ADVERTISEMENT
Sunday, September 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸೌರವ್ ಗಂಗೂಲಿಗೆ ನಾಯಕನ ಪಾಠ ಹೇಳಿಕೊಟ್ಟಿದ್ದ ವೀರೇಂದ್ರ ಸೆಹ್ವಾಗ್..!

admin by admin
April 4, 2021
in Newsbeat, Sports, ಕ್ರೀಡೆ
Virender Sehwag Sourav Ganguly team india saakshatv
Share on FacebookShare on TwitterShare on WhatsappShare on Telegram

ಸೌರವ್ ಗಂಗೂಲಿಗೆ ನಾಯಕನ ಪಾಠ ಹೇಳಿಕೊಟ್ಟಿದ್ದ ವೀರೇಂದ್ರ ಸೆಹ್ವಾಗ್..!

Virender Sehwag  Sourav Ganguly team india saakshatvಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು 2002ರ ನ್ಯಾಟ್ ವೆಸ್ಟ್ ಫೈನಲ್ ಪಂದ್ಯದ ಐತಿಹಾಸಿಕ ಗೆಲುವನ್ನು ಸ್ಮರಿಸಿಕೊಂಡಿದ್ದಾರೆ.
ಅಲ್ಲದೆ ಈ ಫೈನಲ್ ಪಂದ್ಯದಲ್ಲಿ ಒಳ್ಳೆಯ ಪಾಠವನ್ನು ಕಲಿತಿದ್ದಾರಂತೆ. ನಾಯಕ ಹೇಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಪಂದ್ಯ ಸಹಕಾರಿಯಾಯ್ತು ಎಂದು ಹೇಳಿಕೊಂಡಿದ್ದಾರೆ.
ಅಂದ ಹಾಗೇ, ಗಂಗೂಲಿಗೆ ನಾಯಕತ್ವದ ಪಾಠ ಹೇಳಿಕೊಟ್ಟಿದ್ದು, ನಾಯಕ ಆಟಗಾರನ ಮನಸ್ಸನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು, ಮ್ಯಾನ್ ಮ್ಯಾನೇಜ್ ಮೆಂಟ್ ಅನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು ಗಂಗೂಲಿಗೆ ಹೇಳಿಕೊಟ್ಟಿದ್ದು ವೀರೇಂದ್ರ ಸೆಹ್ವಾಗ್.
ಇದು ಅಚ್ಚರಿಯಾದ್ರೂ ಸತ್ಯ. ಟೀಮ್ ಇಂಡಿಯಾದ ನಾಯಕ ಸೌರವ್ ಗಂಗೂಲಿ, ಆಗಿನ ಯುವ ಆಟಗಾರನಾಗಿದ್ದ ಸೆಹ್ವಾಗ್ ಪಾಠ ಮಾಡಿದ್ದಾರೆ ಅಂದ್ರೆ ನಂಬುದು ಸ್ವಲ್ಪ ಕಷ್ಟ. ಆದ್ರೂ ಇದು ನಿಜ. ಈ ವಿಚಾರವನ್ನು ಸೌರವ್ ಗಂಗೂಲಿಯವೇ ಹೇಳಿಕೊಂಡಿದ್ದಾರೆ.
ನ್ಯಾಟ್ ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದ್ದು ಈಗ ಇತಿಹಾಸ. ಯುವರಾಜ್ ಸಿಂಗ್ ಮತ್ತು ಮಹಮ್ಮದ್ ಕೈಫ್ ತಂಡವನ್ನು ಗೆಲುವಿನ ದಡ ಸೇರಿಸಿದ್ದು, ಗಂಗೂಲಿ ಲಾಡ್ರ್ಸ್ ಅಂಗಣದ ಬಾಲ್ಕನಿಯಲ್ಲಿ ಶರ್ಟ್ ಬಿಚ್ಚಿ ಕುಣಿದಾಡಿದ್ದು ಎಲ್ಲವೂ ನೆನಪಿಗೆ ಬರುತ್ತೆ.

Related posts

bigg-boss-kannada-kiccha-sudeep-class-to-modern-manja-and-agni-boys-in-new-promo

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್

September 20, 2026
upendra-birthday-next-level-movie-first-look-released-tarun-shivappa

ರಿಯಲ್ ಸ್ಟಾರ್’ ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ತರುಣ್ ಶಿವಪ್ಪ ನಿರ್ಮಾಣದ ‘ನೆಕ್ಸ್ಟ್ ಲೆವೆಲ್’ ಫಸ್ಟ್ ಲುಕ್ ರಿಲೀಸ್!

