ಬ್ಯಾಂಕ್ ವಂಚನೆ ಪ್ರಕರಣ | KSBL ಕಂಪನಿ ಮೇಲೆ ಇಡಿ ದಾಳಿ
ಹೈದರಾಬಾದ್ : ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಪಾರ್ಥಸಾರಥಿ ಕುಟುಂಬಕ್ಕೆ ಸೇರಿದ ಕಾರ್ವೆ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ದಾಳಿ ವೇಳೆ ಸುಮಾರು 700 ಕೋಟಿ ರೂಪಾಯಿ ಷೇರು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಸಿ.ಪಾರ್ಥಸಾರಥಿ ಕುಟುಂಬದವರು, ಹೆಚ್ ಡಿಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್ ಗಳಿಂದ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಸಿ ಪಾರ್ಥಸಾರಥಿಯನ್ನು ಬಂಧಿಸಿದ್ದಾರೆ.