ಯುವಕನೊಬ್ಬ ಭಯೋತ್ಪಾದಕ ಸಂಘಟನೆ ಸೇರುವ ಬಯಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಐಐಟಿ ಗುವಾಹಟಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಭಯೋತ್ಫಾದಕ ಸಂಘಟನೆಗೆ ಸೇರಬೇಕೆಂದುಕೊಂಡಿದ್ದೇನೆ ಶೀಘ್ರವೇ ಈ ಕ್ಯಾಂಪಸ್ನಿಂದ ಹೊರಗೆ ಹೋಗುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದ. ಈ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕ ನಂತರ ಆತನನ್ನು ಅರೆಸ್ಟ್ ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸರು ತೆರಳುತ್ತಿದ್ದಂತೆ ಆತ ಕಾಣೆಯಾಗಿದ್ದ. ಅಲ್ಲದೇ, ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ನಂತರ ಗುವಾಹಟಿಯಿಂದ ಸುಮಾರು 30 ಕಿ.ಮೀ ದೂರದಲ್ಲಿನ ಹಜೋ ಪ್ರದೇದಲ್ಲಿ ಸಂಜೆ ವೇಳೆಗೆ ಸ್ಥಳೀಯರ ನೆರವಿನಿಂದ ಪೊಲೀಸರು ಅತನನ್ನು ಬಂಧಿಸಿದ್ದಾರೆ. ಈ ವಿದ್ಯಾರ್ಥಿ ದೆಹಲಿಯ ಓಖ್ಲಾದಿಂದ ಬಂದಿದ್ದು, ಆತನ ಕೋಣೆಯಲ್ಲಿ ಕೆಲವು ಕಪ್ಪು ಬಾವುಟಗಳು ಪತ್ತೆಯಾಗಿವೆ. ವಿದ್ಯಾರ್ಥಿ ಕೆಲವು ವಿವರ ನೀಡಿದ್ದು, ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.