಗಣಿಗ ರವಿಕುಮಾರ್

by Shwetha
June 1, 2026
0

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಅವರು ಅತ್ಯಂತ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಕೆಪಿಸಿಸಿ ಪಟ್ಟಕ್ಕೆ ಖರ್ಗೆ ಮಾಸ್ಟರ್ ಪ್ಲಾನ್: ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕುವ ಆ ನಾಯಕ ಯಾರು? ಜೂನ್ 3ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪಕ್ಕಾ!

by Shwetha
June 1, 2026
0

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಈಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಸಂಚಲನಕಾರಿ ಹೇಳಿಕೆಗಳು ರಾಜ್ಯ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಆಸ್ಪತ್ರೆಗೆ ಬಿಜೆಪಿ ಬೆದರಿಕೆ: ಅಭಿಷೇಕ್ ಬ್ಯಾನರ್ಜಿ ಆಸ್ಪತ್ರೆಯಿಂದ ಬಲವಂತದ ಡಿಸ್ಚಾರ್ಜ್ ಎಂದ ಮಮತಾ

by Shwetha
June 1, 2026
0

ಪಶ್ಚಿಮ ಬಂಗಾಳದ ರಾಜಕೀಯ ಸಮರ ಈಗ ಆಸ್ಪತ್ರೆಯ ಹೊಸ್ತಿಲಿಗೆ ಬಂದು ನಿಂತಿದೆ. ಸೋನಾರ್‌ಪುರದಲ್ಲಿ ಕಿಡಿಗೇಡಿಗಳ ಹಲ್ಲೆಯಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಸಿಎಂ ಹುದ್ದೆ ನೀಡದಿದ್ದರೆ ಸಚಿವ ಸ್ಥಾನವೇ ಬೇಡ: ಕಾಂಗ್ರೆಸ್ ಹೈಕಮಾಂಡ್ ಗೆ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

by Shwetha
June 1, 2026
0

ಕರ್ನಾಟಕ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಈಗ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಇದರ ಬೆನ್ನಲ್ಲೇ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ದಲಿತ ಸಮುದಾಯದ ಪ್ರಬಲ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಸಂಗೊಳ್ಳಿ ರಾಯಣ್ಣನಿಗೆ ಆದಂತೆಯೇ ಸಿದ್ದರಾಮಯ್ಯನವರಿಗೂ ಬೆನ್ನಿಗೆ ಚೂರಿ ಹಾಕಿದ ಆಪ್ತ ನಾಯಕ: ಯತ್ನಾಳ್ ಸ್ಫೋಟಕ ಹೇಳಿಕೆ

by Shwetha
June 1, 2026
0

ರಾಜ್ಯ ರಾಜಕಾರಣದಲ್ಲಿ ಈಗ ಮಹತ್ವದ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಚುರುಕುಗೊಂಡಿದ್ದು ಜೂನ್ 3 ರಂದು ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram