ADVERTISEMENT
Wednesday, April 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಮೊದಲ ಪಂದ್ಯದಲ್ಲಿಯೇ ಹಲವು ದಾಖಲೆಗಳನ್ನು ಪುಡಿಗಟ್ಟಿದ ಬಾಬರ್‌, ಇಫ್ತಿಕರ್‌

ನೇಪಾಳ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಪಾಕ್

Author2 by Author2
August 31, 2023
in Sports, ಕ್ರಿಕೆಟ್
Share on FacebookShare on TwitterShare on WhatsappShare on Telegram

ಏಷ್ಯಾಕಪ್-2023 ಟೂರ್ನಿಗೆ ಭರ್ಜರಿ ಆರಂಭ ಲಭಿಸಿದ್ದು, ನೇಪಾಳದ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲೇ ಪಾಕಿಸ್ತಾನದ ನಾಯಕ ಬಾಬರ್‌ ಆಜಂ ಹಾಗೂ ಇಫ್ತಿಕರ್‌ ಅಹ್ಮದ್‌, ತಮ್ಮ ಭರ್ಜರಿ ಬ್ಯಾಟಿಂಗ್‌ ಮೂಲಕ ಏಕದಿನ ಕ್ರಿಕೆಟ್‌ನ ಹಲವು ದಾಖಲೆಗಳನ್ನ ಮುರಿದಿದ್ದಾರೆ.

ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಈ ಇಬ್ಬರು ತಮ್ಮ ಅತ್ಯುತ್ತಮ ಪ್ರದರ್ಶನದಿಂದ ತಂಡದ ಗೆಲುವಿನಲ್ಲಿ ಮಿಂಚಿದರು. ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಬಾಬರ್‌ ಆಜಂ, 131 ಎಸೆತಗಳಲ್ಲಿ 151 ರನ್‌ಗಳಿಸಿ ಅಬ್ಬರಿಸಿದರೆ. ಇಫ್ತಿಕರ್‌ ಅಹ್ಮದ್‌, 71 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 109 ರನ್‌ಗಳಿಸಿ ಶತಕದ ಸಂಭ್ರಮ ಆಚರಿಸಿದರು. ಇವರಿಬ್ಬರ ಈ ಪ್ರದರ್ಶನದ ನೆರವಿನಿಂದ 342 ರನ್‌ಗಳಿಸಿದ ಪಾಕಿಸ್ತಾನ, ಬಳಿಕ ನೇಪಾಳ ತಂಡವನ್ನ 104 ರನ್‌ಗಳಿಕೆ ಆಲೌಟ್‌ ಮಾಡುವ ಮೂಲಕ 238 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆದರೆ ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಬಾಬರ್‌ ಆಜಂ ಹಾಗೂ ಇಫ್ತಿಕರ್‌ ಅಹ್ಮದ್‌, ಏಕದಿನ ಕ್ರಿಕೆಟ್‌ನ ಹಲವು ದಾಖಲೆಗಳನ್ನ ಮುರಿದಿದ್ದಾರೆ.

Related posts

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

April 10, 2026
ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

March 29, 2026

ಬಾಬರ್‌ ಆಜಂ:
ಪಾಕಿಸ್ತಾನದ ನಾಯಕ ಬಾಬರ್ ಅಜಂ, ನೇಪಾಳ ವಿರುದ್ಧ ಗಳಿಸಿದ 151 ರನ್‌, ಏಷ್ಯಾಕಪ್ ODI ಇತಿಹಾಸದಲ್ಲಿ ಪಾಕಿಸ್ತಾನಿ ಬ್ಯಾಟರ್‌ ಕಲೆಹಾಕಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಈ ಹಿಂದೆ 2004ರಲ್ಲಿ ಹಾಂಗ್ ಕಾಂಗ್ ವಿರುದ್ಧ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಯೂನಿಸ್‌ ಖಾನ್‌, 144 ರನ್‌ಗಳಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇನ್ನೂ ಏಷ್ಯಾಕಪ್‌ನ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನಂತರದಲ್ಲಿ ವೈಯಕ್ತಿಕ 150ಕ್ಕೂ ಹೆಚ್ಚು ರನ್‌ಗಳಿಸಿದ ಎರಡನೇ ಬ್ಯಾಟರ್‌ ಎನಿಸಿದ್ದಾರೆ. ಈ ಹಿಂದೆ ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಕೊಹ್ಲಿ, 2012ರಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 183 ರನ್‌ಗಳಿಸಿದ್ದರು.

ಇದಷ್ಟೇ ಅಲ್ಲದೇ ಪಾಕ್‌ ನಾಯಕ ಬಾಬರ್‌ ಆಜಂ, ಟೀಂ ಇಂಡಿಯಾದ ಚೇಸ್‌ ಮಾಸ್ಟರ್‌ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದಿದ್ದಾರೆ. ಏಷ್ಯಾ ಕಪ್‌ನ ಏಕದಿನ ಪಂದ್ಯದಲ್ಲಿ ನಾಯಕನಾಗಿ ಗರಿಷ್ಠ ವೈಯಕ್ತಿಕ ಸ್ಕೋರ್ ಹೊಂದಿದ್ದ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿತ್ತು. ಬಾಂಗ್ಲಾದೇಶದ ವಿರುದ್ಧ 2014ರಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 136 ರನ್‌ಗಳಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಆದರೆ ನೇಪಾಳ ವಿರುದ್ಧದ ಪಂದ್ಯದಲ್ಲಿ 151 ರನ್‌ಗಳಿಸುವ ಮೂಲಕ ಬಾಬರ್‌ ಈ ದಾಖಲೆ ಮುರಿದಿದ್ದಾರೆ. ಈ ನಡುವೆ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 19ನೇ ಶತಕ ದಾಖಲಿಸಿದ ಬಾಬರ್‌, ಸೈಯದ್‌ ಅನ್ವರ್‌(20 ಶತಕ) ನಂತರದಲ್ಲಿ ಹೆಚ್ಚು ಏಕದಿನ ಶತಕಗಳನ್ನ ಬಾರಿಸಿರುವ ದಾಖಲೆ ಹೊಂದಿದ್ದಾರೆ.

ಇಫ್ತಿಕರ್‌ ಅಹ್ಮದ್‌:
ಮತ್ತೊಂದೆಡೆ ಇಫ್ತಿಕರ್‌ ಅಹ್ಮದ್‌ ಸಹ ಕೆಲವು ದಾಖಲೆ ಬರೆದಿದ್ದಾರೆ. ನೇಪಾಳ ವಿರುದ್ಧ 109* ರನ್‌ಗಳಿಸಿ ಶತಕದ ಸಂಭ್ರಮ ಆಚರಿಸಿಕೊಂಡ ಇಫ್ತಿಕರ್‌, ಆ ಮೂಲಕ ಏಷ್ಯಾಕಪ್ ODIಗಳಲ್ಲಿ 6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದ ಬ್ಯಾಟರ್‌ ಗಳಿಸಿದ 3ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಕಲೆಹಾಕಿದ್ದಾರೆ. ಈ ಮೊದಲು ಶಾಹಿದ್ ಅಫ್ರಿದಿ, 2010ರಲ್ಲಿ ಬಾಂಗ್ಲಾದೇಶ ವಿರುದ್ಧ 124 ರನ್‌ಗಳಿಸಿದ್ದರೆ. ಅಲೋಕ್ ಕಪಾಲಿ, 2008ರಲ್ಲಿ ಭಾರತದ ವಿರುದ್ಧ 115 ರನ್‌ಗಳಿಸಿದ್ದರು.‌

