Accident ದುಃಖ ಕಳೆದು ಸಂತಸ ಅರಸಿ ಹರಸಿ ಹರಕೆ ಹೊತ್ತು ಹೋದ ದಂಪತಿ ಮಸನದ ಹಾದಿ ಹಿಡಿದಿದ್ದಾರೆ.
ಹೌದು ಹರಸಿ ಹರಕೆ ಕಟ್ಟಿಕೊಂಡಿದ್ದ ದಂಪತಿ ಹರಕೆ ತೀರಿಸಲಲೆಂದು ಹೋದಾಗ ಬೀಕರ ರಸ್ತೆ ಅಪಘಾತದಲ್ಲಿ ಧಾರುಣವಾಗಿ ಮೃತ ಪಟ್ಟಿರುವ ಗಟನೆ ದರವಾಡ ಜಿಲ್ಲೆಯಲ್ಲಿ ನಡೆದಿದೆ.
ಮದುವೆಯಾಗಿ 15 ವರ್ಷವಾದರೂ ಇನ್ನೂ ಮಕ್ಕಳಾಗದ ಕಾರಣಕ್ಕೆ ತಮಗೆ ಮಕ್ಕಳನ್ನು ಕರುಣಿಸುವಂತೆ ದೇವರ ಬಳಿ ಹರಕೆ ಹೊತ್ತು ಹಿಂದಿರುಗಿ ಬರುತ್ತಿದ್ದರು , ಆದರೆ ದೇವರಲ್ಲಿ ಕೋರಿಕೆ ಈಡೇರಿಸುವ ಬದಲು ದಂಪತಿಯನ್ನು ತನ್ನ ಬಳಿಗೇ ಕರೆದು ಕೊಂಡಿದ್ದಾನೆ .
ಭೀಕರ ಅಪಘಾತಕ್ಕೀಡಾಗಿ (Accident) ದಂಪತಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಬೈಕ್ ಸವಾರನಾದ ಸಹದೇವಪ್ಪ ದೇವರಮನಿ (45) ಮತ್ತು ಅವನ ಪತ್ನಿ ದೀಪಾ ದೇವರಮನೆ (36) ಮಕ್ಕಳಾಗಲೆಂದು ಹರಕೆ ಕಟ್ಟಿ ಕೊಂಡಿದ್ದರು,ಹರಕೆಯನ್ನು ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ದೇವರಿಗೆ ಹೊತ್ತಿದ್ದು ಪ್ರತಿ ಅಮವಾಸ್ಯೆಗೆ ಹರಕೆ ತೀರಿಸಲು ಹೊಗುತ್ತಿದ್ದರು ಹೋಗುತ್ತಿದ್ದರು.
ಅದರಂತೆರ ಹರಕೆ ತೀರಿಸಿ ಮರಳಿ ಬರುತ್ತಿರುವಾಗ ಧಾರವಾಡ ಜಿಲ್ಲೆ ನರಗುಂದ ತಾಲ್ಲೂಕಿನ ಬೈರನಹಟ್ಟಿ ಬಳಿ ಯಲ್ಲಿ ಭೀಕರ ರಸ್ತೆ ಅಪಗಾತ ಸಂಭವಿಸಿದೆ. ಈ ಆಪಘಾತದ ತೀವೃತೆಗೆ ದಂಪತಿ ಮೃತ ಪಟ್ಟಿದ್ದಾರೆ
ಈ ಅಪಗಾತ ಬೈಕ್ ಮತ್ತು ಕಾರಿನ ನಡುವೆ ನಡೆದದ್ದು ಅಪಘಾತದಲ್ಲಿ ಡಿಕ್ಕಿ ಹೋಡೆದ ರಭಸಕ್ಕೆ ಕಾರು ಮತ್ತು ಬೈಕು ಸುಟ್ಟು ಭಸ್ಮವಾಗಿವೆ.
ಬಾಗಲಕೋಟೆ ಜಿಲ್ಲೆ ಮುಧೋಳ ದಿಂದ ಮಹಿಂದ್ರಾ TUV-300 ಕಾರು ಸರ್ವಿಸ್ಗಾಗಿ ಹುಬ್ಬಳ್ಳಿಗೆ ಹೊರಟಿತ್ತು. ಇದೇ ಮಾರ್ಗದಲ್ಲಿ ದಂಪತಿ ಬೈಕ್ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ವಾಹನಗಳು ಸ್ಪೋಟಗೊಂಡು ಹೊತ್ತಿ ಉರಿದಿವೆ. ವಾಹನಗಳ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯು ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ. ಪೊಳಿಸರು ಹೆಚ್ಚಿನ ಮಾಹಿತಿಗಾಗಿ ಪರಿಶೀಲನೆ ನಡೆಸುತ್ತಿದ್ದಾರೆ.