ಮುಂಬಯಿ: ಅಯೋಧ್ಯೆಗೆ ಹೊರಟಿದ್ದ ರೈಲಿಗೆ ಕಲ್ಲು ಎಸೆದಿರುವ ಘಟನೆ ನಡೆದಿದೆ.
ಗುಜರಾತ್ ನ ಸೂರತ್ ನಿಂದ ಅಯೋಧ್ಯೆಗೆ (Ayodhya) ಹೊರಟಿದ್ದ ಆಸ್ತಾ ವಿಶೇಷ ರೈಲಿಗೆ (Aastha Special Train) ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆ ಮಹಾರಾಷ್ಟ್ರದ ನಂದೂರ್ಬಾರ್ ಹತ್ತಿರ ನಡೆದಿದೆ.
ಆಸ್ತಾ ವಿಶೇಷ ರೈಲು ಭಾನುವಾರ ರಾತ್ರಿ 8ಕ್ಕೆ ಚಾಲನೆ ನೀಡಲಗಿತ್ತು. ಈ ರೈಲಿನಲ್ಲಿ 1,340 ಜನ ಪ್ರಯಾಣಿಕರ ತೆರಳುತ್ತಿದ್ದರು. ರಾತ್ರಿ 10:45 ಕ್ಕೆ ನಂದೂರ್ಬಾರ್ ಹತ್ತಿರ ರೈಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಇದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ವೇಳೆ ಪ್ರಯಾಣಿಕರು ಕಿಟಕಿ ಮುಚ್ಚಿದ್ದಾರೆ. ಕೆಲವು ಕಲ್ಲುಗಳು ಕೋಚ್ನೊಳಗೆ ನುಗ್ಗಿವೆ ಎಂದು ನಂದೂರ್ಬಾರ್ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಸಂಜಯ್ ಮಹಾಜನ್ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ರಾಮಲಲ್ಲಾನ ದರ್ಶನಕ್ಕಾಗಿ ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ನಗರಗಳು ಮತ್ತು ಶ್ರೇಣಿ 1 ಮತ್ತು ಶ್ರೇಣಿ 2 ಪಟ್ಟಣಗಳಿಂದ 200ಕ್ಕೂ ಅಧಿಕ ಆಸ್ತಾ ವಿಶೇಷ ರೈಲುಗಳನ್ನು ಅಯೋಧ್ಯೆ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿದೆ.