ರಾಂಚಿ: ಮದುವೆಯಾಗಲು ನಿರಾಕರಿಸಿದ ಪ್ರಿಯಕರನನ್ನು ಯುವತಿ ಕೊಚ್ಚಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಜಾರ್ಖಂಡ್ ನ ಕೊಲ್ಹುವಾ ಎಂಬಲ್ಲಿ ನಡೆದಿದ್ದು, ಪ್ರಿಯಕರನನ್ನು ಮಲಗಿದ್ದ ವೇಳೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಅಂಜಲಿ (20) ಕೊಲೆ ಮಾಡಿದ ಯುವತಿ ಎನ್ನಲಾಗಿದೆ. ಧರ್ಮನ್ ಓರಾನ್ (24) ಕೊಲೆಗೊಳಗಾದ ಯುವಕ ಎನ್ನಲಾಗಿದೆ.
ಕೊಲೆಯಾದ ಯುವಕ ಹಾಗೂ ಕೊಲೆ ಮಾಡಿದ ಯುವತಿ ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಆದರೆ, ಮದುವೆ ವಿಚಾರ ಬಂದಾಗ ಯುವಕ ಅದನ್ನು ನಿರಾಕರಿಸಿದ್ದ ಎನ್ನಲಾಗಿದ್ದು, ಈ ಕಾರಣಕ್ಕೆ ಆಕ್ರೋಶಗೊಂಡ ಯುವತಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಅಂಜಲಿ ಕೊಲೆ ಮಾಡುವುದಕ್ಕಾಗಿಯೇ ಮಾತನಾಡುವ ನೆಪದಲ್ಲಿ ಧರ್ಮನ್ನನ್ನು ನಿರ್ಜನ ಪ್ರದೇಶಕ್ಕೆ ಕರೆಸಿದ್ದಳು. ಈ ವೇಳೆ ಇಬ್ಬರು ಮಾತನಾಡಿದ್ದಾರೆ. ನಂತರ ನಂತರ ಧರ್ಮನ್ ನೆಲದ ಮೇಲೆ ನಿದ್ರೆಗೆ ಜಾರಿದ್ದಾನೆ. ಈ ಸಂದರ್ಭದಲ್ಲಿ ಮೊದಲೇ ತಂದಿಟ್ಟಿದ್ದ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ, ಶವವನ್ನು ಪೊದೆಯಲ್ಲಿ ಮುಚ್ಚಿಟ್ಟು ಪರಾರಿಯಾಗಿದ್ದಳು. ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.