AIADMK ಮಹಹತ್ವದ ಸಭೆ – ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆ ಪಳನಿಸ್ವಾಮಿ ನೇಮಕ
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಸಾಮಾನ್ಯ ಮಂಡಳಿ ಸಭೆಯಲ್ಲಿ (AIADMK) ಪಕ್ಷಕ್ಕೆ ಇನ್ನು ಮುಂದೆ ಉಭಯ ನಾಯಕತ್ವ ವಿಧಾನವನ್ನು ರದ್ದುಗೊಳಿಸಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಚೆನೈನಲ್ಲಿ ನಡೆದ ನಡೆದ ಕಾರ್ಯಕಾರಿ ಸಮಿತಿ ಮತ್ತು ಜನರಲ್ ಕೌನ್ಸಿಲ್ ಸಭೆಯಲ್ಲಿ, ಎಐಎಡಿಎಂಕೆ ಅನುಕ್ರಮವಾಗಿ ಓ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಹೊಂದಿದ್ದ ಹಿಂದಿನ ಕೋಆರ್ಡಿನೇಟರ್ ಮತ್ತು ಜಾಯಿಂಟ್ ಕೋಆರ್ಡಿನೇಟರ್ ಸ್ಥಾನಗಳನ್ನ ರದ್ದುಗೊಳಿಸಿದೆ.
ಸಭೆಯಲ್ಲಿ, ಓ ಪನ್ನೀರಸೆಲ್ವಂ (OPS) ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮತ್ತು ಖಜಾಂಚಿ ಸ್ಥಾನದಿಂದ ತೆಗೆದುಹಾಕಲಾಗಿದೆ. ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸಿ.ವಿಜಯಭಾಸ್ಕರ್ ಅವರು ಇಂದು ನಡೆದ ಸಭೆಯಲ್ಲಿ ಪಕ್ಷದ ಹಣಕಾಸು ಖಾತೆಗಳನ್ನು ಮಂಡಿಸಿದ್ದು, ಒಪಿಎಸ್ ಅವರನ್ನ ಹುದ್ದೆಯಿಂದ ಕಿತ್ತೆಸೆದಿದ್ದಾರೆ. ಒಪಿಎಸ್ ಬೆಂಬಲಿಗರಾದ ಆರ್ ವೈತಿಲಿಂಗಂ, ಜೆಸಿಡಿ ಪ್ರಭಾಕರ್, ಮನೋಜ್ ಪಾಂಡಿಯನ್ ಅವರನ್ನೂ ಪಕ್ಷದಿಂದ ಉಚ್ಛಾಟಿಸಲಾಗಿದೆ.
Chennai, Tamil Nadu | AIADMK General Council Meeting presided by E Palaniswami underway at party office in Vanagaram; 16 resolutions are expected to be passed here pic.twitter.com/mE8YKYOlj5
— ANI (@ANI) July 11, 2022
ಪಕ್ಷದ ಪ್ರಧಾನ ಕಾರ್ಯದರ್ಶಿ ಆಯ್ಕೆಗಾಗಿ 4 ತಿಂಗಳಲ್ಲಿ ಸಾಂಸ್ಥಿಕ ಚುನಾವಣೆ ನಡೆಸಲು ಪಕ್ಷವು ಔಪಚಾರಿಕವಾಗಿ ನಿರ್ಧರಿಸಿದೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುವವರು 10 ವರ್ಷಗಳ ಕಾಲ ನಿರಂತರವಾಗಿ ಪಕ್ಷದ ಸದಸ್ಯರಾಗಿರಬೇಕು ಎಂದು ಪಕ್ಷದ ಶಾಸಕ ಆರ್.ಬಿ.ಉದಯಕುಮಾರ್ ಹೇಳಿದರು ಹಾಗೂ ರಾಜ್ಯಾದ್ಯಂತ ಪಕ್ಷದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳ ಆಯ್ಕೆಯನ್ನು ಸಾಂಸ್ಥಿಕ ಚುನಾವಣೆ ಮೂಲಕ ಅಂಗೀಕರಿಸುವ ನಿರ್ಣಯವನ್ನು ಉದಯಕುಮಾರ್ ಪ್ರಸ್ತಾಪಿಸಿದ್ದಾರೆ.
ರಾಜಕೀಯ ಪಕ್ಷವೊಂದರ ಜಗಳದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಎಐಎಡಿಎಂಕೆ ನಾಯಕ ಮತ್ತು ಮಾಜಿ ಸಂಯೋಜಕ ಓ ಪನ್ನೀರಸೆಲ್ವಂ (OPS) ಸಾಮಾನ್ಯ ಮಂಡಳಿ ಸಭೆಯ ನಿರ್ವಹಣೆಗೆ ತಡೆ ನೀಡುವಂತೆ ಮಾಡಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ಇಂದು ಸೋಮವಾರ ಬೆಳಗ್ಗೆ ತಿರಸ್ಕರಿಸಿದೆ.
ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ಇಂದು ಬೆಳಗ್ಗೆ ತೀರ್ಪು ನೀಡಿದ್ದು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಸರ್ವೋಚ್ಚ ನಿರ್ಧಾರ ತೆಗೆದುಕೊಳ್ಳುವ ಜಿಸಿ ಸಭೆಯನ್ನು ನಡೆಸಲು ಪಳನಿಸ್ವಾಮಿ ಬಣಕ್ಕೆ ಅನುಮತಿ ನೀಡಿದೆ.