Bangalore | ಮಲಗುವ ಜಾಗದ ವಿಚಾರಕ್ಕೆ ಬೆಂಗಳೂರಲ್ಲಿ ಕೊಲೆ
ಬೆಂಗಳೂರು : ದೇವಸ್ಥಾನದ ಬಳಿ ಮಲಗುವ ಜಾಗದ ವಿಚಾರಕ್ಕೆ ಬೆಂಗಳೂರಿನ ಯಶವಂತಪುರದಲ್ಲಿ ವ್ಯಕ್ತಿಯನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ.
ಶಂಕರಪ್ಪ ಮೃತ ದುರ್ದೈವಿಯಾಗಿದ್ದು, ಪ್ರಕಾಶ್ ಕೊಲೆ ಆರೋಪಿಯಾಗಿದ್ದಾರೆ.
ಕೊಲೆಯ ದೃಶ್ಯವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಯಶವಂತಪುರ ಪೈಪ್ ಲೈನ್ ರಸ್ತೆಯಲ್ಲಿ ಕೊಲೆ ನಡೆದಿದೆ.
![bangalore-Murder](http://saakshatv.com/wp-content/uploads/2022/09/murder-1.jpg)
ಸೆಪ್ಟೆಂಬರ್ 13 ರಂದು ವರಸಿದ್ಧಿವಿನಾಯಕ ದೇವಸ್ಥಾನದ ಮುಂದೆ ಕೊಲೆ ಮಾಡಲಾಗಿದೆ.
ಕೊಲೆಗಾರ ಪ್ರಕಾಶ್ ಪ್ರತಿನಿತ್ಯ ದೇವಸ್ಥಾನದ ಪೌಳಿಯಲ್ಲಿ ಮಲಗುತ್ತಿದ್ದ.
ಆ ಜಾಗದಲ್ಲಿ ಶಂಕರಪ್ಪ ಮಲಗಿದ್ದಾನೆ ಎಂದು ಕೆಂಡಾಮಂಡಲನಾದ ಪ್ರಕಾಶ, ದೊಣ್ಣೆಯಿಂದ ಹೊಡೆದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಶಂಕರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ಆರೋಪಿ ಪ್ರಕಾಶನನ್ನ ಬಂಧಿಸಲಾಗಿದೆ.