ಮಧ್ಯಪ್ರದೇಶ ರಾಜ್ಯದ ಬಿಂದ್ ಜಿಲ್ಲೆಯ ನಾಯಂಗಾವ್ ಪೊಲೀಸ್ ಠಾಣೆಯಲ್ಲಿ ವಿಶೇಷ ದೂರು ದಾಖಲಾಗಿದೆ. ಇದು ಜನರ ಕುತೂಹಲಕ್ಕೂ ಕಾರಣವಾಗಿದೆ.
ನಾಯಂಗಾವ್ ಎಂಬ ಹಳ್ಳಿಯ ರೈತನೊಬ್ಬ ಎಮ್ಮೆಯೊಂದಿಗೆ ಪೊಲೀಸ್ ಸ್ಟೇಷನ್ನಿಗೆ ಬಂದು ಎಮ್ಮೆಯ ವಿರುದ್ದ ದೂರು ಕೊಟ್ಟಿದ್ದಾರೆ. ಈ ಎಮ್ಮೆ ಹಾಲು ಕರೆಯಲು ಅವಕಾಶ ಕೊಡುತ್ತಿಲ್ಲ ಎಂಬ ಕಾರಣ ಹೇಳಿ ದೂರು ನೀಡಿದ್ದಾನೆ.
ಪೊಲೀಸರ ಜೊತೆ ನಿಂತು ನನ್ನ ಎಮ್ಮೆ ಜೊತೆಗೆ ದೂರು ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನನ್ನ ಎಮ್ಮೆಗೆ ಮಾಟ ಮಂತ್ರ ಮಾಡಿಸಲಾಗಿದೆ ಎಂದು ರೈತ ಬಾಬು ಲಾಲ್ ಜಾತವ್ ಶನಿವಾರ ದೂರು ನೀಡಿದ್ದಾರೆ. ದೂರು ತೆಗೆದುಕೊಂಡ ಬಳಿಕ ಪೊಲೀಸರು ಪಶು ವೈದ್ಯರ ಬಳಿ ಹೋಗಲು ತಿಳಿಸಿದ್ದಾರೆ. ನಾಲ್ಕು ಗಂಟೆಯ ಬಳಿಕ ಮತ್ತೆ ಠಾಣೆಗೆ ಬಂದು ರೈತ ಈಗ ಎಮ್ಮೆ ಹಾಲು ಕರೆಯಲು ಅನುವು ಮಾಡಿಕೊಟ್ಟಿದೆ. ಎಂದು ಹೇಳಿ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾನೆ.