ಚೆನ್ನೈ : ಗಾನಗಂಧರ್ವ ಎಸ್ಪಿ ಬಾಲಸುಬ್ರಮಣ್ಯಂ ಅವರಿಗೆ ಕರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಚೆನ್ನೈ ಎಂಜಿಎಂ ಆಸ್ಪತ್ರೆಗೆ ಆಗಸ್ಟ್ 5ರಂದು ದಾಖಲಿಸಲಾಗಿತ್ತು, ಅಂದಿನಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಈಗಾಗಲೇ 45 ದಿನಗಳೇ ಕಳೆದುಹೋಗಿದೆ. ಇನ್ನೂ ಕೆಲ ದಿನಗಳಿಂದ ಎಸ್ ಪಿಬಿ ಅವರ ಆರೋಗ್ಯ ತೀರ ಹದಗೆಟ್ಟಿತ್ತು. ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ ಎನ್ನುವುದು ವೈದ್ಯರ ಉತ್ತರವಾಗಿತ್ತು. ಆಗಾಗ ಅವರ ಆರೋಗ್ಯದ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಇನ್ನೂ ಬಾಲಸುಬ್ರಹ್ಮಣ್ಯಂ ಅವರ ಬೇಗ ಗುಣಮುಖರಾಗಲಿ ಎಂದು ಅವರ ಕೋಟ್ಯಾಂತರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದು, ಇದೀಗ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ.
ಹೌದು ಸೆ. 16 ರಿಂದ ಎಸ್ ಪಿ ಬಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಸ್ವತಃ ಅವರ ಪುತ್ರ ಚರಣ್ ಅವರು ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳ ಪ್ರೀತಿ ಪ್ರಾರ್ಥನೆಯಿಂದ “ಅಪ್ಪ ಸುಧಾರಿಕೊಳ್ಳುತ್ತಿದ್ದಾರೆ” ಎಂದು ಚರಣ್ ತಿಳಿಸಿದ್ದಾರೆ.
“ಈ ಮೊದಲೇ ಹೇಳಿದಂತೆ ಅಪ್ಪನ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆಗಳಿಲ್ಲ. ಆದರೆ, ಈ ಮೊದಲಿದಷ್ಟು ಆತಂಕ ಈಗಿಲ್ಲ. ಎಲ್ಲವೂ ನಾರ್ಮಲ್ ಆಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಇನ್ನೂ ಕಾಣಬೇಕಿದೆ. ಶ್ವಾಸಕೋಶದ ಚೇತರಿಕೆ ಸದ್ಯಕ್ಕೆ ಬಹುಮುಖ್ಯವಾಗಿದೆ. ವೆಂಟಿಲೇಟರ್ ಮೂಲಕವೇ ಅವರಿನ್ನೂ ಉಸಿರಾಡುತ್ತಿದ್ದಾರೆ. ವೈದ್ಯರು ನಿತ್ಯ 15ರಿಂದ 20 ನಿಮಿಷ ಫಿಸಿಯೋಥೆರಪಿ ಮಾಡಿಸುತ್ತಿದ್ದಾರೆ. ಶುಕ್ರವಾರದಿಂದ ಆಹಾರ ಸೇವನೆ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
https://www.instagram.com/tv/CFUZicqBIkT/?utm_source=ig_web_button_share_sheet