ದೇಶದಲ್ಲಿ ಹಣದುಬ್ಬರ ವೇಗವಾಗಿ ಹೆಚ್ಚುತ್ತಿದೆ. ಟೊಮೆಟೋದಿಂದ ಹಿಡಿದು ಎಲ್ಲ ತರಕಾರಿ ಹಾಗೂ ಆಹಾರ ದಿನಸಿ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಮಧ್ಯೆ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಸಂಗತಿ ಬಹಿರಂಗವಾಗಿದೆ.
ತರಕಾರಿ ಬೆಲೆಗಳು ಗಗನಕ್ಕೆ ಏರಿಕೆಯಾಗಿರುವುದರಿಂದಾಗಿ ಜುಲೈ ಹಾಗೂ ಆಗಷ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಮತ್ತೆ ಶೇ. 6ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಪಾನಿನ ಬ್ರೋಕರೇಜ್ ಸಂಸ್ಥೆ ನೊಮುರಾ ಹೇಳಿದ್ದಾರೆ.
ಒಂದುವೇಳೆ ವರದಿಯಂತೆ ಸಂಭವಿಸಿದರೆ ಇದು ರಿಸರ್ವ್ ಬ್ಯಾಂಕ್ ನ ತೃಪ್ತಿದಾಯಕ ಮಟ್ಟಕ್ಕಿಂತ ಹೆಚ್ಚಾಗಿರುತ್ತದೆ. ಚಿಲ್ಲರೆ ಹಣದುಬ್ಬರವನ್ನು ಶೇ. 2ರಿಂದ 4ರ ವ್ಯಾಪ್ತಿಯಲ್ಲಿ ಇರಿಸುವ ಜವಾಬ್ದಾರಿಯನ್ನು ಸರ್ಕಾರವು ರಿಸರ್ವ್ ಬ್ಯಾಂಕ್ ಗೆ ವಹಿಸಿದೆ. ಹೀಗಾಗಿ ಆಹಾರ ಉತ್ಪನ್ನಗಳ ಪೂರೆಕೆ ಸುಧಾರಿಸುಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು.
ಸರ್ಕಾರವು ಬಾಸ್ಮತಿ ಹೊರತಾದ ಬಿಳಿ ಅಕ್ಕಿ ರಫ್ತನ್ನು ನಿಷೇಧಿಸಿದೆ. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಸರ್ಕಾರದ ರಾಜಕೀಯ ಆದ್ಯತೆಯಾಗುತ್ತಿದೆ. ಹಣದುಬ್ಬರ ಜೂನ್ ನಲ್ಲಿ ಶೇ. 4.81ಕ್ಕೆ ಏರಿಕೆಯಾಗಿದ್ದು, ಮೇ ತಿಂಗಳಲ್ಲಿ ಶೇ. 4.31ರಷ್ಟಿತ್ತು. ಇದಕ್ಕೆ ಆಹಾರ ಉತ್ಪನ್ನಗಳ ಬೆಲೆ ಏರಿಕೆ ಕಾರಣ ಎಂದು ಹೇಳಲಾಗುತ್ತಿದೆ.