ಅಲ್ಲದೇ ಬಾಬರ್ ಅಜಂ ಮತ್ತು ಇಫ್ತಿಕರ್ ಅಹ್ಮದ್ ಅವರ 214 ರನ್‌ಗಳ ಜೊತೆಯಾಟ ಏಷ್ಯಾಕಪ್ ODI ಇತಿಹಾಸದಲ್ಲಿ 3ನೇ ಗರಿಷ್ಠ ಜೊತೆಯಾಟ ಆಗಿದೆ. ಈ ಮೊದಲ ಮೊಹಮ್ಮದ್ ಹಫೀಜ್ ಮತ್ತು ನಾಸಿರ್ ಜಮ್ಶೆಡ್ 2012ರಲ್ಲಿ ಭಾರತದ ವಿರುದ್ಧ 224 ರನ್‌ಗಳ ಜೊತೆಯಾಟದ ದಾಖಲೆ ಹೊಂದಿದ್ದಾರೆ. ಜೊತೆಗೆ ಬಾಬರ್ ಅಜಂ ಮತ್ತು ಇಫ್ತಿಕರ್ ಅಹ್ಮದ್ ಅವರ ಜೊತೆಯಾಟ ಏಷ್ಯಾಕಪ್ ODI ಇತಿಹಾಸದಲ್ಲಿ 5ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ದಾಖಲಾದ ಉತ್ತಮ ಜೊತೆಯಾಟವಾಗಿದೆ.

Tags: Asia CupBabar and Iftikhar broke many records in the first matchNepalPAK v NEPPakistansports karnataka
ShareTweetSendShare
Join us on:

Related Posts

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

by Shwetha
April 10, 2026
0

ಐಪಿಎಲ್ 2026ರ ಆವೃತ್ತಿಯು ರೋಚಕ ಪಂದ್ಯಗಳ ಜೊತೆಗೆ ಇದೀಗ ಹೊಸದೊಂದು ವಿವಾದಕ್ಕೆ ಸಾಕ್ಷಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ...

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

ಅಭಿಮಾನಿಗಳಿಂದ ರಕ್ತದಾನ.. RCB ಗೆಲುವಿಗೆ ಶುಭಹಾರೈಕೆ!

by Shwetha
March 29, 2026
0

2026ರ IPLನ ಮೊದಲ ಪಂದ್ಯವು ಬೆಂಗಳೂರಿನಲ್ಲಿ RCB & SRH ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬೆಂಗಳೂರಿನ ಗಿರಿನಗರದ ರಾಷ್ಟೋತ್ಥಾನ ರಕ್ತ ಕೇಂದ್ರದಲ್ಲಿ ನೂರಾರು RCB...

RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

RCB VS SRH : ಚಿನ್ನಸ್ವಾಮಿಯಲ್ಲಿ ಆರ್ ಸಿ ಬಿ ಅಬ್ಬರ ಕೊಹ್ಲಿ ಪಡಿಕ್ಕಲ್ ಜುಗಲ್ಬಂದಿಗೆ ಹೈದರಾಬಾದ್ ಧೂಳೀಪಟ

by Shwetha
March 29, 2026
0

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹನ್ನೊಂದು ತಿಂಗಳ ಬಳಿಕ ಮತ್ತೆ ಕ್ರಿಕೆಟ್ ಹಬ್ಬ ಕಳೆಗಟ್ಟಿದೆ. ಮೈದಾನದೆಲ್ಲೆಡೆ ಕೆಂಪು ಸಾಗರವೇ ಹರಿದುಬಂದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ...

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

by Shwetha
March 19, 2026
0

ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ 2026ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಐತಿಹಾಸಿಕ ಜಯ ಸಾಧಿಸುವ ಮೂಲಕ...

vvs lakshman and rahul dravid

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..!

by admin
March 16, 2026
0

ಅಹಂಕಾರದ ಪತನ.. ಆತ್ಮವಿಶ್ವಾಸದ ಉದಯ..! ಲಕ್ಷ್ಮಣ್ -ದ್ರಾವಿಡ್ ಮಹೋನ್ನತ ಇನಿಂಗ್ಸ್ ಗೆ ಬೆಳ್ಳಿ ಗರಿಯ ಹರುಷ..! ಅದು 2001. ಮಾರ್ಚ್ 15. ಭಾರತ - ಆಸ್ಟ್ರೇಲಿಯಾ ನಡುವಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram