ರಾಮನಗರ : ನಾನು ಸವಾಲ್ ಹಾಕಿ ಹೇಳ್ತೀನಿ ಅವರ ಕೈಯಲ್ಲಿ ಮೇಕೆದಾಟು ಅನುಷ್ಠಾನ ಮಾಡಲು ಆಗಲ್ಲ. ನಾವು ಗಂಡಸರಾಗಿ ಇರೋದಕ್ಕೆ ಅದನ್ನ ಅನುಷ್ಠಾನ ಮಾಡ್ತೀವಿ, ನೀವು ಗಂಡಸರಾಗಿದ್ದರೇ ಅನುಷ್ಠಾನ ಮಾಡಿ ಎಂದು ಸಚಿವ ಅಶ್ವಥ್ ನಾರಾಯಣ್ ಗುಡುಗಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ವಿಚಾರಚಾಗಿ ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುವ ಗಂಡಸ್ತನ ಇರೋದು ಬಿಜೆಪಿಯಲ್ಲಿ. ನಮಗೆ ಗಂಡಸ್ತನ ತಾಕತ್ತೂ ಇದೆ. ನಿಮ್ಮ ಕೈಯಲ್ಲಿ ಆಗಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಟಾಂಗ್ ನೀಡಿದರು.
ಮೇಕೆದಾಟು ಅನುಷ್ಠಾನ ಮಾಡ್ತೀವಿ ಬಿಜೆಪಿ ಎಂದು ಅವರಿಗೆ ಗೊತ್ತಿದೆ. ಅದಕ್ಕೆ ಅವರು ವಿರೋಧ ಮಾಡಿ ರಾಜಕೀಯ ಮಾಡ್ತಿದ್ದಾರೆ. ಶಿವಕುಮಾರ್ ಅವರಿಗೆ ಅಸ್ತಿತ್ವ ಇಲ್ಲ. ಬಂಡತನ ಇರುವ ವ್ಯಕ್ತಿ ಅಂದ್ರೆ ಅದು ಡಿಕೆ ಶಿವಕುಮಾರ್ ಎಂದು ಕಿಡಿಕಾರಿದರು.
2008 ರಿಂದ ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಎಲ್ಲಾ ಹನ್ನೊಂದು ಜಿಲ್ಲೆಯಲ್ಲಿ ನೀರಾವರಿಯನ್ನ ಮಾಡಿದ್ದೇವೆ. ಲಿಫ್ಟ್ ಇರಿಗೀಷನ್ ಮಾಡಬಹುದು ಅಂತಾ ತೋರಿಸಿದ್ದು ನಮ್ಮ ಸರ್ಕಾರ. ನಮ್ಮ ಸರ್ಕಾರ ಸಂಪೂರ್ಣವಾಗಿ ಭದ್ರವಾಗಿದೆ. 7.5 ಸಾವಿರ ಎಕ್ಟರ್ ಪ್ರದೇಶವನ್ನ ಬದಲಿ ನೀಡಲಿಕ್ಕೆ ಜಾಗ ಗುರುತು ಮಾಡಲಾಗಿದೆ. ಅಲ್ಲಿ ಐದು ಸಾವಿರ ಎಕ್ಟರ್ ಮುಳುಗಡೆಯಾಗಲಿದೆ. ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡ್ತೀವಿ ಅಂತಾ ಯಡಿಯೂರಪ್ಪನವರು ಹೇಳಿದ್ದಾರೆ ನಾವು ಬದ್ಧವಾಗಿದ್ದೇವೆ. ಈ ಕೇಸ್ ನ್ನ ಗೆಲ್ಲಲು ನ್ಯಾಯಾಲಯಲ್ಲೂ ಇದೆ ಅದು ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ಡಿಪಿಆರ್ ಮಾಡಲಿಕ್ಕೆ ಎಷ್ಟು ವರ್ಷ ಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.