ಮುಂದಿನ 30-40 ವರ್ಷಗಳು ಬಿಜೆಪಿ ಯುಗ ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಭವಿಷ್ಯ ನುಡಿದಿದ್ದಾರೆ.. ಹೈದರಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು , ವಂಶಾಡಳಿತ, ಜಾತಿ ರಾಜಕಾರಣ ಮತ್ತು ತುಷ್ಟೀಕರಣ ಪ್ರಮುಖ ಶಾಪಗಳಾಗಿವೆ. ರಾಷ್ಟ್ರವು ಹಲವು ವರ್ಷಗಳಿಂದ ಹಿಂದುಳಿಯಲು ಇವುಗಳೇ ಕಾರಣ ಎಂದಿದ್ದಾರೆ.
ನಂತರ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾತನಾಡಿ , ಬಿಜೆಪಿಯ ಅಭಿವೃದ್ಧಿ ಪರ ರಾಜಕಾರಣಕ್ಕೆ ರಾಷ್ಟ್ರದ ಜನರು ಸಮ್ಮತಿ ಸೂಚಿಸಿದ್ದಾರೆ. ಹಾಗಾಗಿ ಬಿಜೆಪಿ ಚುನಾವಣೆಗಳಲ್ಲಿ ಸರಣಿ ಜಯವನ್ನು ಕಾಣುತ್ತಿದೆ. ಕುಟುಂಬ ರಾಜಕಾರಣ, ಜಾತಿ ರಾಜಕಾರವನ್ನ ಅಂತ್ಯಗೊಳ್ಳುತ್ತಿವೆ ಎಂದರು.