ಗ್ರಾಹಕರೇ ಗಮನಿಸಿ | 4 ದಿನ ರಜೆ.. bank ಕೆಲಸ ಇಂದೇ ಮುಗಿಸಿಕೊಳ್ಳಿ
ನವದೆಹಲಿ : ಸಾರ್ವಜನಿಕರೇ ಗಮನಿಸಿ..! ನಿಮ್ಮ bank ಕೆಲಸಗಳನ್ನ ಇಂದೇ ಮುಗಿಸಿಕೊಳ್ಳೋದು ಒಳ್ಳೆಯದು. ಇವತ್ತು ಯಾಮಾರಿದ್ರೆ ನೀವು ಬ್ಯಾಂಕ್ ಗಾಗಿ ನಾಲ್ಕು ದಿನ ಕಾಯಲೇಬೇಕು.
ಯಾಕೆಂದ್ರೆ ಸಾರ್ವಜನಿಕ ವಲಯದ bank ಗಳ ಖಾಸಗೀಕರಣ ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮಾರ್ಚ್ 15 ಮತ್ತು 16ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಹೀಗಾಗಿ ಬ್ಯಾಂಕ್ ಗಳಿಗೆ ನಾಲ್ಕು ದಿನ ರಜೆ ಇರಲಿದೆ.
ನಾಳೆ ಮಾರ್ಚ್ 13 ಎರಡನೇ ಶನಿವಾರವಾಗಿದ್ದು, ಮಾರ್ಚ್ 14 ಭಾನುವಾರ ಸಾಮಾನ್ಯ ರಜೆ ಇದೆ.
ಮಾರ್ಚ್ 15 ಮತ್ತು 16ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಹೀಗಾಗಿ ಬ್ಯಾಂಕ್ ಗಳಿಗೆ ನಾಲ್ಕು ದಿನ ರಜೆ ಇರಲಿದೆ.
ಮುಷ್ಕರಕ್ಕೆ ಕಾರಣ ಏನು?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ನಲ್ಲಿ ದೇಶದಲ್ಲಿ 1.75 ಲಕ್ಷ ಕೋಟಿ ರೂ. ಗಳಿಸುವ ಸರ್ಕಾರದ ಹೂಡಿಕೆಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು.
ಇದನ್ನ ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮಾರ್ಚ್ 15 ಮತ್ತು 16ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.