ಆನೇಕಲ್: ರಸ್ತೆಯಲ್ಲಿದ್ದ ಕಲ್ಲಂಗಡಿ ಅಂಗಡಿಗೆ ಕಾಡಾನೆ ನುಗ್ಗಿದ್ದು, ಅಲ್ಲಿಯೇ ಮಲಗಿದ್ದ ದಂಪತಿ ಜೀವ ಭಯದಿಂದ ಓಡಿ ಹೋಗಿರುವ ಘಟನೆ ನಡೆದಿದೆ.
ಇತ್ತೀಚೆಗೆ ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಆನೇಕಲ್ ತಾಲೂಕಿನ ಡೆಂಕಣಿಕೋಟೆ ಗ್ರಾಮಕ್ಕೆ ಒಂಟಿ ಸಲಗವೊಂದು ನುಗ್ಗಿ ಅವಾಂತರ ಸೃಷ್ಟಿಸಿದೆ.
ಬೆಳಗಿನ ಜಾವ ಗ್ರಾಮದ ಸುತ್ತ ಆನೆ ಸುತ್ತಾಡಿದೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ಕಲ್ಲಂಗಡಿ ಅಂಗಡಿಗೆ ಹೋಗಿದೆ. ಆಗ ವ್ಯಾಪರಸ್ಥರಾದ ದಂಪತಿಗೆ ಇತರೆ ಗ್ರಾಮಸ್ಥರು ಬೊಬ್ಬೆ ಹಾಕಿ ಎಬ್ಬಿಸಿ ಓಡುವಂತೆ ಹೇಳಿದ್ದಾರೆ. ಆಗ ದಂಪತಿ ಅಲ್ಲಿಂದ ಪರಾರಿಯಾಗಿದ್ದಾರೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದಾಗಿ ದಂಪತಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.