ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮತ್ತೊಮ್ಮೆ ವಿಸ್ವಾಸ ಮತ ಗೆದ್ದಿದ್ದಾರೆ.
ಆಪ್ ಶಾಸಕರನ್ನು ಆಮಿಷವೊಡ್ಡಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪದ ಬೆನ್ನಲ್ಲಿಯೇ ಒಂದೇ ಅವಧಿಯಲ್ಲಿಯೇ ಮೂರನೇ ಬಾರಿ ವಿಶ್ವಾಸ ಮತ ಗೆದ್ದಿದ್ದಾರೆ. ಧ್ವನಿ ಮತದ ಮೂಲಕ ವಿಶ್ವಾಸದ ನಿರ್ಣಯವನ್ನು ಅಂಗೀಕರಿಸಲಾಯಿತು.
ಎಎಪಿಯ 62 ಶಾಸಕರ ಪೈಕಿ 54 ಜನ ಹಾಜರಿದ್ದರು. ಈ ವೇಳೆ ಮಾತನಾಡಿದ ಕೇಜ್ರಿವಾಲ್, ನಮಗೆ ಕಿರುಕುಳ ನೀಡಲಾಗುತ್ತಿದೆ. ಆಪ್ ಗೆ ಬಿಜೆಪಿ ಪೈಪೋಟಿಯಾಗಿದೆ. 2029 ರ ಚುನಾವಣೆಯಲ್ಲಿ ದೇಶವನ್ನು ಬಿಜೆಪಿಯಿಂದ ಆಪ್ ಮುಕ್ತಗೊಳಿಸುತ್ತದೆ ಎಂದು ಹೇಳಿದರು.
70 ಸದಸ್ಯರ ಸದನದಲ್ಲಿ 62 ಶಾಸಕರನ್ನು ಆಮ್ ಆದ್ಮಿ ಹೊಂದಿದೆ. ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿ 8 ಸ್ಥಾನ ಹೊಂದಿದೆ. ಈ ಪೈಕಿ 7 ಜನರು ಅಮಾನತು ಆಗಿದ್ದಾರೆ.