ಹುಬ್ಬಳ್ಳಿ: ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಕರುವಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ.
ಇಲ್ಲಿಯ(Hubballi) ಆನಂದ ನಗರದ ಹತ್ತಿರ ಇರುವ ಗೋಶಾಲೆಯಲ್ಲಿ ತಾಯಿಯೊಂದಿಗೆ ಕಾಲು ಕಳೆದುಕೊಂಡಿದ್ದ ಕರುವಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಕಾಲು ಕಳೆದುಕೊಂಡು ಓಡಾಡಲು ಬಾರದ ಕರುವನ್ನು ವಿಶ್ವ ಹಿಂದೂ ಪರಿಷತ್ತಿನ ಗೋ ಶಾಲೆಗೆ ಕರೆದುಕೊಂಡು ಬರಲಾಗಿತ್ತು. ಸದ್ಯ ಮಹಾವೀರ್ ಲಿಂಬ್ ಸೆಂಟರ್ನಿಂದ ಆಕಳ ಕರುವಿಗೆ ಕೃತಕ ಕಾಲು ಜೋಡಿಸಲಾಗಿದೆ.
ಕಿಮ್ಸ್ನ ನುರಿತ ತಜ್ಞರು ಈ ಮಹಾನ್ ಕಾರಯ್ ಮಾಡಿದ್ದಾರೆ. ಒಂದು ವಾರಗಳ ನಿರಂತರವಾಗಿ ಶ್ರಮ ವಹಿಸಿ ಕರುವಿಗೆ ಕಾಲು ಜೋಡಿಸಿದ್ದಾರೆ. ಕರುವಿನ ನಾಲ್ಕು ಕಾಲುಗಳ ಅಳತೆ ತಗೆದುಕೊಂಡು, ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂಲಕ ಕಾಲು ಸಿದ್ಧಪಡಿಸಿದ್ದಾರೆ.
ಇತ್ತೀಚೆಗೆ ರೈಲ್ವೆ ಅಪಘಾತದಲ್ಲಿ ತಾಯಿ ಆಕಳು ಸಾವನ್ನಪ್ಪಿ, ಕರು ಒಂದು ಕಾಲು ಕಳೆದುಕೊಂಡಿತ್ತು. ಕರುವನ್ನು ಪಶು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಂತರ ಅದನ್ನು ಹುಬ್ಬಳ್ಳಿಯ ಗೋಶಾಲೆಗೆ ಸೇರಿಸಲಾಗಿತ್ತು.