ಬೆಂಗಳೂರು: ನಗರದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ಹಾಗೂ ಪಾಕ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಯುವಕನೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
ಇದಕ್ಕೆ ಅಲ್ಲಿದ್ದ ಪೊಲೀಸರು ಆಕ್ಷೇಪಿಸಿದಾಗ ನಾನು ಪಾಕ್ ನಿಂದ ಬಂದಿದ್ದೇನೆ. ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದೇನೆ, ಭಾರತ್ ಮಾತಾಕಿ ಜೈ ಎಂದು ಕೂಗೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾನೆ. ಅಲ್ಲದೇ, ಆಸ್ಟ್ರೇಲಿಯಾ ಪರ ಕೂಗಬಹುದು. ಪಾಕ್ ಪರ ಕೂಗಬಾರದಾ ಎಂದು ಪ್ರಶ್ನಿಸಿದ್ದಾನೆ. ಕ್ರೀಡಾಂಗಣದ ಒಳಗೆ ಪ್ರವೇಶಿಸುವ ವೇಳೆ ಇದೇ ಯುವಕನಿಗೆ ಪಾಕ್ ಬಾವುಟ ತೆಗೆದುಕೊಂಡು ಹೋಗಲು ಪೊಲೀಸರು ನಿರಾಕರಿಸಿದ್ದರು. ಆಗಲೂ ಆತ ವಾಗ್ವಾದ ನಡೆಸಿದ್ದ.