ಬೆಂಗಳೂರು: ಕಿಲಾಡಿಯೊಬ್ಬಳು ಕಾಸ್ಮೆಟಿಕ್ ಸರ್ಜರಿಗೆ ಬಂದು ವೈದ್ಯರಿಗೆ 6 ಕೋಟಿ ರೂ. ಪಂಗನಾಮ ಹಾಕಿರುವ ಘಟನೆಯೊಂದು ನಡೆದಿದೆ.
ಈ ಘಟನೆ ವಿಜಯನಗರದಲ್ಲಿ (Vijayanagar) ನಡೆದಿದೆ. ಡಾ. ಗಿರೀಶ್ ಮೋಸ ಹೋದವರು. ಐಶ್ವರ್ಯಗೌಡ ಎಂಬ ಮಹಿಳೆ ಕಾಸ್ಮಿಟಿಕ್ ಸರ್ಜಿರಿಗೆಂದು ಖಾಸಗಿ ಆಸ್ಪತ್ರೆಗೆ ಬಂದಿದ್ದಳು. ಈ ಸಂದರ್ಭದಲ್ಲಿ ವೈದ್ಯರು ಮುಂದೆ ನನಗೆ ದೊಡ್ಡವರ ಪರಿಚಯ ಇದೆ ಎಂದು ಹೇಳಿಕೊಂಡಿದ್ದಾಳೆ. ಆನಂತರ ವೈದ್ಯರಿಗೆ (Doctor) ಐಷಾರಾಮಿ ಕಾರು ಕೊಡಿಸುವುದಾಗಿ ನಂಬಿಸಿ 2.75 ಕೋಟಿ ರೂ. ವಂಚನೆ ಮಾಡಿದ್ದಾಳೆ ಎಂದು ವೈದ್ಯರು ಆರೋಪಿಸಿದ್ದಾರೆ.
ಆನಂತರ ವೈದ್ಯರು 3.25 ಕೋಟಿ ರೂ. ನಗದು ಹಣ ನೀಡಿದ್ದಾರೆ. ಹಣ ಪಡೆದ ನಂತರ ಮತ್ತೆ ಅವರು ಸಂಪರ್ಕಕ್ಕೆ ಸಿಗದಿರುವಾಗ ಮಹಿಳೆಯನ್ನು ವಿಚಾರಿಸಿದ್ದಾರೆ. ಆ ವೇಳೆ ಹಣ ನೀಡುವುದಾಗಿ ಹೇಳಿ, ವೈದ್ಯರನ್ನು ಕರೆಯಿಸಿದ್ದಾಳೆ. ಆಲ್ಲಿ ನನ್ನ ಅತ್ಯಾಚಾರ ಮಾಡಲು ಬಂದಿದ್ದೀಯಾ ಎಂದು ಹೆದರಿಸಿ ಮತ್ತೆ 2 ಲಕ್ಷ ರೂ. ಕಿತ್ತಿದ್ದಾಳೆ ಎಂದು ವೈದ್ಯರು ದೂರು ನೀಡಿದ್ದಾರೆ. ಸದ್ಯ ಐಶ್ವರ್ಯ ವಿರುದ್ಧ ಪ್ರಕಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.