ಭಾರತದ ಮೊದಲ ಪ್ರಜೆ, ರಾಷ್ಟ್ರ ಪತಿ ರಾಮ್ ನಾಥ್ ಕೋವಿಂದ್ ಅವರು ಏಪ್ರಿಲ್ 1 ರಂದು ದೇಶಾದ್ಯಂತ ಪ್ರಾರಂಭಗೊಳ್ಳಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್.ಪಿ.ಆರ್) ಸೇರ್ಪಡೆಗೊಳ್ಳುವ ಮೊದಲ ವ್ಯಕ್ತಿ ಎಂದು ಹೆಸರನ್ನು ಹೇಳಬಯಸದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎನ್.ಪಿ.ಆರ್ ನ ಬಗ್ಗೆ ಜನರಲ್ಲಿನ ಗೊಂದಲವನ್ನು ಪರಿಹರಿಸಿ ಧೈರ್ಯ ತುಂಬುವ ಸಂದೇಶವನ್ನು ಇದು ರವಾನಿಸಲಿದೆ ಎಂದು ಆ ಹಿರಿಯ ಅಧಿಕಾರಿ ಹೇಳಿದ್ದಾರೆ.
ಎನ್ಪಿಆರ್ ಡೇಟಾಬೇಸ್ ಅನ್ನು 2010 ರಲ್ಲಿ ರಚಿಸಲಾಗಿದೆ ಮತ್ತು ಅದನ್ನು 2015-16ರಲ್ಲಿ ನವೀಕರಿಸಲಾಗಿದೆ.
ಜನಗಣತಿಗಿಂತ ಭಿನ್ನವಾಗಿ ಎನ್ಪಿಆರ್ ಪ್ರಶ್ನೆಗಳನ್ನು ಕಾನೂನಿನಲ್ಲಿ ಒದಗಿಸಲಾಗಿಲ್ಲ ಎಂದು ಸಚಿವಾಲಯವು ಆರ್ಜಿಐಗೆ ತಿಳಿಸಿದೆ ಎಂದು ತಿಳಿದುಬಂದಿದೆ
ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್
ಬೆಂಗಳೂರು: ರಾಜಕಾರಣದಲ್ಲಿ ಕೆಲಸ ಆಗಬೇಕೆಂದರೆ ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಬಳಸಬೇಕು ಎಂಬ ಮಾತಿದೆ. ಆದರೆ, ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...