September 20, 2026

Virender Sehwag taught Sourav Ganguly a key lesson in captaincy

Virender Sehwag  Sourav Ganguly team india saakshatvಆದ್ರೆ ಈ ಘಟನೆಗಳು ನಡೆಯುವುದಕ್ಕಿಂತ ಮುನ್ನ ಗಂಗೂಲಿ ಸೆಹ್ವಾಗ್ ಈ ಪಂದ್ಯದಲ್ಲಿ ಯಾವ ರೀತಿ ಆಡಿದ್ರು, ನಾಯಕನಾದ ನನಗೆ ಹೇಗೆ ಸಿಟ್ಟು ಭರಿಸಿದ್ರು, ಆಮೇಲೆ ಆಟಗಾರನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಯ್ತು ಎಂಬುದನ್ನು ಸಹ ಗಂಗೂಲಿ ಹೇಳಿದ್ದಾರೆ.
ಗೆಲ್ಲಲು 326 ರನ್ ಗಳ ಗುರಿ ಟೀಮ್ ಇಂಡಿಯಾಗಿತ್ತು. ನಾನು ಮತ್ತು ಸೆಹ್ವಾಗ್ ಇನಿಂಗ್ಸ್ ಆರಂಭಿಸಲು ಕ್ರೀಸ್ ಗೆ ಬಂದ್ವಿ. ಆಗ ನಾನು ತುಂಬಾ ಒತ್ತಡದಲ್ಲಿದ್ದೆ. ನನ್ನ ಮನಸ್ಥಿತಿಯೂ ಸರಿಯಾಗಿರಲಿಲ್ಲ. ಆಗ ಸೆಹ್ವಾಗ್ ನನ್ನ ಬಳಿ ಬಂದು ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ ಅಂದ್ರು. ಅದಕ್ಕೆ ತಕ್ಕಂತೆ ನಾವು ಉತ್ತಮ ಆರಂಭವನ್ನು ಪಡೆದುಕೊಂಡಿದ್ದೇವು. 12 ಓವರ್ ಗಳಲ್ಲಿ 82 ರನ್ ಕೂಡ ಕಲೆ ಹಾಕಿದ್ದೇವು. ಆಗ ಸೆಹ್ವಾಗ್ ಬಳಿ ಬಂದು ನಾನು ಹೀಗೆ ಹೇಳಿದ್ದೆ. ಈಗ ಹೊಸ ಬೌಲರ್ ಬರುತ್ತಾನೆ. ಅದಷ್ಟು ನಾವು ಒಂಟಿ ರನ್ ಕಡೆಗೆ ಹೆಚ್ಚಿನ ಗಮನ ಹರಿಸೋಣ ಎಂದು ನಾನು ಸೆಹ್ವಾಗ್ ಗೆ ಸಲಹೆ ನೀಡಿದ್ದೆ.
ಆದ್ರೆ ರೋನಿಯ್ ಇರಾನಿ ಬೌಲಿಂಗ್ ಮಾಡಲು ಶುರು ಮಾಡಿದ್ರು. ಮೊದಲ ಎಸೆತದಲ್ಲೇ ಸೆಹ್ವಾಗ್ ಬೌಂಡರಿ ಸಿಡಿಸಿದ್ರು. ಆಗ ಸೆಹ್ವಾಗ್ ಬಳಿ ಬಂದು ಬೌಂಡರಿ ಬಂತು. ಮುಂದಿನ ಎಸೆತದಲ್ಲಿ ಒಂದು ರನ್ ಗಳಿಸು ಎಂದು ಹೇಳಿದ್ದೆ. ಆದ್ರೆ ಎರಡನೇ ಎಸೆತದಲ್ಲೂ ಸೆಹ್ವಾಗ್ ಬೌಂಡರಿ ದಾಖಲಿಸಿದ್ರು. ಮೂರನೇ ಎಸೆತದಲ್ಲೂ ನಾಲ್ಕು ರನ್ ಗಳಿಸಿದ್ರು. ನನ್ನ ಮಾತು ಸೆಹ್ವಾಗ್ ಕೇಳಲೇ ಇಲ್ಲ. ನನಗೆ ಆಗ ಸಿಟ್ಟು ಬಂತು. ಆದ್ರೂ ಸೆಹ್ವಾಗ್ ಐದನೇ ಎಸೆತವನ್ನು ಬೌಂಡರಿಗಟ್ಟಿದ್ದರು. ಆಗ ನನಗೆ ಅನ್ನಿಸಿದ್ದು, ಸೆಹ್ವಾಗ್ ಅವರ ನೈಜ ಆಟವನ್ನು ತಡೆಯುವುದು ಸರಿಯಲ್ಲ ಎಂದು. ಅಷ್ಟೇ ಅಲ್ಲ, ಆಟಗಾರನ ಮನಸ್ಥಿತಿಗೆ ತಕ್ಕಂತೆ ನಾಯಕ ಕೂಡ ಸರಿದೂಗಿಸಿಕೊಂಡು ಹೋಗಬೇಕು ಎಂಬುದು ತಿಳಿಯಿತ್ತು ಎಂದು ಸೌರವ್ ಗಂಗೂಲಿ ತನ್ನ ಹಳೆಯ ದಿನಗಳ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.

Tags: #saakshatv2002 Natwest finalbcciEnglandICCkolkotasaakshatvsportsSourav Gangulyteam indiaVirender Sehwag
ShareTweetSendShare
Join us on:

Related Posts

bigg-boss-kannada-kiccha-sudeep-class-to-modern-manja-and-agni-boys-in-new-promo

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್

by admin
September 20, 2026
0

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್ ಒಳಗೊಂಡ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ...

upendra-birthday-next-level-movie-first-look-released-tarun-shivappa

ರಿಯಲ್ ಸ್ಟಾರ್’ ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ತರುಣ್ ಶಿವಪ್ಪ ನಿರ್ಮಾಣದ ‘ನೆಕ್ಸ್ಟ್ ಲೆವೆಲ್’ ಫಸ್ಟ್ ಲುಕ್ ರಿಲೀಸ್!

by admin
September 20, 2026
0

ಬೆಂಗಳೂರು: ‘ರಿಯಲ್ ಸ್ಟಾರ್’ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬದ ಸಂಭ್ರಮ. ತಮ್ಮ ವಿಶಿಷ್ಟ ಆಲೋಚನೆ ಹಾಗೂ ಚಿತ್ರಕಥೆಗಳ ಮೂಲಕ ದಕ್ಷಿಣ ಭಾರತದಲ್ಲೇ ಹೊಸ ಅಲೆ...

pa-ranjith-vettuvam-movie-kiccha-sudeep-voice-over-kannada

ಪಾ. ರಂಜಿತ್ ನಿರ್ದೇಶನದ ಅದ್ಧೂರಿ ಆಕ್ಷನ್ ಸಿನಿಮಾ ‘ವೆಟ್ಟುವಮ್’; ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ

by admin
September 20, 2026
0

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಪಾ. ರಂಜಿತ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಅಪೋಕ್ಯಾಲಿಪ್ಟಿಕ್ ಆಕ್ಷನ್ ಸಿನಿಮಾ ‘ವೆಟ್ಟುವಮ್’ ಸಿನಿಪ್ರಿಯರಲ್ಲಿ ಭಾರಿ ಕುತೂಹಲ...

natural-star-nani-the-paradise-movie-press-meet-bengaluru

“ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ‘ನ್ಯಾಚುರಲ್ ಸ್ಟಾರ್’ ನಾನಿ ಮನದಾಳದ ಮಾತು, ‘ಪ್ಯಾರಡೈಸ್’ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್!

by admin
September 20, 2026
0

​ಬೆಂಗಳೂರು: ತೆಲುಗು ಚಿತ್ರರಂಗದ ‘ನ್ಯಾಚುರಲ್ ಸ್ಟಾರ್’ ಖ್ಯಾತಿಯ ನಟ ನಾನಿ ಅಭಿನಯದ ಬಹುನಿರೀಕ್ಷಿತ ನೂತನ ಆ್ಯಕ್ಷನ್ ಡ್ರಾಮಾ The Paradise ಸಿನಿಮಾದ ಪ್ರಚಾರಾರ್ಥವಾಗಿ ಬೆಂಗಳೂರಿನಲ್ಲಿ ಅದ್ಧೂರಿ ಪತ್ರಿಕಾಗೋಷ್ಠಿ...

jio-home-offers-free-amazon-prime-lite-for-one-year-on-30mbps-and-100mbps-plans

ಜಿಯೋಹೋಮ್‌ ಬಳಕೆದಾರರಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಲೈಟ್ ಉಚಿತ

by admin
September 20, 2026
0

* 3-ಇನ್-1 (ಟಿವಿ + ಒಟಿಟಿ + ವೈ-ಫೈ) ಯೋಜನೆಯ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಪ್ರಯೋಜನವನ್ನು ಪಡೆಯುತ್ತಾರೆ * ಅಮೆಜಾನ್ ಪ್ರೈಮ್ ವಿಡಿಯೋದೊಂದಿಗೆ ಉಚಿತ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram