ADVERTISEMENT
Friday, May 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜೀವಮಾನದಲ್ಲಿ ಒಮ್ಮೆ ಭೇಟಿ ನೀಡಲೇಬೇಕಾದ ‘ಲಕ್ಷದ್ವೀಪ’..!

Namratha Rao by Namratha Rao
June 14, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಜೀವಮಾನದಲ್ಲಿ ಒಮ್ಮೆ ಭೇಟಿ ನೀಡಲೇಬೇಕಾದ ‘ಲಕ್ಷದ್ವೀಪ’..!

ಲಕ್ಷದ್ವೀಪ.. ಭಾರತದ ದಕ್ಷಿಣಕ್ಕೆ ಅರಬ್ಬೀ ಸಮುದ್ರದಲ್ಲಿರುವ ಸುಂದರ ದ್ವೀಪ ಸಮೂಹ. ಈ ದ್ವೀಪಸಮೂಹ ಭಾರತದ ಚಿಕ್ಕ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪದ ಒಟ್ಟು ಭೂ ವಿಸ್ತೀರ್ಣ 32ಚದರ ಕಿ.ಮೀ.ಗಳು. ಇವು 4,200ಚ. ಕಿ. ಮೀ. ವಿಸ್ತೀರ್ಣದ ಜಲಭಾಗದ ಮಧ್ಯೆ ಇವೆ.

Related posts

ಜೀವರಾಜ್ ಗೆ ಸುಪ್ರೀಂ ಶಾಕ್: ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಯಲು ನ್ಯಾಯಾಲಯ ಗ್ರೀನ್ ಸಿಗ್ನಲ್

ಜೀವರಾಜ್ ಗೆ ಸುಪ್ರೀಂ ಶಾಕ್: ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಯಲು ನ್ಯಾಯಾಲಯ ಗ್ರೀನ್ ಸಿಗ್ನಲ್

May 22, 2026
ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

May 22, 2026

ಲಕ್ಷದ್ವೀಪವು ಒಂದು ಕೇಂದ್ರಾಡಳಿತ ಪ್ರದೇಶವಾಗಿದ್ದು ಸಾಕಷ್ಟು ಭಾರತೀಯ ಸೇನಾ ಕಚೇರಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ನಡುಗಡ್ಡೆಗಳ ಸಮೂಹವು ಸಾಕಷ್ಟು ಸಂಖ್ಯೆಯಲ್ಲಿ ಚಿಕ್ಕ ಪುಟ್ಟ ಭೂಪ್ರದೇಶಗಳನ್ನು ಹೊಂದಿದ್ದು ಮಾರ್ಮಿಕವಾಗಿ ಲಕ್ಷದ್ವೀಪಗಳಿಂದ ಕೂಡಿರುವಂತೆ ಕಾಣುವುದರಿಂದ ಇದಕ್ಕೆ ಲಕ್ಷದ್ವೀಪ ಎಂಬ ಹೆಸರು ಬಂದಿದೆ. ಇನ್ನು, ಏಳನೇಯ ಶತಮಾನದಲ್ಲಿ ಇಸ್ಲಾಂ ಧರ್ಮಪ್ರಚಾರಕರು ಇಲ್ಲಿಗೆ ಬಂದು ತಮ್ಮ ಧರ್ಮದ ಪ್ರಭಾವ ಬೀರಿದರು.

ಟಿಪ್ಪು ಸುಲ್ತಾನನ ವಶದಲ್ಲಿತ್ತು ಈ ಪ್ರದೇಶ..!

ಪೋರ್ಚುಗೀಸರು ಹಾಗೂ ಮಧ್ಯಕಾಲೀನದಲ್ಲಿ ಚೋಳ ಸಾಮ್ರಾಜ್ಯವೂ ಇಲ್ಲಿ ಆಡಳಿತ ನಡೆಸಿತ್ತೆಂದು ತಿಳಿದುಬರುತ್ತದೆ. ತದನಂತರ ಟಿಪ್ಪು ಸುಲ್ತಾನನ ಕೈವಶವಾಗಿ ಕೊನೆಯದಾಗಿ ಬ್ರಿಟಿಷರ ಆಡಳಿತಕ್ಕಿದು ಒಳಪಟ್ಟಿತು. ಬ್ರಿಟಿಷರು ಭಾರತವನ್ನು ತೊರೆದ ನಂತರ ಈ ನಡುಗಡ್ಡೆಗಳ ಸಮೂಹವು ಸ್ವತಂತ್ರ ಭಾರತದ ಅಧೀನಕ್ಕೊಳಪಟ್ಟು ನಂತರ ಇದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಲಾಯಿತು. ಇಲ್ಲಿಯ ಜನರ ಧರ್ಮದ ಬಗ್ಗೆ ಅನೇಕ ಕಥೆಗಳಿದ್ದು, ಕೇರಳದ ಕೊಚ್ಚಿಯ ಕೊನೆಯ ರಾಜ ಚೆರಮಾನ್ ಪೆರುಮಾಳ್ ದ್ವೀಪಕ್ಕೆ ಬಂದಾಗ ಅರಬ್ ವ್ಯಾಪಾರಿಗಳ ಪ್ರಭಾವಕ್ಕೆ ಒಳಗಾಗಿ ಮತಾಂತರವಾಗಿದ್ದಾನೆ ಎಂಬುದು ಅವುಗಳಲ್ಲಿ ಒಂದು.

ಇಲ್ಲಿಯ ಮುಖ್ಯ ದ್ವೀಪಗಳೆಂದರೆ ಕವರಟಿ, ಕಲ್ಪೇನಿ, ಮಿನಿಕಾಯ್, ಅಗಟಿ, ಕಡಮಟ್ಟಿ, ತಿನ್ನಿಕಾರ್ ಮತ್ತು ಬಂಗಾರಂ. ಪ್ರಮುಖ ದ್ವೀಪವಾದ ಕೊಡಮಾಟ್ ಅನ್ನು ಹಿಂದೆ ಲಖ್‍ದೀವ್ ಮಿನಿಕಾಯ್ ದ್ವೀಪವೆಂದು ಕರೆಯುತ್ತಿದ್ದರು.

ಲಕ್ಷದ್ವೀಪ ಅನೂಹ್ಯ ನೈಸರ್ಗಿಕ ಸೌಂದರ್ಯ ಮತ್ತು ಅಪ್ಪಟ ಸ್ಪಟಿಕದಂತದ ಸಮುದ್ರ ತೀರಗಳಿಗಾಗಿ ಪ್ರಸಿದ್ದಿ ಪಡೆದಿದೆ. ಹೀಗಾಗಿ ಇಲ್ಲಿ ಸದಾ ಪ್ರವಾಸಿಗರು ಆಗನಿಸುತ್ತಿರುತ್ತಾರೆ. ಹಡಗಿನಲ್ಲಿ ಸುಮಾರು ಒಂದು ದಿನ ಪಯಣಿಸಿ ಅಥವಾ ಚಿಕ್ಕ ವಿಮಾನದಲ್ಲಿ ಮಾತ್ರವೇ ಇಲ್ಲಿ ಬರಬಹುದು. ಕಡಿಮೆ ಸ್ಥಳ ಇರುವ ಕಾರಣದಿಂದಲೇ ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆಗೆ ಮಿತಿ ಇರುತ್ತದೆ. ಹಾಗಾಗಿ, ಅಧಿಕೃತ ಪ್ರವಾಸಿ ಏಜೆಂಟರ ಮೂಲಕವೇ ಇಲ್ಲಿ ಬರಬೇಕಾಗುತ್ತದೆ. ಇದಕ್ಕಾಗಿ ಕೊಚಿನ್ ನಗರದಲ್ಲಿರುವ ಕಚೇರಿಯಲ್ಲಿ ಪ್ರವಾಸಿಗರಾಗಿ ನೊಂದಾಯಿಸಿಕೊಂಡು ಅಧಿಕೃತ ಪರವಾನಗಿಯ ಮೂಲಕವೇ ಪ್ರಯಾಣಿಸಬೇಕು.

ಆಲೆಪ್ಪಿ…ದೋಣಿಮನೆಗಳು ಪ್ರವಾಸಿಗರ ಹಾಟ್ ಫೇವ್ರೇಟ್..! ಈ ಸ್ಥಳದ ವಿಶೇಷತೆಗಳು ಸಾಕಷ್ಟಿವೆ..!

ಇಲ್ಲಿ ಎಳನೀರು ‌ಭಾರೀ ಅಗ್ಗ..!!

ಇಲ್ಲಿ ಬಾವಿ ತೋಡಿದರೂ ಸಿಗುವುದು ಉಪ್ಪು ನೀರು. ಹಾಗಾಗಿ ತಾಜಾ ನೀರಿಗೆ ಇಲ್ಲಿ ಸದಾ ಆಭಾವ. ಮಿನರಲ್ ನೀರು ಬೇಕಿದ್ದರೆ 403 ಕಿ.ಮೀ. ದೂರದ ಕೊಚ್ಚಿನ್ ನಗರದಿಂದಲೇ ಬರಬೇಕು. ಹಾಗಾಗಿ ನೀರು ಇಲ್ಲಿ ದುಬಾರಿ. ಬದಲಿಗೆ, ಇಲ್ಲಿ ಸದಾ ದೊರಕುವ ಎಳನೀರನ್ನೇ ಜನರು ನೀರಿನ ಬದಲಾಗಿ ಕುಡಿಯುತ್ತಾರೆ. ಅಂಗಡಿಗಳಲ್ಲಿಯೂ ಸದಾ ಎಳನೀರು ದೊರಕುತ್ತದೆ.

ಇಲ್ಲಿ ಕಳ್ಳತನ ನಡೆಯುವುದೇ ಇಲ್ಲ..!

ಇಲ್ಲಿ ನೀವೇನಾದರೂ ಪ್ರವಾಸಕ್ಕೆ ತೆರಳುವುದಾದರೆ ನಿಮ್ಮ ವಸ್ತುಗಳು ಕಳ್ಳತನವಾಗುವ ಬಗ್ಗೆ ಟೆನ್ಷನ್ ಬಿಟ್ಟುಬಿಡಿ. ಇಲ್ಲಿ ಕಳ್ಳತನಕ್ಕೆ ಅವಕಾಶವೇ ಇಲ್ಲ.

ಇನ್ನು, ಲಕ್ಷದ್ವೀಪದ ಮುಖ್ಯ ಆಕರ್ಷಣೆ ಇಲ್ಲಿನ ಪೂರ್ವತೀರದ ಅಟ್ಟಾಲ್ ಗಳಾಗಿವೆ. ಇವು ಹೆಚ್ಚಿನಂಶ ಮೊಣಕಾಲಿನಷ್ಟೇ ಆಳದಲ್ಲಿದ್ದು ಇಲ್ಲಿ ನೂರಾರು ಬಗೆಯ ಹವಳಗಳಿವೆ. ಇವು ಗಾಜಿನಂತೆ ಮುರಿದರೆ ತೀವ್ರ ಹರಿತವಾದ ಅಂಚಿನ ಕತ್ತಿಯಂತಿದ್ದು ಇದರ ಮೇಲೆ ಕಾಲಿಟ್ಟರೆ ಕಾಲು ಕುಯ್ದು ಹೋಗುತ್ತದೆ. ಹಾಗಾಗಿ, ಹವಳಗಳ ಮೇಲೆ ಕಾಲಿಡುವುದು ಅಪಾಯಕರ. ಅಷ್ಟೇ ಅಲ್ಲ ಭಾರತ ಸರ್ಕಾರ ಈ ಹವಳಗಳನ್ನು ಕೀಳುವುದನ್ನಾಗಲಿ ಕೊಂಡು ಹೋಗುವುದನ್ನಾಗಲಿ ನಿಷೇಧಿಸಿದೆ. ಅದರಲ್ಲೂ ಉದ್ದೇಶಪೂರ್ವಕವಾಗಿ ಹವಳಗಳಿಗೆ ಹಾನಿ ಎಸಗುವುದು ಕಂಡು ಬಂದರೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಕಯಾಕ್ಸ್, ವಿಂಡ್ ಸರ್ಫರ್‌ಗಳು ಮತ್ತು ನೌಕಾಯಾನ ದೋಣಿಗಳು ಬಾಡಿಗೆಗೆ ಲಭ್ಯವಿದೆ. ಡಾಲ್ಫಿನ್ ಡೈವ್ ಸೆಂಟರ್ ಸ್ಕೂಬಾ ಡೈವ್ ಅನ್ನು ಇಷ್ಟಪಡುವವರಿಗೆ ಆಕರ್ಷಣೆಯಾಗಿದೆ. ಈ ಹವಳದ ಸ್ವರ್ಗಕ್ಕೆ ಭೇಟಿ ನೀಡಲು ಕೋರಲ್ ರೀಫ್ ಮತ್ತು ತಾರತಾಶಿ ಪ್ರವಾಸಿ ಪ್ಯಾಕೇಜ್‌ಗಳನ್ನು ಪಡೆಯಬಹುದು. ಮಂಗಳೂರು ಮತ್ತು ಕೊಚ್ಚಿನ್ ನಿಂದ ಲಕ್ಷದ್ವೀಪ ಕ್ಕೆ ಕ್ರೂಸ್ ಮೂಲಕ ಒಂದು ರಾತ್ರಿ ಪ್ರಯಾಣ ಮಾಡಿ ತೆರಳಬಹುದು. ಇನ್ನು ದೇಶದ ಕೆಲವು ನಗರಗಳಿಂದ ಇಲ್ಲಿಗೆ ವಿಮಾನ ಸೌಕರ್ಯವಿದೆ.

ಈ ದ್ವೀಪ ಚಾಕಲೇಟ್ ಗುಡ್ಡಗಳಿಗೆ ಭಾರೀ ಫೇಮಸ್…. ಎಣಿಕೆಗೆ ಸಿಗದಷ್ಟಿವೆ ಚಾಕೊಲೇಟ್ ಗುಡ್ಡಗಳು..!

Tags: indiaislandlakshadweepaTravel
ShareTweetSendShare
Join us on:

Related Posts

ಜೀವರಾಜ್ ಗೆ ಸುಪ್ರೀಂ ಶಾಕ್: ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಯಲು ನ್ಯಾಯಾಲಯ ಗ್ರೀನ್ ಸಿಗ್ನಲ್

ಜೀವರಾಜ್ ಗೆ ಸುಪ್ರೀಂ ಶಾಕ್: ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಯಲು ನ್ಯಾಯಾಲಯ ಗ್ರೀನ್ ಸಿಗ್ನಲ್

by Shwetha
May 22, 2026
0

ನವದೆಹಲಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತೀವ್ರ ಕಾನೂನು ಸಮರದಲ್ಲಿ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ಅವರಿಗೆ ಸುಪ್ರೀಂ ಕೋರ್ಟ್ ಮಹತ್ವದ...

ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

ಕಾಂಗೋ-ಉಗಾಂಡದಲ್ಲಿ ಎಬೋಲಾ ಭೀತಿ: ರಾಜ್ಯದಲ್ಲೂ ಹೈ ಅಲರ್ಟ್ ಘೋಷಣೆ

by Shwetha
May 22, 2026
0

ಎಬೋಲಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದಲ್ಲೂ ಆರೋಗ್ಯ ಇಲಾಖೆ ಹೈ ಅಲರ್ಟ್‌ ಘೋಷಿಸಿದೆ. ಈ ಕುರಿತು ಮಾತನಾಡಿದ ಆರೋಗ್ಯ ಸಚಿವ...

ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹತ್ಯೆ: PoKನಲ್ಲಿ ಹಮ್ಹಾ ಬುರ್ಹಾನ್‌ಗೆ ಗುಂಡೇಟು

ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹತ್ಯೆ: PoKನಲ್ಲಿ ಹಮ್ಹಾ ಬುರ್ಹಾನ್‌ಗೆ ಗುಂಡೇಟು

by Shwetha
May 22, 2026
0

2019ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಎಂದು ಗುರುತಿಸಲಾಗಿದ್ದ ಹಮ್ಹಾ ಬುರ್ಹಾನ್ ಅಲಿಯಾಸ್ ಅರ್ಜುಮಂಡ್ ಗುಲ್ಬಾರ್ ದಾರ್‌ನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಅಪರಿಚಿತರು ಗುಂಡಿಕ್ಕಿ...

ಮೆಲೋಡಿ ಚಾಕಲೇಟ್ ಗಿಫ್ಟ್ ನೀಡಿ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಇಟಲಿಯಲ್ಲಿ ಅಬ್ಬರಿಸಿದ ಮೇಕ್ ಇನ್ ಇಂಡಿಯಾ ಬ್ರ್ಯಾಂಡ್

ಮೆಲೋಡಿ ಚಾಕಲೇಟ್ ಗಿಫ್ಟ್ ನೀಡಿ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಇಟಲಿಯಲ್ಲಿ ಅಬ್ಬರಿಸಿದ ಮೇಕ್ ಇನ್ ಇಂಡಿಯಾ ಬ್ರ್ಯಾಂಡ್

by Shwetha
May 22, 2026
0

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳು ಕೇವಲ ರಾಜತಾಂತ್ರಿಕ ಭೇಟಿಗಳಾಗಿ ಉಳಿಯದೆ, ಭಾರತದ ಸಂಸ್ಕೃತಿ ಮತ್ತು ಸ್ವದೇಶಿ ಉತ್ಪನ್ನಗಳ ಪ್ರಚಾರದ ವೇದಿಕೆಗಳಾಗುತ್ತಿವೆ. ಇಟಲಿಯಲ್ಲಿ ನಡೆದ ಜಿ7...

ಕಾಕ್ರೋಚ್ ಪಾರ್ಟಿ ಅಲ್ಲ ಇದು ಪಾಕಿಸ್ತಾನ್ ಪಾರ್ಟಿ ಜಿರಲೆ ಪಡೆಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

ಕಾಕ್ರೋಚ್ ಪಾರ್ಟಿ ಅಲ್ಲ ಇದು ಪಾಕಿಸ್ತಾನ್ ಪಾರ್ಟಿ ಜಿರಲೆ ಪಡೆಯ ಅಸಲಿ ಬಣ್ಣ ಬಯಲು ಮಾಡಿದ ಬಿಜೆಪಿ

by Shwetha
May 22, 2026
0

ಭಾರತದ ಡಿಜಿಟಲ್ ಲೋಕದಲ್ಲಿ ಸುನಾಮಿಯಂತೆ ಅಬ್ಬರಿಸಿ ಕೇವಲ ಐದೇ ದಿನಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಗಳಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಈಗ ಭಾರೀ ವಿವಾದಕ್ಕೆ ಸಿಲುಕಿದೆ. ವ್ಯವಸ್ಥೆಯ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram