ತಮಟೆ ಬಾರಿಸೋದು ನಿಲ್ಲಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ದಾಳಿ
ಬೆಂಗಳೂರು: ತಮಟೆ ಬಡಿಯೋದನ್ನ ನಿಲ್ಲಿಸಿದರೂ ಎಂದು ಪುಂಡರ ಗುಂಪೊಂದು ತಮಟೆಯವರ ಮತ್ತು ಅರ್ಚಕರ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಹಲ್ಲೆ ಮಾಡಿರುವ ಘಟನೆ ತಾವರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಲ್ಲಿಯ ಶ್ರೀ ಶನೇಶ್ವರಸ್ವಾಮಿ ದೇವಾಲಯದ ಬಳಿ ತಡರಾತ್ರಿ ಘಟನೆ ನಡೆದಿದೆ. ಪುಂಡರ ದಳಿಗೆ ದೇವಸ್ಥಾನದ ಅರ್ಚಕ ಶಶಿಕುಮಾರ್, ಬಸವರಾಜ್ ಸೇರಿ ನಾಲ್ಕೈದು ಜನರು ಗಾಯಗೊಂಡಿದ್ದಾರೆ. ತಾವರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?: ನಿನ್ನೇ ಶನಿವಾರದಿಂದ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಜಾತ್ರೆ ಆರಂಭವಾಗಿದೆ. ರಾತ್ರಿ 8 ಜನರ ಯುವಕರ ಗುಂಪು ದೇವಸ್ಥಾನದ ಬಳಿ ಬಂದಿದ್ದಾರೆ. ಅಷ್ಟೇ ಅಲ್ಲದೇ ತಮಟೆ ಹೊಡೆಯುತ್ತಿದ್ದವರನ್ನು ಬೆದರಿಸಿಕೊಂಡು ಡ್ಯಾನ್ಸ್ ಆರಂಭಿಸಿದ್ದಾರೆ.
ಕೆಲಸ ಸಮಯದ ನಂತರ ಸ್ಥಳೀಯರು ಮತ್ತು ದೇವಸ್ಥಾನದವರು ತಮಟೆ ಬಡಿಯೋದನ್ನು ನಿಲ್ಲಿಸಿದ್ದಾರೆ. ನಂತರ ಸ್ಥಳೀಯರು ಮತ್ತು ದೇವಸ್ಥಾನದವರು ‘ಯಾರು ನೀವು ?’ ಎಂದು ಪ್ರಶ್ನಿಸಿದಾಗ ಅಲ್ಲಿಂದ ಯುವಕರು ಜಾಗ ಖಾಲಿ ಮಾಡಿದ್ದಾರೆ, ಮತ್ತೆ ಗ್ಯಾಂಗ್ ನಡುರಾತ್ರಿ ಲಾಂಗು, ಮಚ್ಚು ಸಮೇತ ಬಂದು ಏಕಾಏಕಿ ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ಮಾಡಿದೆ.
ಸದ್ಯ ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದ ತಾವರೆಕೆರೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.