Andhra fire accident : ಫಾರ್ಮಾ ಕಂಪನಿ ಅಗ್ನಿ ಅವಘಡ 5 ಮಂದಿ ಸಾವು…
ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ಪರವಾಡ ಫಾರ್ಮಾ ಸಿಟಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಲಾರಸ್ ಫಾರ್ಮಾ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಅವಘಡದಲ್ಲಿ ಗಾಯಗೊಂಡ ನಾಲ್ವರು ಕೆಜಿಎಚ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮತ್ತು ಒಬ್ಬರು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಲಾರಸ್ ಫಾರ್ಮಾ ಕಂಪನಿಯ ಘಟಕದ ಎಂಬಿ 6 ಬ್ಲಾಕ್ನಲ್ಲಿರುವ ರಿಯಾಕ್ಟರ್ ಅಡಿಯಲ್ಲಿ ರಬ್ಬರ್ ಅಂಟಿಕೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಿಸಿದ್ದರಿಂದ ಕಾರ್ಮಿಕರು ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾರೆ. ಕೂಡಲೇ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಖಮ್ಮಂ ಜಿಲ್ಲೆಯ ರಾಂಬಾಬು, ಗುಂಟೂರು ಜಿಲ್ಲೆಯ ರಾಜೇಶ್ ಬಾಬು, ರಂಗಾರೆಡ್ಡಿ ಜಿಲ್ಲೆಯ ಸತೀಶ್, ಅನಕಾಪಲ್ಲಿ ಜಿಲ್ಲೆಯ ರಾಮಕೃಷ್ಣ ಮತ್ತು ಚೋಡವರಂ ಕ್ಷೇತ್ರದ ವೆಂಕಟರಾವ್ ಬೆಂಕಿಗೆ ಆಹುತಿಯಾಗಿದ್ದಾರೆ.
ಘಟನೆಯ ಕುರಿತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಸಿಎಂ ಜಗನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಪರಿಹಾರ ಘೋಷಿಸಲಾಗಿದೆ. ಸಿಎಂ ಜಗನ್ ಆದೇಶದ ಪ್ರಕಾರ ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಗಾಯಾಳುಗಳಿಗೆ ತುರ್ತು ಮತ್ತು ಉತ್ತಮ ಚಿಕಿತ್ಸೆ ನೀಡಲು ಸಿಎಂ ಜಗನ್ ಆದೇಶಿಸಿದರು. ಲಾರಸ್ ಫಾರ್ಮಾ ಸಿಟಿಯಲ ಬೆಂಕಿ ಅವಘಡದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
Andhra fire accident : Pharma company fire; 5 people died