ಚಿಕ್ಕಮಗಳೂರು: ಸಚಿವರ ಪ್ರವಾಸ ವೇಳೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ ಬೆದರಿಕೆ ಹಾಕಿದ್ದ ಆರೋಪದಡಿ ಪಿ.ಎ. ಗಂಗಾಧರ್ ವಿರುದ್ಧ ಎಫ್ಐಆರ ದಾಖಲಾಗಿದೆ.
ಕಂದಾಯ ಸಚಿವ ಆರ್.ಅಶೋಕ್ ಜ.24ರಂದು ಶೃಂಗೇರಿಗೆ ಬಂದಾಗ ಪಿಎ ಗಂಗಾಧರ್ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರಿಂದ ಲಂಚ ಕೇಳಿದ್ದರು.
ಇದಕ್ಕೂ ಎರಡು ದಿನ ಮೊದಲು, ಅಂದರೆ ಜ.22ರಂದು ಗಂಗಾಧರ್ ಸಬ್ ರಿಜಿಸ್ಟ್ರಾರ್ ಚೆಲುವರಾಜುಗೆ ವಾಟ್ಯಾಪ್ ಕರೆ ಮಾಡಿದ್ದ ಅಶೋಕ್ ಪಿ.ಎ ಗಂಗಾಧರ್, ಅಲ್ಲಿ ತನ್ನನ್ನು ಭೇಟಿಯಾಗಿ ಎಂದು ಸೂಚಿಸಿದ್ದ.
ನಿಧಿಯಂತೆ ಜ.24ರಂದು ಶೃಂಗೇರಿಗೆ ಬಂದು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ತಂಗಿದ್ದ ಅಶೋಕ್ ಪಿಎ ಗಂಗಾಧರ್, ಅಲ್ಲಿಗೆ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರನ್ನು ಕರೆಸಿಕೊಂಡಿದ್ದರು.
ಈ ವೇಳೆ, ಏನಿದೆ ಕೊಡಿ ಎಂದು ಗಂಗಾಧರ್ ಕೇಳಿದ್ದರು. ಚೆಲುವರಾಜು ನಾನು ಯಾರಿಗೂ ಲಂಚ ಕೊಡುವುದಿಲ್ಲ. ಯಾರಿಂದಲೂ ಹಣ ಪಡೆಯುವುದಿಲ್ಲ ಎಂದಿದ್ದರಂತೆ. ಅಂದು ರಾತ್ರಿ ಮತ್ತೆ ಫೈಲ್ ನೆಪದಲ್ಲಿ ಗಂಗಾಧರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಲಂಚ ಕೊಡದೇ ಇದ್ದರೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾಗಿ ಸಬ್ ರಿಜಿಸ್ಟ್ರಾರ್ ಚೆಲುವರಾಜು ಶೃಂಗೇರಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಸರ್ಕಾರಿ ಅಧಿಕಾರಿಯಾದ್ದರಿಂದ ದೂರಿನ ಸಂಬಂಧ ಶೃಂಗೇರಿ ಕೋರ್ಟ್ನ ಅನುಮತಿ ಸಿಗುತ್ತಿದ್ದಂತೆ ಗಂಗಾಧರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗಂಗಾಧರ್ ವಿರುದ್ಧ ಚೆಲುವರಾಜು ದೂರು ನೀಡುತ್ತಿದ್ದಂತೆ ಸಚಿವ ಆರ್.ಅಶೋಕ್, ವಿಧಾನಸೌಧದ ಮಾತೃ ಇಲಾಖೆಗೆ ವಾಪಸ್ ಕಳಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel